‘ಮೆಡಿಕಲ್ ಡಿಸೈನ್ ಎಕ್ಸಲೆನ್ಸ್’: ಕೊಡಗಿನ ವಿಚಲ್ ತಂಡಕ್ಕೆ 3ನೇ ಸ್ಥಾನ
ಅಮೆರಿಕದ ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೊಡಗಿನ ಪಾಲಂದಿರ ವಿಚಲ್ ಮುತ್ತಣ್ಣ ನೇತೃತ್ವದ ತಂಡ 'ಮೆಡಿಕಲ್ ಡಿಸೈನ್ ಎಕ್ಸಲೆನ್ಸ್' ಪ್ರಶಸ್ತಿ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.
Vijaya Karnataka 20 Jun 2019, 5:00 am
ಮಡಿಕೇರಿ
ಅಮೆರಿಕದ ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೊಡಗಿನ ಪಾಲಂದಿರ ವಿಚಲ್ ಮುತ್ತಣ್ಣ ನೇತೃತ್ವದ ತಂಡ 'ಮೆಡಿಕಲ್ ಡಿಸೈನ್ ಎಕ್ಸಲೆನ್ಸ್' ಪ್ರಶಸ್ತಿ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಅಮೆರಿಕದ ರಾಷ್ಟ್ರಮಟ್ಟದಲ್ಲಿ ನೀಡಲಾಗುವ 'ಬಿಎಂಇ ಐಡಿಯಾ 2019' ಪ್ರಶಸ್ತಿಯನ್ನು ಮೆಡಿಕಲ್ ಕ್ಷೇತ್ರದ ತಂತ್ರಜ್ಞಾನದ ಸಂಶೋಧನೆಗಾಗಿ ನೀಡಲಾಗುತ್ತದೆ.
ಜೂ.11ರಂದು ನ್ಯೂಯಾರ್ಕ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಚಲ್ ಪಿಎಚ್.ಡಿ ಮಾಡುತ್ತಿರುವ ಯೂನಿವರ್ಸಿಟಿ ಆಫ್ ವಿಚಿಗನ್ ಇನ್ನೋವೇಷನ್ ತಂಡ ಪಾಲ್ಗೊಂಡಿತ್ತು. ಕಲೈಡೋಸ್ಕೋಪ್ ವೃದ್ಧಾಪ್ಯದಲ್ಲಿ ಕಾಡುವ 'ಮ್ಯಾಕ್ಯುಲರ್ ಡೀಜನರೇಷನ್' (ಕಣ್ಣಿನ ಸಮಸ್ಯೆ)ಗೆ ಕಾರಣ ಏನು ಎಂದು ಪತ್ತೆ ಹಚ್ಚುವ ಯಂತ್ರವನ್ನು ಆವಿಷ್ಕರಿಸಿರುವುದು ವಿಚಲ್ ಹಾಗೂ ಅವರ ತಂಡದ ಸಾಧನೆ. ಪ್ರಸ್ತುತ ಕಣ್ಣಿನ ಈ ಸಮಸ್ಯೆಯನ್ನು ಪತ್ತೆಹಚ್ಚುವ ಯಂತ್ರ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಪ್ರಸ್ತುತ ಸಮಸ್ಯೆಗೆ ಔಷಧವನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ವಿಚಲ್ ಮತ್ತು ತಂಡ ಇದೆ.
ವಿಚಲ್ ವಿರಾಜಪೇಟೆಯ ಬಲಂಬೇರಿ ಗ್ರಾಮದ ಪಾಲಂದಿರ ಡಿ.ಜಯಾ ಮುತ್ತಣ್ಣ ಮತ್ತು ಮಿಥುನ ದಂಪತಿ ಪುತ್ರಿ. ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನವನ್ನು ಗಳಿಸಿ ನಂತರ ಗೋಣಿಕೊಪ್ಪಲು ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದರು. ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯ ಎಂ.ಟೆಕ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೆ ಗಾಂಧಿಯನ್ ಎಂಗ್ ಟೆಕ್ನಿಕಲ್ ಇನೋವೇಷನ್ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು 2016ರಲ್ಲಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಿಂದ ಪಡೆದುಕೊಂಡಿರುವುದು ವಿಚಲ್ ಅವರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.
ಅಮೆರಿಕದ ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೊಡಗಿನ ಪಾಲಂದಿರ ವಿಚಲ್ ಮುತ್ತಣ್ಣ ನೇತೃತ್ವದ ತಂಡ 'ಮೆಡಿಕಲ್ ಡಿಸೈನ್ ಎಕ್ಸಲೆನ್ಸ್' ಪ್ರಶಸ್ತಿ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಅಮೆರಿಕದ ರಾಷ್ಟ್ರಮಟ್ಟದಲ್ಲಿ ನೀಡಲಾಗುವ 'ಬಿಎಂಇ ಐಡಿಯಾ 2019' ಪ್ರಶಸ್ತಿಯನ್ನು ಮೆಡಿಕಲ್ ಕ್ಷೇತ್ರದ ತಂತ್ರಜ್ಞಾನದ ಸಂಶೋಧನೆಗಾಗಿ ನೀಡಲಾಗುತ್ತದೆ.
ಜೂ.11ರಂದು ನ್ಯೂಯಾರ್ಕ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಚಲ್ ಪಿಎಚ್.ಡಿ ಮಾಡುತ್ತಿರುವ ಯೂನಿವರ್ಸಿಟಿ ಆಫ್ ವಿಚಿಗನ್ ಇನ್ನೋವೇಷನ್ ತಂಡ ಪಾಲ್ಗೊಂಡಿತ್ತು. ಕಲೈಡೋಸ್ಕೋಪ್ ವೃದ್ಧಾಪ್ಯದಲ್ಲಿ ಕಾಡುವ 'ಮ್ಯಾಕ್ಯುಲರ್ ಡೀಜನರೇಷನ್' (ಕಣ್ಣಿನ ಸಮಸ್ಯೆ)ಗೆ ಕಾರಣ ಏನು ಎಂದು ಪತ್ತೆ ಹಚ್ಚುವ ಯಂತ್ರವನ್ನು ಆವಿಷ್ಕರಿಸಿರುವುದು ವಿಚಲ್ ಹಾಗೂ ಅವರ ತಂಡದ ಸಾಧನೆ. ಪ್ರಸ್ತುತ ಕಣ್ಣಿನ ಈ ಸಮಸ್ಯೆಯನ್ನು ಪತ್ತೆಹಚ್ಚುವ ಯಂತ್ರ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಪ್ರಸ್ತುತ ಸಮಸ್ಯೆಗೆ ಔಷಧವನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ವಿಚಲ್ ಮತ್ತು ತಂಡ ಇದೆ.
ವಿಚಲ್ ವಿರಾಜಪೇಟೆಯ ಬಲಂಬೇರಿ ಗ್ರಾಮದ ಪಾಲಂದಿರ ಡಿ.ಜಯಾ ಮುತ್ತಣ್ಣ ಮತ್ತು ಮಿಥುನ ದಂಪತಿ ಪುತ್ರಿ. ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನವನ್ನು ಗಳಿಸಿ ನಂತರ ಗೋಣಿಕೊಪ್ಪಲು ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದರು. ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯ ಎಂ.ಟೆಕ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೆ ಗಾಂಧಿಯನ್ ಎಂಗ್ ಟೆಕ್ನಿಕಲ್ ಇನೋವೇಷನ್ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು 2016ರಲ್ಲಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಿಂದ ಪಡೆದುಕೊಂಡಿರುವುದು ವಿಚಲ್ ಅವರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.