ಆ್ಯಪ್ನಗರ

7.25 ಕೆಜಿ ಗಾಂಜಾ ವಶ, ಆರೋಪಿ ಬಂಧನ

ಮನೆ ಹಿಂಭಾಗ ಗಾಂಜಾ ಗಿಡ ಬೆಳೆದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದು, 7.25 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.

Vijaya Karnataka 24 May 2019, 9:15 pm
ಕುಶಾಲನಗರ: ಮನೆ ಹಿಂಭಾಗ ಗಾಂಜಾ ಗಿಡ ಬೆಳೆದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದು, 7.25 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.
Vijaya Karnataka Web 7 25 kg of cannabis
7.25 ಕೆಜಿ ಗಾಂಜಾ ವಶ, ಆರೋಪಿ ಬಂಧನ


ಕುಶಾಲನಗರದ ಬೈಚನಹಳ್ಳಿಯ 1ನೇ ಬ್ಲಾಕ್‌ ನಿವಾಸಿ ಪೈಟಿಂಗ್‌ ಕೆಲಸಗಾರ ಮಹಮ್ಮದ್‌ ಅನೀಸ್‌ ಬಂಧಿತ ಆರೋಪಿ. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್‌ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷ ಕ ದಿನೇಶ್‌ ಕುಮಾರ್‌ ನೇತೃತ್ವದಲ್ಲಿ ಕುಶಾಲನಗರ ಪೊಲೀಸ್‌ ಠಾಣಾಧಿಕಾರಿ ಜಗದೀಶ್‌, ಅಪರಾಧ ಪತ್ತೆದಳದ ಸಜಿ, ದಯಾನಂದ, ರವೀಂದ್ರ, ಉಮೇಶ್‌, ಚಂದ್ರಶೇಖರ್‌, ಸುಧೀಶ್‌ ಕುಮಾರ್‌, ಜೋಸೆಫ್‌, ಪ್ರಕಾಶ್‌, ಚಾಲಕರಾದ ಅರುಣ್‌, ಗಣೇಶ್‌, ಪ್ರವೀಣ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ