ಆ್ಯಪ್ನಗರ

ಟೇಕಾಫ್‌ ಆಗದ ರಾಜ್ಯ ಸರಕಾರ

ಟೇಕಾಫ್‌ ಆಗದ ರಾಜ್ಯ ಸರಕಾರ

Vijaya Karnataka 13 Nov 2019, 5:00 am
ಮಡಿಕೇರಿ: ಅಧಿಕಾರಕ್ಕೆ ಬಂದು ನೂರು ದಿನಗಳಾದರೂ ಟೇಕಾಫ್‌ ಆಗದ ರಾಜ್ಯದ ಬಿಜೆಪಿ ಸರಕಾರ ಇನ್ನೂ ಕೋಮಾದಲ್ಲಿಯೇ ಇದೆ ಎಂದು ಮಾಜಿ ಸಚಿವ ಯು.ಟಿ. ಖಾದರ್‌ ಲೇವಡಿ ಮಾಡಿದ್ದಾರೆ.
Vijaya Karnataka Web a state government that does not take off
ಟೇಕಾಫ್‌ ಆಗದ ರಾಜ್ಯ ಸರಕಾರ


ಜಿಲ್ಲಾಕಾಂಗ್ರೆಸ್‌ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿಮಂಗಳವಾರ ಮಾತನಾಡಿದ ಅವರು, ''ಈ ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ಕರುಣೆ ಇಲ್ಲ. ಅವರ ಕಷ್ಟಗಳಿಗೆ ಸ್ಪಂದಿಸುತಿಲ್ಲ. ಒಟ್ಟಾರೆ ಮಾನವೀಯತೆಯೇ ಇಲ್ಲದ ಸರಕಾರ'' ಎಂದರು.

''ಸರ್ವರಿಗೆ ಸಮಬಾಳು ಆಶಯದಲ್ಲಿಹಿಂದಿನ ಸರಕಾರ ಹಲವು ಯೋಜನೆಗಳನ್ನು ರೂಪಿಸಿತ್ತು. ಆದರೆ ಬಿಜೆಪಿ ಸರಕಾರ ಅದನ್ನು ಮುಂದುವರಿಸುವಲ್ಲಿಆಸಕ್ತಿ ತೋರಿಸುತ್ತಿಲ್ಲ. ಬಿಪಿಎಲ್‌ ಕಾರ್ಡ್‌ ರದ್ದು ಮಾಡುವಲ್ಲಿಇರುವ ಉತ್ಸಾಹ ಬದಲಿ ಕಾರ್ಡ್‌ ನೀಡುವಲ್ಲಿಕಂಡುಬರುತ್ತಿಲ್ಲ. ಪಡಿತರ ಚೀಟಿದಾರರಿಗೆ ಕೊಡುತ್ತಿದ್ದ ಅಕ್ಕಿಯ ಪ್ರಮಾಣ ಕಡಿಮೆ ಮಾಡಲಾಗಿದೆ. ಪೌಷ್ಟಿಕ ಆಹಾರ, ಹೆಸರು ಕಾಳು, ತೊಗರಿ ಬೇಳೆ ಪೂರೈಸುವುದನ್ನೂ ನಿಲ್ಲಿಸಲಾಗಿದೆ. ನಮ್ಮ ಸರಕಾರ ಇರುವಾಗ ಆಧಾರ್‌ ಕಾರ್ಡ್‌ ಇದ್ದರೆ ಸಾಕು, ರೇಷನ್‌ ಕಾರ್ಡ್‌ ಕೊಡಲಾಗುತ್ತಿತ್ತು. ಆದರೆ, ಈಗ ಹಲವು ನಿಬಂಧನೆಗಳನ್ನು ವಿಧಿಸಲಾಗುತ್ತಿದೆ,'' ಎಂದು ಆರೋಪಿಸಿದರು.

''ನೆರೆ ಪರಿಹಾರ ವಿತರಣೆಯಲ್ಲೂರಾಜ್ಯ ಸರಕಾರ ವಿಫಲವಾಗಿದೆ. ಜಾಹೀರಾತು ಕೊಡಲು ಇವರ ಬಳಿ ದುಡ್ಡಿದೆ. ಪರಿಹಾರ ವಿತರಿಸಲು ಹಣವಿಲ್ಲ. ಕೇಂದ್ರ ಸರಕಾರದಿಂದ ಅನುದಾನ ಪಡೆಯುವಲ್ಲೂವಿಫಲರಾಗಿದ್ದಾರೆ. ಮುಖ್ಯಮಂತ್ರಿಗೆ ಪ್ರಧಾನಿ ಮಂತ್ರಿ ಭೇಟಿಯಾಗಲೂ ಅವಕಾಶ ಸಿಗುತ್ತಿಲ್ಲ. ರಾಜ್ಯದಿಂದ ಆಯ್ಕೆಯಾದ ಬಿಜೆಪಿಯ 25 ಸಂಸದರೂ ಈ ನಿಟ್ಟಿನಲ್ಲಿಕೆಲಸ ಮಾಡುತ್ತಿಲ್ಲ. ತಾವು ಜನರಿಂದ ಗೆದ್ದಿಲ್ಲ. ಮೋದಿಯಿಂದ ಗೆದ್ದಿದ್ದೇವೆ ಎನ್ನುವ ಸಂದದರ ನಂಬಿಕೆಯೇ ಇದಕ್ಕೆಲ್ಲಾಕಾರಣ,'' ಎಂದು ಖಾದರ್‌ ಆರೋಪಿಸಿದರು.

''ಕಟ್ಟ ಕಡೆಯ ವ್ಯಕ್ತಿಯೂ ನೆಮ್ಮದಿಯ ಜೀವನ ಮಾಡಬೇಕು ಎನ್ನುವುದು ಕಾಂಗ್ರೆಸ್‌ ಧ್ಯೇಯ. ಸ್ವಾರ್ಥಕ್ಕಾಗಿ ಮತ ಕೊಟ್ಟವರ ನಂಬಿಕೆಗೆ ದ್ರೋಹ ಮಾಡಿದವರನ್ನು ಜನ ಮತ್ತೆ ಗೆಲ್ಲಿಸುವುದಿಲ್ಲ. ಹಾಗಾಗಿ ಉಪಚುನಾವಣೆಯಲ್ಲಿಬಹುತೇಕ ಸೀಟುಗಳನ್ನು ಕಾಂಗ್ರೆಸ್‌ ಗೆಲ್ಲುತ್ತದೆ. ತುಂಬಾ ದಿನ ಸರಕಾರವನ್ನು ಬ್ಯಾಲೆನ್ಸ್‌ ಮಾಡಿಕೊಂಡು ನಡೆಸಲು ಸಾಧ್ಯವಿಲ್ಲ. ಹಾಗಾಗಿ ಅದು ಬೇಗನೇ ಬೀಳುತ್ತದೆ,'' ಎಂದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಕೆ.ಕೆ.ಮಂಜುನಾಥ ಕುಮಾರ್‌, ಪಕ್ಷದ ಪ್ರಮುಖರಾದ ರಜಾಕ್‌, ಸೂರಜ್‌, ಮೈನಾ, ಉಸ್ಮಾನ್‌, ವಿ.ಪಿ.ಸುರೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ