ಆ್ಯಪ್ನಗರ

ಎರಡು ದಿನದ ಹಿಂದೆ ಸಾವನ್ನಪ್ಪಿದ್ದ ವಿದ್ಯಾರ್ಥಿ ಪಿಯುಸಿಯಲ್ಲಿ ತೇರ್ಗಡೆ

ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಚೆಟ್ಟಂಗಡ ಅಚಲ್ ಉತ್ತಪ್ಪ ಎಂಬ ಬಾಲಕ ಜುಲೈ ಹನ್ನೆರಡರಂದು ಮನೆ ಸಮೀಪದ ಕೆರಯಲ್ಲಿ ಈಜಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದ. ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದ ಆತ ಫಲಿತಾಂಶಕ್ಕಾಗಿ ಕಾಯುತ್ತಿದ್ದ.

Vijaya Karnataka Web 14 Jul 2020, 5:06 pm
ಕೊಡಗು: ಕಳೆದ ಎರಡು ದಿನದ ಹಿಂದೆ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನ ಪರೀಕ್ಷಾ ಫಲಿತಾಂಶ ಇಂದು ಬಂದಿದ್ದು, ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ.
Vijaya Karnataka Web CHETTANGADA ACHAL UTTAPPA


ಕೊಡಗಿನಲ್ಲಿ ಕೊರೊನಾ ಪ್ರಕರಣ 196ಕ್ಕೆ ಏರಿಕೆ: ಬೆಂಗಳೂರಿನಿಂದ ವಾಪಸಾಗುತ್ತಿರುವ ವಲಸಿಗರು, ಆತಂಕದಲ್ಲಿ ಜನ

ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಚೆಟ್ಟಂಗಡ ಅಚಲ್ ಉತ್ತಪ್ಪ ಎಂಬ ಬಾಲಕ ಜುಲೈ ಹನ್ನೆರಡರಂದು ಮನೆ ಸಮೀಪದ ಕೆರಯಲ್ಲಿ ಈಜಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದ. ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದ ಆತ ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಆದರೆ ವಿಧಿ ಆತನನ್ನು ಪರೀಕ್ಷಾ ಫಲಿತಾಂಶ ಬರುವ ಮೊದಲೇ ಕರೆದೊಯ್ದಿದ್ದು, ಕಳೆದ ಭಾನುವಾರ ಈಜಾಡಲು ಹೋಗಿ ಮೃತಪಟ್ಟಿದ್ದಾನೆ.

ಕೊಡಗಿನಲ್ಲಿ ಮತ್ತೆ 10 ಮಂದಿಯಲ್ಲಿ ಕೊರೊನಾ ಸೋಂಕು: ಸೋಂಕಿತರ ಸಂಖ್ಯೆ 179ಕ್ಕೆ ಏರಿಕೆ

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಬಂದಿದ್ದು, ಚೆಟ್ಟಂಗಡ ಅಚಲ್ ಉತ್ತಪ್ಪ ಪಿಯುಸಿಯಲ್ಲಿ 322 ಅಂಕಗಳನ್ನು ಪಡೆದು ಶೇ.53.66 ಸಾಧನೆ ಮಾಡಿ ತೇರ್ಗಡೆಯಾಗಿದ್ದಾನೆ. ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿರೋ ಆತ, ಕನ್ನಡದಲ್ಲಿ 47, ಇಂಗ್ಲೀಷ್ 68, ಅರ್ಥಶಾಸ್ತ್ 44, ಭೂಗೋಳ 80, ವ್ಯವಹಾರ ಅಧ್ಯಯನ 37 ಮತ್ತು ಅಕೌಂಟೆನ್ಸಿಯಲ್ಲಿ 46 ಅಂಕ ಪಡೆದಿದ್ದಾನೆ.

ಕೊಡಗಿನಲ್ಲಿ ಮುಂಗಾರು ಮಳೆ ಅಬ್ಬರ: ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ

ನೆಮ್ಮಾಲೆ ಗ್ರಾಮದ ಚೆಟ್ಟಂಗಡ ವಿಜು ಮತ್ತು ನಂದು ದಂಪತಿ ಪುತ್ರನಾಗಿದ್ದ ಅಚಲ್ ಉತ್ತಪ್ಪ, ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ. ಇದೀಗ ತಮ್ಮ ಮಗ ಪಿಯುಸಿಯಲ್ಲಿ ತೇರ್ಗಡೆಯಾಗಿರುವ ಖುಷಿಯನ್ನು ಹಂಚಿಕೊಳ್ಳೋಕೆ ಆತನೇ ಇಲ್ಲದಿರುವುದು ತಂದೆ ತಾಯಿಯಲ್ಲಿ ಮತ್ತಷ್ಟು ನೋವನ್ನು ತರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ