ಆ್ಯಪ್ನಗರ

ಎಸಿಬಿ ಬಲೆಗೆ ತಹಸೀಲ್ದಾರ್‌

ಎರಡು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ವಿರಾಜಪೇಟೆ ತಾಲೂಕಿನ ತಹಸೀಲ್ದಾರ್‌ ಪುರಂದರ ತಮ್ಮ ಕಚೇರಿಯಲ್ಲಿಯೇ ಎಸಿಬಿ ಬಲೆಗೆ ಬಿದ್ದಿದ್ದಾರೆ.

Vijaya Karnataka 12 Oct 2019, 5:00 am
ವಿರಾಜಪೇಟೆ (ಕೊಡಗು ಜಿಲ್ಲೆ): ಎರಡು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ವಿರಾಜಪೇಟೆ ತಾಲೂಕಿನ ತಹಸೀಲ್ದಾರ್‌ ಪುರಂದರ ತಮ್ಮ ಕಚೇರಿಯಲ್ಲಿಯೇ ಎಸಿಬಿ ಬಲೆಗೆ ಬಿದ್ದಿದ್ದಾರೆ.
Vijaya Karnataka Web acb trap tahsildar
ಎಸಿಬಿ ಬಲೆಗೆ ತಹಸೀಲ್ದಾರ್‌


ಶುಕ್ರವಾರ ತಮ್ಮ ಕಚೇರಿಯಲ್ಲಿ ಪೊನ್ನಂಪೇಟೆ ಸಮೀಪದ ತೂಚಮಕೇರಿಯ ನರೇಂದ್ರ ಅವರಿಂದ ಭೂ ಪರಿವರ್ತನೆ ಬಾಪ್ತು 2 ಸಾವಿರ ಹಣ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್‌ಪಿ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ದಾಳಿ ನಡೆಸಿ ತಹಸೀಲ್ದಾರ್‌ರನ್ನು ನಗದು ಸಮೇತ ವಶಕ್ಕೆ ಪಡೆಯಲಾಗಿದೆ. ಇವರೊಂದಿಗೆ ವ್ಯವಹಾರದಲ್ಲಿ ಮದ್ಯವರ್ತಿಯಾಗಿದ್ದ ಎನ್ನಲಾದ ಕಚೇರಿ ಸಿಬ್ಬಂದಿ ಜಾಗೃತ್‌ (ಸದಾ) ಅವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನು ಬಂಧಿಸಿರುವ ಅಧಿಕಾರಿಗಳು ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತೂಚಮಕೇರಿಯ ಎಂ.ಎನ್‌.ನರೇಂದ್ರ ತಮ್ಮ 20 ಸೆಂಟು ಭೂಮಿಯ ದಾಖಲಾತಿ ಪರಿವರ್ತನೆ ಮಾಡಲು ಅರ್ಜಿ ಸಲ್ಲಿಸಿದ್ದರು. ಈ ಕಡತ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದ ಬಳಿಕ ಮುಂದಿನ ಪ್ರಕ್ರಿಯೆಗಾಗಿ ತಾಲೂಕು ತಹಸೀಲ್ದಾರ್‌ ಪುರಂದರ ಅವರ ಬಳಿ ಬಂದಿತ್ತು. ಇದಕ್ಕಾಗಿ ನರೇಂದ್ರ ಅವರಿಂದ 15 ಸಾವಿರ ರೂ. ಹಣದ ಬೇಡಿಕೆಯನ್ನು ತಹಸೀಲ್ದಾರ್‌ ಪುರಂದರ ಇಟ್ಟಿದ್ದರು. ಮಾತುಕತೆ ಬಳಿಕ 9,000 ರೂ. ನೀಡುವಂತೆ ಒಪ್ಪಂದವಾಗಿತ್ತು. ಅದರಂತೆ ಈಗಾಗಲೆ 7 ಸಾವಿರ ರೂ ಹಣ ನೀಡಲಾಗಿತ್ತು. ಶುಕ್ರವಾರ ಬಾಕಿ ಎರಡು ಸಾವಿರ ರೂ. ಹಣ ನೀಡುವ ಸಂದರ್ಭ ಎಸಿಬಿಗೆ ನರೇಂದ್ರ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿಹಾಸನ, ಕೊಡಗು ಉಸ್ತುವಾರಿ ಡಿವೈಎಸ್‌ಪಿ ಪೂರ್ಣಚಂದ್ರ ತೇಜಸ್ವಿ ಹಾಗೂ ಕೊಡಗು ವಿಭಾಗದ ವೃತ್ತ ನಿರೀಕ್ಷಕ ಶ್ರೀಧರ್‌ ಹಾಗೂ ಮಹೇಶ್‌ ನೇತೃತ್ವದಲ್ಲಿದಾಳಿ ನಡೆಸಿ ಹಣ ಸಮೇತ ವಶಕ್ಕೆ ಪಡೆದರು. ಈ ಕಾರ್ಯಾಚರಣೆಯಲ್ಲಿಒಟ್ಟು 15 ಜನ ಸಿಬ್ಬಂದಿ ಭಾಗವಹಿಸಿದ್ದರು.

ಆರೋಪಿಯನ್ನು ವಶಕ್ಕೆ ಪಡೆದ ಬಳಿಕ ತಹಸೀಲ್ದಾರ್‌ ಚೇಂಬರ್‌ನಲ್ಲಿಸತತವಾಗಿ ವಿಚಾರಣೆ ನಡೆಸಲಾಯಿತು. ತಹಸೀಲ್ದಾರ್‌ ಸಹಾಯಕ ಜಾಗೃತ್‌ ಮಧ್ಯವರ್ತಿಯಾಗಿ ವ್ಯವಹಾರ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ತಹಸೀಲ್ದಾರ್‌ ಪುರಂದರ ಕೆಲವು ತಿಂಗಳ ಹಿಂದೆ ಚಾಮರಾಜನಗರದಿಂದ ಇಲ್ಲಿಗೆ ಬಂದಿದ್ದರು. ಇವರ ನಿವೃತ್ತಿಗೆ ಎರಡು ವರ್ಷ ಬಾಕಿ ಇತ್ತು ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ