ಆ್ಯಪ್ನಗರ

ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

ದಲಿತರು ನಿವೇಶನ , ಸ್ವಂತ ಸೂರಿಗಾಗಿ ದಸಂಸ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

Vijaya Karnataka 30 Nov 2018, 9:10 pm
ವಿರಾಜಪೇಟೆ: ದಲಿತರು ನಿವೇಶನ , ಸ್ವಂತ ಸೂರಿಗಾಗಿ ದಸಂಸ ನಡೆಸುತ್ತಿರುವ ಅಹೋ ರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
Vijaya Karnataka Web ahoratri dharani walked on the third day
ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ


ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಬಾರದ ಹಿನ್ನೆಲೆ ವಿಭಾಗ ಸಂಚಾಲಕ ಕಷ್ಣ ಸೇರಿದಂತೆ ದಲಿತ ಪ್ರಮುಖ ರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ನಿನ್ನೆ ರಾತ್ರಿ ಕೊರೆಯುವ ಚಳಿಗೆ ನಿರ್ಮಲ (3) ಹಾಗೂ ಸರಸ್ವತಿ (12) ಎಂಬ ಮಗು ಅನಾರೋಗ್ಯದಿಂದ ಬಳಲಿದ್ದು, ಸೂಕ್ತ ಚಿಕಿತ್ಸೆ ಸಹ ನೀಡಿಲ್ಲ ಎಂದು ಸಮಿತಿಯ ಪ್ರಮುಖರು ದೂರಿದರು. ಶುಕ್ರವಾರವೂ ಕೆಲವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಇಂದು ಅಪರಾಹ್ನ 12ಕ್ಕೆ ವೈದ್ಯರು ಬಂದು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ತಹಸೀಲ್ದಾರ್ ನಡೆಸಿದ ಸಂಧಾನ ಸಭೆ ಯಶಸ್ಸು ಕಂಡಿಲ್ಲ.

ಈ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗ್ಗೆ ಹರಿಸದೆ ಪ್ರಭಾರ ತಹಸೀಲ್ದಾರ್ ಬಸವ ರಾಜು ಅವರ ಹೆಗಲಿಗೆ ಹಾಕಿ ಕೈ ತೊಳೆದು ಕೊಂಡಂತಿದೆ. ಅವರ ಮಾತಿಗೆ ಪ್ರತಿಭಟನಾ ಕಾರರು ಒಪ್ಪದೆ ಧರಣಿ ಮುಂದುವರಿಸಿ ದ್ದಾರೆ. ಇಂದು ಇದಕ್ಕೆ ಅನಾರೋಗ್ಯದ ನಡುವೆ ಹಿರಿಯ ದಲಿತ ಮುಖಂಡ ಸಣ್ಣಯ್ಯ ಬಂದು ಬೆಂಬಲ ನೀಡಿದ್ದಾರೆ.

ದಲಿತ ಮುಖಂಡ ರಜನಿಕಾಂತ್ ಮಾತನಾಡಿ, ‘‘ ಇದು ತಹಸೀಲ್ದಾರ್ ಅವರಿಂದ ಆಗುವ ಕೆಲಸವಲ್ಲ. ಜಿಲ್ಲಾಡಳಿತ ಈ ಕುರಿತು ನಮ್ಮಗೆ ಲಿಖಿತ ಭರವಸೆ ನೀಡಬೇಕು. ಇಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಬಂದು ನಮ್ಮ ಸಮಸ್ಯೆ ಅಲಿಸಿ ಪರಿಹಾರ ನೀಡಬೇಕು. ಆದರೆ, ಈ ನಡುವೆ ತಾಲೂಕು ತಹಸೀಲ್ದಾರ್ ಸ್ಥಳ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ನಮ್ಮಗೆ ಪಕ್ಕದಲ್ಲಿ ಕೂರಲು ಇವರೆ ಶಾಮೀಯಾನ ಹಾಕಿ ಕೊಡಲಿ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದು ಅದನ್ನು ಹತ್ತಿಕ್ಕುವ ಪ್ರಯತ್ನ ಬೇಡ,’’ ಎಂದು ಎಚ್ಚರಿಸಿದರು.

ವಿ.ಪೇ ತಾಲೂಕು ಪ್ರಭಾರ ತಹಸೀಲ್ದಾರ್ ಬಸವರಾಜ ಮಾತನಾಡಿ, ‘‘ತಾವು ನಿನ್ನೆ ದಿನ ಐಟಿಡಿಪಿ ಇಲಾಖೆ, ಕಾರ್ಮಿಕ ಇಲಾಖೆ, ತಾ ಪಂ, ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಶೀಘ್ರ ನಿವೇಶನ ನೀಡಲು ಕ್ರಮ ಕೈ ಗೊಳ್ಳುವ ಭರವಸೆ ನೀಡಿದ್ದೇವೆ. ಈಗಾಗಲೇ 1,020 ಗಿರಿಜನರಿಗೆ , 9 ಸಾವಿರದಷ್ಟು ದಲಿತರಿಗೆ ಮತ್ತು ಇತರರಿಗೆ ಮನೆ ನಿವೇಶನ ಪಟ್ಟಿ ತಯಾರಿಸಲಾಗಿದೆ. ಇದಕ್ಕಾಗಿ 140 ಎಕರೆ ಜಾಗವನ್ನು ಗುರುತು ಮಾಡಲಾಗಿದ್ದು, ತಾಪಂ ಕಾರ್ಯ ನಿರ್ವಾಣಾ ಅಧಿಕಾರಿ ವಶದಲ್ಲಿದೆ. ಶೀಘ್ರ ಅದರ ಹಂಚಿಕೆ ಮಾಡಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದೇವೆ ಹಾಗೂ ಉಳಿದ ಬೇಡಿಕೆಗೂ ಸ್ವಂದಿಸಿದ್ದೇವೆ. ಆದರೂ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ