ಆ್ಯಪ್ನಗರ

ಕೊಡಗಿನಲ್ಲಿದೆ ಅಮರ್ ‌ಸಿಂಗ್‌ ಒಡೆತನದ ಉದ್ಯಮ, 4 ವರ್ಷ ಹಿಂದೆ ಜಿಲ್ಲೆಗೆ ಬಂದಿದ್ದರು ಸಿಂಗ್‌

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ‘ಹಾರಂಗಿ ಜಲ ವಿದ್ಯುತ್‌ ಯೋಜನೆ’ಯ ಮಾಲೀಕತ್ವ ಹೊಂದಿರುವ ಎನರ್ಜಿ ಡೆವಲಪ್‌ಮೆಂಟ್‌ ಕಾಪೊರೇಷನ್‌ ಲಿಮಿಟೆಡ್‌ (ಇಡಿಸಿಎಲ್‌) ಸಂಸ್ಥೆಗೆ ಅಮರ್‌ಸಿಂಗ್‌ ಅವರೇ ಚೇರ್‌ಮನ್‌.

Vijaya Karnataka 1 Aug 2020, 8:56 pm

ಮಡಿಕೇರಿ: ಶನಿವಾರ ನಿಧನ ಹೊಂದಿದ ಉತ್ತರ ಪ್ರದೇಶದ ಉದ್ಯಮಿ, ರಾಜಕೀಯ ಮುಖಂಡ ಅಮರ್ ‌ಸಿಂಗ್‌ ಕರ್ನಾಟಕದ ಕೊಡಗಿನಲ್ಲೂ ಉದ್ಯಮ ಹೊಂದಿದ್ದರು.
Vijaya Karnataka Web Amar Singh
ಹಾರಂಗಿಯಲ್ಲಿರುವ ಅಮರ್‌ ಸಿಂಗ್‌ ಮಾಲಿಕತ್ವದ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಹಾಗೂ ಕೆಲವು ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ಸಿಂಗ್.‌


ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿಯಲ್ಲಿರುವ ‘ಹಾರಂಗಿ ಜಲ ವಿದ್ಯುತ್‌ ಯೋಜನೆ’ಯ ಮಾಲೀಕತ್ವ ಹೊಂದಿರುವ ಎನರ್ಜಿ ಡೆವಲಪ್‌ಮೆಂಟ್‌ ಕಾಪೊರೇಷನ್‌ ಲಿಮಿಟೆಡ್‌ (ಇಡಿಸಿಎಲ್‌) ಸಂಸ್ಥೆಗೆ ಅಮರ್‌ಸಿಂಗ್‌ ಅವರೇ ಚೇರ್‌ಮನ್‌. ಇಡಿಸಿಎಲ್‌ನ ಮೊದಲ ಘಟಕ 1999ನೇ ಇಸವಿಯಲ್ಲಿಆರಂಭವಾಯಿತು. ಉದ್ಘಾಟನೆಗೆ ಅಂದು ಸಂಸ್ಥೆಯ ಪಾಲುದಾರರಲ್ಲಿಒಬ್ಬರಾಗಿದ್ದ ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಕೂಡ ಆಗಮಿಸಿದ್ದರು.

ನಂತರದ ಕೆಲವು ವರ್ಷ ಸಂಸ್ಥೆಯ ವಾರ್ಷಿಕ ಸಭೆ ಇಲ್ಲಿ ಆಯೋಜಿಸಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಪರಿಪಾಟ ನಿಂತುಹೋಗಿದ್ದು, ಅಮರ್‌ ಸಿಂಗ್‌ ನಾಲ್ಕು ವರ್ಷಗಳ ಹಿಂದೆ ಬಂದಿದ್ದೇ ಕೊನೆ ಭೇಟಿ ಎಂದು ಇಲ್ಲಿಯ ಸಿಬ್ಬಂದಿ ನೆನಪಿಸಿಕೊಳ್ಳುತ್ತಾರೆ.

ಪ್ರಭಾವಿ ಆಗಿದ್ದರೂ ಮರೆಯಾಗಿದ್ದ ನಾಯಕ, ಜನಮಾನಸದಲ್ಲಿ 'ಅಮರ'ರಾಗಿದ್ದ ಸಿಂಗ್‌

ಹಾರಂಗಿಯ ಜಲವಿದ್ಯುತ್‌ ಕೇಂದ್ರದಲ್ಲಿ ಅಮರ್‌ ಸಿಂಗ್ ಹಾಗೂ ಹಾರಂಗಿಯಲ್ಲಿ ನಡೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸಮಾಜವಾದಿ ನಾಯಕ.



ಕೊಡಗು ಜಿಲ್ಲೆಯಲ್ಲಿ ಈ ಮಾದರಿಯ ಏಕೈಕ ವಿದ್ಯುತ್‌ ಉತ್ಪಾದನಾ ಕೇಂದ್ರ ಇದಾಗಿದ್ದು, ತಲಾ 4.5 ಮೆಗಾವ್ಯಾಟ್‌ ಸಾಮರ್ಥ್ಯ‌ದ ಎರಡು ಜನರೇಟರ್‌ಗಳು ಇಲ್ಲಿವೆ. 6 ಮೆಗಾ ವ್ಯಾಟ್‌ ಸಾಮರ್ಥ್ಯ‌ದ 2ನೇ ಘಟಕವೂ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಾರ್ಷಿಕ ಸುಮಾರು 30 ಮಿಲಿಯನ್‌ ಯೂನಿಟ್‌ಗಳಷ್ಟು ವಿದ್ಯುತ್‌ ಉತ್ಪಾದಿಸಿ ಕೆಪಿಟಿಸಿಎಲ್‌ಗೆ ಮಾರಾಟ ಮಾಡಲಾಗುತ್ತದೆ. ಮಳೆಗಾಲದ ಅವಧಿಯಲ್ಲಿ ಕಾಲುವೆಗೆ ಬಿಡುವ ನೀರನ್ನು ಅವಲಂಬಿಸಿ ವಿದ್ಯುತ್‌ ಘಟಕಗಳು ಕಾರ್ಯನಿರ್ವಹಿಸುತ್ತವೆ.

ಸಂಸ್ಥೆಯ ಚೇರ್‌ಮನ್‌ ನಿಧನದ ಸುದ್ದಿ ಕೇಳಿ ದುಃಖವಾಯಿತು. ನಾಲ್ಕು ವರ್ಷಗಳ ಹಿಂದೆ ಕೊನೆಯ ಬಾರಿಗೆ ಇಲ್ಲಿಗೆ ಬಂದಿದ್ದರು. ನಮ್ಮ ಜತೆ ಅವರಿಗೆ ನೇರ ಸಂಪರ್ಕ ಇರಲಿಲ್ಲ. ಆದರೆ, ಸಿಬ್ಬಂದಿ ಹಿತ ಬಯಸುವ ವ್ಯಕ್ತಿ ಅವರಾಗಿದ್ದರು.
ಶಿವಸುಬ್ರಹ್ಮಣ್ಯಂ, ಇಡಿಸಿಎಲ್‌ ಜನರಲ್‌ ಮ್ಯಾನೇಜರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ