ಸುನಿಲ್ ಪೊನ್ನೇಟಿ ಮಡಿಕೇರಿ
ಕೊಡಗಿನಲ್ಲಿ ಆನೆ ಹಾವಳಿ ಮತ್ತೆ ಸದ್ದು ಮಾಡುತ್ತಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಬಹುತೇಕ ಪ್ರದೇಶದಲ್ಲಿ ಈಗ ಆನೆ-ಮಾನವ ಸಂಘರ್ಷ ಸಾಮಾನ್ಯ ಎಂಬಂತಾಗಿದೆ. ಜಿಲ್ಲೆಯ ಜನತೆಗೆ ವರ್ಷದ ಕೂಳು ನೀಡುವ ಕಾಫಿ ಮತ್ತು ಭತ್ತ ಕೊಯ್ಲುಸಂದರ್ಭದಲ್ಲಿ ಹಾಡಹಗಲೇ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಸ್ಥಳೀಯರನ್ನು ಭೀತಿಗೊಳಿಸಿದೆ. ಕಾರ್ಮಿಕರು ಕೂಡ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ 10 ವರ್ಷದಲ್ಲಿ 77 ಮಂದಿ ಆನೆ ದಾಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮೃತಪಟ್ಟಿರುವುದು ಆತಂಕ ಹುಟ್ಟಿಸಿದೆ.
ರೈತರ ಆತಂಕ: ಜಿಲ್ಲೆಯಾದ್ಯಂತ ಈಗ ಅರೆಬಿಕಾ ಕಾಫಿ ಕೊಯ್ಲುಸೀಸನ್ ಶುರುವಾಗಿದೆ. ಅತಿವೃಷ್ಟಿ ಮಧ್ಯೆಯೂ ಉಳಿದುಕೊಂಡಿರುವ ಕಾಫಿಯನ್ನು ಕೊಯ್ಲುಮಾಡಲೇಬೇಕಾದ ಅನಿವಾರ್ಯತೆಯಲ್ಲಿಬೆಳೆಗಾರರು ಇದ್ದಾರೆ. ಹಣ್ಣಾದ ಕಾಫಿಯನ್ನು ಸಮಯಕ್ಕೆ ಸರಿಯಾಗಿ ಕೀಳದಿದ್ದರೆ ನೆಲಕ್ಕೆ ಬಿದ್ದು ಹಾಳಾಗುತ್ತದೆ. ವರ್ಷದ ದುಡಿಮೆಯೂ ಕೈ ತಪ್ಪುತ್ತದೆ. ಬಹುತೇಕ ಪ್ರದೇಶಗಳಲ್ಲಿ ಭತ್ತ ಕಟಾವು ಕಾರ್ಯವೂ ನಡೆಯುತ್ತಿದೆ. ಅಕ್ಕಿ ಜಿಲ್ಲೆಯ ಪ್ರಮುಖ ಆಹಾರ ಬೆಳೆಯೂ ಆಗಿರುವುದರಿಂದ ಕಟಾವು ಕಾರ್ಯ ಮಹತ್ವ ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿಈಗ ಶುರುವಾಗಿರುವ ಕಾಡಾನೆ ಹಾವಳಿ ರೈತರನ್ನು ಕಂಗೆಡೆಸಿದೆ.
ಹಗಲಿನಲ್ಲೇ ಹಾವಳಿ: ರಾತ್ರಿ ವೇಳೆಯಲ್ಲಿ ಜನವಸತಿ ಪ್ರದೇಶಗಳಿಗೆ ನುಗ್ಗಿ ರೈತರ ಬೆಳೆಗಳನ್ನು ನಾಶಪಡಿಸಿ ಕಾಡಿಗೆ ಮರಳುತ್ತಿದ್ದ ಕಾಡಾನೆಗಳು ಈಗ ಹಗಲಿನ ವೇಳೆಯಲ್ಲೇ ರಾಜಾರೋಷವಾಗಿ ಹೊಲಗಳಿಗೆ ದಾಳಿ ಇಡುತ್ತಿವೆ. ಸೋಮವಾರಪೇಟೆ ತಾಲೂಕಿನ ಕೂಡಿಗೆಯಂತಹ ಜನನಿಬಿಡ ಊರುಗಳಲ್ಲೂ ನಿರ್ಭೀತಿಯಿಂದ ಸಂಚರಿಸಿ, ಹಾರಂಗಿ ನದಿಯಲ್ಲಿಜಲಕ್ರೀಡೆಯಾಡಿ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ. ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರ, ಹುದುಗೂರು, ಬ್ಯಾಡಗೊಟ್ಟ, ಸೀಗೆಹೊಸೂರು, ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಕಣಿವೆ, ಹುಲುಸೆ ಪ್ರದೇಶದಲ್ಲೂ ಹಗಲಿನಲ್ಲಿ ಕಾಡಾನೆಗಳ ದರ್ಶನ ಸಾಮಾನ್ಯವಾಗಿದೆ. ಅಮ್ಮತ್ತಿ ಸಮೀಪ ಕಾಫಿ ತೋಟದಲ್ಲಿಕಾಫಿ ಬೆಳೆಗಾರನ ಮೇಲೆ ಹಗಲಿನ ವೇಳೆಯೇ ಕಾಡಾನೆ ದಾಳಿ ನಡೆಸಿ ಗಂಭಿರವಾಗಿ ಗಾಯಗೊಳಿಸಿದೆ.
ಕೊಯ್ಲುಕಾರ್ಯಕ್ಕೆ ಹಿನ್ನಡೆ: ಕಾಫಿ ತೋಟ, ಭತ್ತದ ಗದ್ದೆಗಳಿಗೆ ಕಾಡಾನೆಗಳು ದಾಳಿ ಇಡುತ್ತಿರುವುದರಿಂದ ಬೆಳೆಗಾರರು, ರೈತರು ತಮ್ಮ ಜಮೀನಿಗೆ ತೆರಳು ಭಯಪಡುತ್ತಿದ್ದಾರೆ. ದುಪ್ಪಟ್ಟು ಕೂಲಿ ಕೊಡುತ್ತೇವೆ ಎಂದರೂ ಕಾರ್ಮಿಕರು ಕೂಡ ಕೆಲಸಕ್ಕೆ ಬರಲು ಒಪ್ಪುತ್ತಿಲ್ಲ. ಕೆಲಸ ಮಾಡುತ್ತಿರುವವರ ಮೇಲೆ ಆನೆಗಳು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಪ್ರಕರಣಗಳು ಕಾರ್ಮಿಕರಿಗೆ ಜೀವ ಭಯ ಕಾಡುವಂತೆ ಮಾಡಿದೆ. ಹಾಗಾಗಿ ಕಾಫಿ ಕೊಯ್ಲುಮತ್ತು ಭತ್ತ ಕಟಾವು ಕಾರ್ಯದಲ್ಲಿ ಹಿನ್ನಡೆ ಕಂಡುಬರುತ್ತಿದೆ.
ಆನೆಗಳೇ ಶತ್ರುಗಳು !
ಕೃಷಿ ಪ್ರಧಾನ ಕೊಡಗಿನಲ್ಲಿ ಕಾಡಾನೆಗಳೇ ರೈತರ ಪಾಲಿಗೆ ದೊಡ್ಡ ಶತ್ರುಗಳಾಗಿವೆ. ಆನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸೋಲಾರ್ ಬೇಲಿ, ನೇತಾಡುವ ಸೋಲಾರ್ ಬೇಲಿ, ಕಂದಕ, ರೈಲ್ವೆ ಕಂಬಿಯ ಬೇಲಿ ಯಾವುದು ಕೂಡ ಆನೆ ದಾಳಿ ತಡೆಯುವಲ್ಲಿಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಆನೆಗಳು ಬಂದಾಗ ಜೋರಾಗಿ ಅರಚುವುದು, ಪಟಾಕಿ ಸಿಡಿಸುವುದಷ್ಟೇ ರೈತರ ಪಾಲಿಗೆ ಸದ್ಯದ ಮಟ್ಟಿಗೆ ಇರುವ ಬಹುದೊಡ್ಡ ಪರಿಹಾರೋಪಾಯವಾಗಿದೆ. ಆನೆಗಳಿಂದಾಗಿ ಲಕ್ಷ ಮೌಲ್ಯದ ಬೆಳೆ ಹಾನಿ ಆದರೂ ಅರಣ್ಯ ಇಲಾಖೆ ಕೊಡುವ ಪರಿಹಾರ ಮಾತ್ರ 1ರಿಂದ 5 ಸಾವಿರ ರೂಪಾಯಿ.
ಆನೆ ಹಾವಳಿ ಪ್ರದೇಶಗಳು
ಸೋಮವಾರಪೇಟೆ ತಾಲೂಕು: ಕಟ್ಟೆಪುರ, ನೀರುಗುಂದ, ನಿಲುವಾಗಿಲು, ಬೆಂಬಳೂರು, ಮಾದ್ರೆ, ದುಂಡಳ್ಳಿ, ನಿಡ್ತ, ಎಳನೀರುಗುಂಡಿ, ಹಿತ್ಲುಕೇರಿ, ಮಾಲಂಬಿ, ಕಣಗಾಲು, ದೊಡ್ಡಳ್ಳಿ, ಸಂಗಯ್ಯನಪುರ, ಭುವಂಗಾಲ, ಬಾಣವಾರ, ಗಣಗೂರು, ನೆಲ್ಯಹುದಿಕೇರಿ, ಮದಲಾಪುರ, ಹುದುಗೂರು, ಯಡವನಾಡು.
ವಿರಾಜಪೇಟೆ ತಾಲೂಕು: ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಕಣ್ಣಂಗಾಲ, ಕಳತ್ಮಾಡು, ಗುಹ್ಯ, ಬಾಡಗಬಾಣಂಗಾಲ, ಶ್ರೀಮಂಗಲ, ಕುಟ್ಟ ಹಾಗೂ ನಾಗರಹೊಳೆ ಅಂಚಿನ ಗ್ರಾಮಗಳು.
ಮಡಿಕೇರಿ ತಾಲೂಕು: ಚೇಲಾವರ, ಸಂಪಾಜೆ, ಕರಿಕೆ ಮತ್ತಿತರ ಪ್ರದೇಶಗಳು.
10 ವರ್ಷದಲ್ಲಿ 77 ಮಂದಿ ಬಲಿ
2008-09 * 7 ಮಂದಿ
2009-10 * 6 ಮಂದಿ
2010-11 - 6 ಮಂದಿ
2011-12 - 4 ಮಂದಿ
2012-13 * 8 ಮಂದಿ
2013-14 - 8 ಮಂದಿ
2014-15 - 8 ಮಂದಿ
2015-16 - 13 ಮಂದಿ
2016-17 - 9 ಮಂದಿ
2017-18 - 4 ಮಂದಿ
2018-19 * 4 ಮಂದಿ
ಆನೆ ದಾಳಿ ತಡೆಗೆ ಶಾಶ್ವತ ಪರಿಹಾರ ಒದಗಿಸುತ್ತೇವೆ ಎನ್ನುವ ಅರಣ್ಯ ಇಲಾಖೆ ಅಧಿಕಾರಿಗಳ ಭರವಸೆ ಇನ್ನೂ ಈಡೇರಿಲ್ಲ. ಇಲ್ಲಿ ರೈತರ ಬೆಳೆ ಪ್ರತಿದಿನವೂ ಕಾಡಾನೆಗಳಿಗೆ ಆಹಾರವಾಗುತ್ತಿದೆ. ಮುಂದೆ ನಾವು ಹೇಗೆ ಬದುಕುವುದು, ಜೀವನಕ್ಕೆ ಏನು ಮಾಡುವುದು ಅಂತನೇ ಗೊತ್ತಾಗುತ್ತಿಲ್ಲ.
- ಹೇಮಂತ್ ಪಾರೇರ, ಯಡವನಾಡು ನಿವಾಸಿ.
ಕಾಡಾನೆಗಳು ಮೊದಲೆಲ್ಲಾರಾತ್ರಿ ಮಾತ್ರ ಬರುತ್ತಿದ್ದವು. ಈಗ ಹಗಲಿನಲ್ಲೇ ದಾಳಿ ಇಡಲು ಶುರು ಮಾಡಿವೆ. ನಮ್ಮೂರಿನಲ್ಲಿ ಹೊಸದಾಗಿ ಸೋಲಾರ್ ಬೇಲಿ ಹಾಕುತ್ತೇವೆ ಅಂತ ಹಳೆಯದ್ದನ್ನು ಕಿತ್ತು ಹಾಕಿದರು. ಇವತ್ತು ಇಲ್ಲಿ ಹಳೆಯದ್ದು ಇಲ್ಲ, ಹೊಸದ್ದೂ ಇಲ್ಲ. ಆನೆಗಳಿಗೆ ದಾರಿ ಸಲೀಸಾಗಿದೆ.
-ಅರ್ಚನಾ ಪಾಣತ್ತಲೆ, ಬ್ಯಾಡಗೊಟ್ಟ ನಿವಾಸಿ.
ಆನೆ ದಾಳಿ ಹೆಚ್ಚು ಇರುವ ಪ್ರದೇಶಗಳಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಕಳುಹಿಸಲಾಗಿದೆ. ಆನೆಗಳನ್ನು ಓಡಿಸಲು ಈ ತಂಡ ಗ್ರಾಮಸ್ಥರಿಗೆ ಸಹಕರಿಸುತ್ತಿದೆ. ಗ್ರಾಮಸ್ಥರಿಗೆ ಇಲಾಖೆ ವತಿಯಿಂದಲೇ ಪಟಾಕಿಗಳನ್ನೂ ಕೊಡಲಾಗುತ್ತಿದೆ. ನಿರ್ವಹಣೆ ಇಲ್ಲದೆ ಹಾಳಾಗಿರುವ ಸೌರ ಬೇಲಿಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
-ಶಮಾ, ವಲಯ ಅರಣ್ಯಾಧಿಕಾರಿ, ಸೋಮವಾರಪೇಟೆ.
ಕೊಡಗಿನಲ್ಲಿ ಆನೆ ಹಾವಳಿ ಮತ್ತೆ ಸದ್ದು ಮಾಡುತ್ತಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಬಹುತೇಕ ಪ್ರದೇಶದಲ್ಲಿ ಈಗ ಆನೆ-ಮಾನವ ಸಂಘರ್ಷ ಸಾಮಾನ್ಯ ಎಂಬಂತಾಗಿದೆ. ಜಿಲ್ಲೆಯ ಜನತೆಗೆ ವರ್ಷದ ಕೂಳು ನೀಡುವ ಕಾಫಿ ಮತ್ತು ಭತ್ತ ಕೊಯ್ಲುಸಂದರ್ಭದಲ್ಲಿ ಹಾಡಹಗಲೇ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಸ್ಥಳೀಯರನ್ನು ಭೀತಿಗೊಳಿಸಿದೆ. ಕಾರ್ಮಿಕರು ಕೂಡ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ 10 ವರ್ಷದಲ್ಲಿ 77 ಮಂದಿ ಆನೆ ದಾಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮೃತಪಟ್ಟಿರುವುದು ಆತಂಕ ಹುಟ್ಟಿಸಿದೆ.
ರೈತರ ಆತಂಕ: ಜಿಲ್ಲೆಯಾದ್ಯಂತ ಈಗ ಅರೆಬಿಕಾ ಕಾಫಿ ಕೊಯ್ಲುಸೀಸನ್ ಶುರುವಾಗಿದೆ. ಅತಿವೃಷ್ಟಿ ಮಧ್ಯೆಯೂ ಉಳಿದುಕೊಂಡಿರುವ ಕಾಫಿಯನ್ನು ಕೊಯ್ಲುಮಾಡಲೇಬೇಕಾದ ಅನಿವಾರ್ಯತೆಯಲ್ಲಿಬೆಳೆಗಾರರು ಇದ್ದಾರೆ. ಹಣ್ಣಾದ ಕಾಫಿಯನ್ನು ಸಮಯಕ್ಕೆ ಸರಿಯಾಗಿ ಕೀಳದಿದ್ದರೆ ನೆಲಕ್ಕೆ ಬಿದ್ದು ಹಾಳಾಗುತ್ತದೆ. ವರ್ಷದ ದುಡಿಮೆಯೂ ಕೈ ತಪ್ಪುತ್ತದೆ. ಬಹುತೇಕ ಪ್ರದೇಶಗಳಲ್ಲಿ ಭತ್ತ ಕಟಾವು ಕಾರ್ಯವೂ ನಡೆಯುತ್ತಿದೆ. ಅಕ್ಕಿ ಜಿಲ್ಲೆಯ ಪ್ರಮುಖ ಆಹಾರ ಬೆಳೆಯೂ ಆಗಿರುವುದರಿಂದ ಕಟಾವು ಕಾರ್ಯ ಮಹತ್ವ ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿಈಗ ಶುರುವಾಗಿರುವ ಕಾಡಾನೆ ಹಾವಳಿ ರೈತರನ್ನು ಕಂಗೆಡೆಸಿದೆ.
ಹಗಲಿನಲ್ಲೇ ಹಾವಳಿ: ರಾತ್ರಿ ವೇಳೆಯಲ್ಲಿ ಜನವಸತಿ ಪ್ರದೇಶಗಳಿಗೆ ನುಗ್ಗಿ ರೈತರ ಬೆಳೆಗಳನ್ನು ನಾಶಪಡಿಸಿ ಕಾಡಿಗೆ ಮರಳುತ್ತಿದ್ದ ಕಾಡಾನೆಗಳು ಈಗ ಹಗಲಿನ ವೇಳೆಯಲ್ಲೇ ರಾಜಾರೋಷವಾಗಿ ಹೊಲಗಳಿಗೆ ದಾಳಿ ಇಡುತ್ತಿವೆ. ಸೋಮವಾರಪೇಟೆ ತಾಲೂಕಿನ ಕೂಡಿಗೆಯಂತಹ ಜನನಿಬಿಡ ಊರುಗಳಲ್ಲೂ ನಿರ್ಭೀತಿಯಿಂದ ಸಂಚರಿಸಿ, ಹಾರಂಗಿ ನದಿಯಲ್ಲಿಜಲಕ್ರೀಡೆಯಾಡಿ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ. ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರ, ಹುದುಗೂರು, ಬ್ಯಾಡಗೊಟ್ಟ, ಸೀಗೆಹೊಸೂರು, ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಕಣಿವೆ, ಹುಲುಸೆ ಪ್ರದೇಶದಲ್ಲೂ ಹಗಲಿನಲ್ಲಿ ಕಾಡಾನೆಗಳ ದರ್ಶನ ಸಾಮಾನ್ಯವಾಗಿದೆ. ಅಮ್ಮತ್ತಿ ಸಮೀಪ ಕಾಫಿ ತೋಟದಲ್ಲಿಕಾಫಿ ಬೆಳೆಗಾರನ ಮೇಲೆ ಹಗಲಿನ ವೇಳೆಯೇ ಕಾಡಾನೆ ದಾಳಿ ನಡೆಸಿ ಗಂಭಿರವಾಗಿ ಗಾಯಗೊಳಿಸಿದೆ.
ಕೊಯ್ಲುಕಾರ್ಯಕ್ಕೆ ಹಿನ್ನಡೆ: ಕಾಫಿ ತೋಟ, ಭತ್ತದ ಗದ್ದೆಗಳಿಗೆ ಕಾಡಾನೆಗಳು ದಾಳಿ ಇಡುತ್ತಿರುವುದರಿಂದ ಬೆಳೆಗಾರರು, ರೈತರು ತಮ್ಮ ಜಮೀನಿಗೆ ತೆರಳು ಭಯಪಡುತ್ತಿದ್ದಾರೆ. ದುಪ್ಪಟ್ಟು ಕೂಲಿ ಕೊಡುತ್ತೇವೆ ಎಂದರೂ ಕಾರ್ಮಿಕರು ಕೂಡ ಕೆಲಸಕ್ಕೆ ಬರಲು ಒಪ್ಪುತ್ತಿಲ್ಲ. ಕೆಲಸ ಮಾಡುತ್ತಿರುವವರ ಮೇಲೆ ಆನೆಗಳು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಪ್ರಕರಣಗಳು ಕಾರ್ಮಿಕರಿಗೆ ಜೀವ ಭಯ ಕಾಡುವಂತೆ ಮಾಡಿದೆ. ಹಾಗಾಗಿ ಕಾಫಿ ಕೊಯ್ಲುಮತ್ತು ಭತ್ತ ಕಟಾವು ಕಾರ್ಯದಲ್ಲಿ ಹಿನ್ನಡೆ ಕಂಡುಬರುತ್ತಿದೆ.
ಆನೆಗಳೇ ಶತ್ರುಗಳು !
ಕೃಷಿ ಪ್ರಧಾನ ಕೊಡಗಿನಲ್ಲಿ ಕಾಡಾನೆಗಳೇ ರೈತರ ಪಾಲಿಗೆ ದೊಡ್ಡ ಶತ್ರುಗಳಾಗಿವೆ. ಆನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸೋಲಾರ್ ಬೇಲಿ, ನೇತಾಡುವ ಸೋಲಾರ್ ಬೇಲಿ, ಕಂದಕ, ರೈಲ್ವೆ ಕಂಬಿಯ ಬೇಲಿ ಯಾವುದು ಕೂಡ ಆನೆ ದಾಳಿ ತಡೆಯುವಲ್ಲಿಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಆನೆಗಳು ಬಂದಾಗ ಜೋರಾಗಿ ಅರಚುವುದು, ಪಟಾಕಿ ಸಿಡಿಸುವುದಷ್ಟೇ ರೈತರ ಪಾಲಿಗೆ ಸದ್ಯದ ಮಟ್ಟಿಗೆ ಇರುವ ಬಹುದೊಡ್ಡ ಪರಿಹಾರೋಪಾಯವಾಗಿದೆ. ಆನೆಗಳಿಂದಾಗಿ ಲಕ್ಷ ಮೌಲ್ಯದ ಬೆಳೆ ಹಾನಿ ಆದರೂ ಅರಣ್ಯ ಇಲಾಖೆ ಕೊಡುವ ಪರಿಹಾರ ಮಾತ್ರ 1ರಿಂದ 5 ಸಾವಿರ ರೂಪಾಯಿ.
ಆನೆ ಹಾವಳಿ ಪ್ರದೇಶಗಳು
ಸೋಮವಾರಪೇಟೆ ತಾಲೂಕು: ಕಟ್ಟೆಪುರ, ನೀರುಗುಂದ, ನಿಲುವಾಗಿಲು, ಬೆಂಬಳೂರು, ಮಾದ್ರೆ, ದುಂಡಳ್ಳಿ, ನಿಡ್ತ, ಎಳನೀರುಗುಂಡಿ, ಹಿತ್ಲುಕೇರಿ, ಮಾಲಂಬಿ, ಕಣಗಾಲು, ದೊಡ್ಡಳ್ಳಿ, ಸಂಗಯ್ಯನಪುರ, ಭುವಂಗಾಲ, ಬಾಣವಾರ, ಗಣಗೂರು, ನೆಲ್ಯಹುದಿಕೇರಿ, ಮದಲಾಪುರ, ಹುದುಗೂರು, ಯಡವನಾಡು.
ವಿರಾಜಪೇಟೆ ತಾಲೂಕು: ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಕಣ್ಣಂಗಾಲ, ಕಳತ್ಮಾಡು, ಗುಹ್ಯ, ಬಾಡಗಬಾಣಂಗಾಲ, ಶ್ರೀಮಂಗಲ, ಕುಟ್ಟ ಹಾಗೂ ನಾಗರಹೊಳೆ ಅಂಚಿನ ಗ್ರಾಮಗಳು.
ಮಡಿಕೇರಿ ತಾಲೂಕು: ಚೇಲಾವರ, ಸಂಪಾಜೆ, ಕರಿಕೆ ಮತ್ತಿತರ ಪ್ರದೇಶಗಳು.
10 ವರ್ಷದಲ್ಲಿ 77 ಮಂದಿ ಬಲಿ
2008-09 * 7 ಮಂದಿ
2009-10 * 6 ಮಂದಿ
2010-11 - 6 ಮಂದಿ
2011-12 - 4 ಮಂದಿ
2012-13 * 8 ಮಂದಿ
2013-14 - 8 ಮಂದಿ
2014-15 - 8 ಮಂದಿ
2015-16 - 13 ಮಂದಿ
2016-17 - 9 ಮಂದಿ
2017-18 - 4 ಮಂದಿ
2018-19 * 4 ಮಂದಿ
ಆನೆ ದಾಳಿ ತಡೆಗೆ ಶಾಶ್ವತ ಪರಿಹಾರ ಒದಗಿಸುತ್ತೇವೆ ಎನ್ನುವ ಅರಣ್ಯ ಇಲಾಖೆ ಅಧಿಕಾರಿಗಳ ಭರವಸೆ ಇನ್ನೂ ಈಡೇರಿಲ್ಲ. ಇಲ್ಲಿ ರೈತರ ಬೆಳೆ ಪ್ರತಿದಿನವೂ ಕಾಡಾನೆಗಳಿಗೆ ಆಹಾರವಾಗುತ್ತಿದೆ. ಮುಂದೆ ನಾವು ಹೇಗೆ ಬದುಕುವುದು, ಜೀವನಕ್ಕೆ ಏನು ಮಾಡುವುದು ಅಂತನೇ ಗೊತ್ತಾಗುತ್ತಿಲ್ಲ.
- ಹೇಮಂತ್ ಪಾರೇರ, ಯಡವನಾಡು ನಿವಾಸಿ.
ಕಾಡಾನೆಗಳು ಮೊದಲೆಲ್ಲಾರಾತ್ರಿ ಮಾತ್ರ ಬರುತ್ತಿದ್ದವು. ಈಗ ಹಗಲಿನಲ್ಲೇ ದಾಳಿ ಇಡಲು ಶುರು ಮಾಡಿವೆ. ನಮ್ಮೂರಿನಲ್ಲಿ ಹೊಸದಾಗಿ ಸೋಲಾರ್ ಬೇಲಿ ಹಾಕುತ್ತೇವೆ ಅಂತ ಹಳೆಯದ್ದನ್ನು ಕಿತ್ತು ಹಾಕಿದರು. ಇವತ್ತು ಇಲ್ಲಿ ಹಳೆಯದ್ದು ಇಲ್ಲ, ಹೊಸದ್ದೂ ಇಲ್ಲ. ಆನೆಗಳಿಗೆ ದಾರಿ ಸಲೀಸಾಗಿದೆ.
-ಅರ್ಚನಾ ಪಾಣತ್ತಲೆ, ಬ್ಯಾಡಗೊಟ್ಟ ನಿವಾಸಿ.
ಆನೆ ದಾಳಿ ಹೆಚ್ಚು ಇರುವ ಪ್ರದೇಶಗಳಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಕಳುಹಿಸಲಾಗಿದೆ. ಆನೆಗಳನ್ನು ಓಡಿಸಲು ಈ ತಂಡ ಗ್ರಾಮಸ್ಥರಿಗೆ ಸಹಕರಿಸುತ್ತಿದೆ. ಗ್ರಾಮಸ್ಥರಿಗೆ ಇಲಾಖೆ ವತಿಯಿಂದಲೇ ಪಟಾಕಿಗಳನ್ನೂ ಕೊಡಲಾಗುತ್ತಿದೆ. ನಿರ್ವಹಣೆ ಇಲ್ಲದೆ ಹಾಳಾಗಿರುವ ಸೌರ ಬೇಲಿಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
-ಶಮಾ, ವಲಯ ಅರಣ್ಯಾಧಿಕಾರಿ, ಸೋಮವಾರಪೇಟೆ.