ಆ್ಯಪ್ನಗರ

ಪ್ರಾಣಿ ಬೇಟೆ: ನಾಲ್ವರ ಬಂಧನ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ಬಳಿಯ ದೇವಮಚ್ಚಿ ಮೀಸಲು ಅರಣ್ಯದಲ್ಲಿ ಪ್ರಾಣಿ ಬೇಟೆಯಾಡುತ್ತಿದ್ದ ಆರೋಪದಡಿ 6 ಮಂದಿ ಆರೋಪಿಗಳಲ್ಲಿ ನಾಲ್ವರನ್ನು ತಿತಿಮತಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

Vijaya Karnataka 26 Jul 2019, 5:00 am
ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ಬಳಿಯ ದೇವಮಚ್ಚಿ ಮೀಸಲು ಅರಣ್ಯದಲ್ಲಿ ಪ್ರಾಣಿ ಬೇಟೆಯಾಡುತ್ತಿದ್ದ ಆರೋಪದಡಿ 6 ಮಂದಿ ಆರೋಪಿಗಳಲ್ಲಿ ನಾಲ್ವರನ್ನು ತಿತಿಮತಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web animal hunting four arrested
ಪ್ರಾಣಿ ಬೇಟೆ: ನಾಲ್ವರ ಬಂಧನ


ಸಿದ್ದಾಪುರ ಗುಹ್ಯ ಗ್ರಾಮದವರಾದ ಟಿ.ಪಿ. ಸುಬ್ರಮಣಿ, ಟಿ.ಎಂ.ಉಮೇಶ್‌, ಮಾಲ್ದಾರೆ ಗ್ರಾಮದ ಜೆ.ಕೆ. ಗಣೇಶ್‌, ಪಿರಿಯಾಪಟ್ಟಣ ರಾಣಿಗೇಟ್‌ನ ಹರೀಶ್‌ ಬಂಧಿತರು.

ಮಾಲ್ದಾರೆ ಗ್ರಾಮದ ಎಂ.ಸುನೀಲ್‌, ಗುಹ್ಯ ಗ್ರಾಮದ ಆರ್‌. ಸುನೀಲ್‌ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ಓಮ್ನಿ , ಒಂದು ಡಬಲ್‌ ಬ್ಯಾರೆಲ್‌ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದೇವಮಚ್ಚಿ ಮೀಸಲು ಅರಣ್ಯದಲ್ಲಿ ಗುರುವಾರ ಬೆಳಗ್ಗೆ 5 ಗಂಟೆ ಪ್ರಾಣಿ ಬೇಟೆಯಾಡುತ್ತಿದ್ದರು ಎನ್ನಲಾಗಿದೆ. ಕಾರ್ಯಾಚರಣೆ ನಡೆಸಿದ ಆರ್‌ಎಫ್‌ಒ ಅಶೋಕ್‌ ಹುನುಗುಂದ ನಾಲ್ವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಫಲರಾದರು.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಉಮಾಶಂಕರ್‌, ಫಾರೆಸ್ಟರ್‌ಗಳಾದ ಶ್ರೀನಿವಾಸ್‌, ದೇವರಾಜು, ರಮೇಶ್‌, ವೆಂಕಟೇಶ್‌ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ