ಆ್ಯಪ್ನಗರ

ಅಂಕುರ್ ವಿದ್ಯಾರ್ಥಿಗಳಿಂದ ಚಾರಣ

ನಾಪೋಕ್ಲು: ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಕೊಡಗಿನ ಅತಿ ಎತ್ತರದ ಬೆಟ್ಟ ತಡಿಯಂಡ ಮೋಳ್‌ಗೆ ಚಾರಣ ಕೈಗೊಂಡರು.

ವಿಕ ಸುದ್ದಿಲೋಕ 11 Mar 2016, 4:10 am
ನಾಪೋಕ್ಲು: ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಕೊಡಗಿನ ಅತಿ ಎತ್ತರದ ಬೆಟ್ಟ ತಡಿಯಂಡ ಮೋಳ್‌ಗೆ ಚಾರಣ ಕೈಗೊಂಡರು.
Vijaya Karnataka Web ankur students treking in napoklu hills kodagu
ಅಂಕುರ್ ವಿದ್ಯಾರ್ಥಿಗಳಿಂದ ಚಾರಣ

ಇದಕ್ಕೂ ಮೊದಲು ಶಾಲೆಯಲ್ಲಿ ನಡೆದ ಶಿಬಿರದ ನೇತತ್ವವನ್ನು ಸಂಸ್ಥೆಯ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ್ಣ ಮತ್ತು ಕಾರ್ಯದರ್ಶಿ ರತ್ನಾ ಚರ್ಮಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಲಿಯಬೇಕಾದ ಶಿಸ್ತು, ಸಂಯಮ, ಪ್ರಾಮಾಣಿಕತೆ, ನಾಯಕತ್ವ ಗುಣಗಳ ಬಗ್ಗೆ ವಿವರಿಸಿ, ಚಾರಣ ಸಮಯದಲ್ಲಿ ವಹಿಸಬೇಕಾದ ಮುಂಜಾಗತಾ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಜಗದೀಶ್ ಮಾತನಾಡಿ ಅಪಘಾತ ಸಂದರ್ಭದಲ್ಲಿ ಸಾರ್ವಜನಿಕರು ಅಪಘಾತಕ್ಕೊಳಗಾದ ವ್ಯಕ್ತಿಯನ್ನು ನಿರ್ಲಕ್ಷಿಸುತ್ತಿರುವುದು ವಿಷಾಧಕರವಾಗಿದೆ. ಪ್ರಥಮ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ದೊರೆಯದೆ ಇಂದು ಅನೇಕರು ಸಾವನ್ನಪ್ಪುತ್ತಾರೆ. ಆದುದರಿಂದ ಪ್ರಥಮ ಚಿಕಿತ್ಸೆ ನೀಡುವದರ ಬಗ್ಗೆ ಎಲ್ಲರೂ ಅರಿತುಕೊಂಡು ಸಂಕಷ್ಟ ದಲ್ಲಿರುವ ಜೀವದ ರಕ್ಷಣೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಶಿಬಿರದ ನಾಯಕತ್ವವನ್ನು ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿಕ್ಷಕ ಟಿ.ವಿ.ಮಹೇಶ್ ವಹಿಸಿದ್ದರು. ಶಿಕ್ಷಕ ವಂದ ತಂಡದೊಂಡಿಗೆ ಚಾರಣದಲ್ಲಿ ಪಾಲ್ಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ