ಆ್ಯಪ್ನಗರ

ಲಾಕ್ ಡೌನ್ ಅವಧಿಯಲ್ಲೂ ಅರೆಭಾಷೆ 'ಪದ್ಯದಂಗಡಿ' ಸಖತ್ ವೈರಲ್!

ಕೊರೊನಾ ಸಂಕಷ್ಟದ ದಿನಗಳಲ್ಲಿ ಜನರು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅರೆಭಾಷೆ ಕವನಗಳನ್ನು ವಾಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕೊರೊನಾ ಸಂಕಷ್ಟದ ದಿನಗಳನ್ನು ಭಾಷೆ ಸಾಹಿತ್ಯದ ಬೆಳವಣಿಗೆಗೆ ಬಳಸಿಕೊಳ್ಳಬಹುದೆಂದು ಅರೆಭಾಷೆ ಕವಿಗಳು ನಿರೂಪಿಸಿದ್ದಾರೆ.

Vijaya Karnataka Web 21 Apr 2020, 2:09 pm
ಕೊಡಗು: ಕೊರೊನಾ ಸೋಂಕಿನ ವಿರುದ್ಧದ ಸಮರಕ್ಕಾಗಿ ದೇಶಕ್ಕೆ ದೇಶವೇ ಗೃಹಬಂಧನದಲ್ಲಿರುವಾಗ, ಈ ಬಿಡುವಿನ ಸಮಯದಲ್ಲಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ."ಅರೆಭಾಷೆ ಪದ್ಯದಂಗಡಿ" ಅರೆಭಾಷೆ ಕವನಗಳ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ.
Vijaya Karnataka Web arebhase kavana


'ಅರೆಭಾಷೆ ಬೆಳೆಸಿ' ಸಂದೇಶದೊಂದಿಗೆ ಈ ಅಭಿಯಾನ ಆರಂಭಗೊಂಡಿದೆ. ಕೊಡಗು, ದಕ್ಷಿಣ ಕನ್ನಡ ,ಕಾಸರಗೋಡುವಿನಾದ್ಯಂತ ಐದು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಅರೆಭಾಷೆಯನ್ನು ಮಾತನಾಡುತ್ತಾರೆ. ಭಾಷೆ ಜನಾಂಗದೆಲ್ಲೆಯನ್ನು ಮೀರಿ ಬೆಳೆದಿರುತ್ತದೆ. ಯಾವುದೇ ಭಾಷೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ. ಅರೆಭಾಷೆ ಬಗೆಗೆ ಅರಿವು ಇರುವವರು ಈ ಅಭಿಯಾನದಲ್ಲಿ ತಮ್ಮದೇ ಕವನಗಳು ಅಥವಾ ಇತರರು ಕವನಗಳನ್ನು ವಾಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಈ ಕೊರೊನಾ ಸಂಕಷ್ಟದ ದಿನಗಳನ್ನು ಭಾಷೆ ಸಾಹಿತ್ಯದ ಬೆಳವಣಿಗೆಗೆ ಬಳಸಿಕೊಳ್ಳಬಹುದೆಂದು ಅರೆಭಾಷೆ ಕವಿಗಳು ನಿರೂಪಿಸಿದ್ದಾರೆ. ಇದಕ್ಕೆ 'ಅರೆಭಾಷೆ ಪದ್ಯದಂಗಡಿ' ಸಾಕ್ಷಿ.

ಯುವ ಜನರು ಮಾತೃ ಭಾಷೆಯನ್ನು ಪ್ರೀತಿಸಬೇಕು. ಮನೆ ಭಾಷೆಯನ್ನು ಉಳಿಸಿ ಬೆಳೆಸಬೇಕು. ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರ ಇಡೀ ವಿಶ್ವಕ್ಕೆ ಪಸರಿಸುವಂತಾಗಬೇಕು. ಈಗಾಗಲೇ ಅರೆಭಾಷೆ ಬೆಳೆಸಿ, ಉಳಿಸಿ ಎಂಬ ಸಂದೇಶದೊಂದಿಗೆ ಆರಂಭವಾಗಿರುವ ಈ ಅಭಿಯಾನಕ್ಕೆ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಅರೆಭಾಷೆಯೂ ಕೇವಲ ಕೊಡಗು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತನಾಡುವ ಗೌಡ ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಒಂದು ಭಾಷೆ ಜನಾಂಗವನ್ನು ಮೀರಿ ನಿಂತಾಗಲೇ ಅದರ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗೇ ಅರೆಭಾಷೆ ಮಾತನಾಡುವ ಯಾರು ಬೇಕಾದರೂ 'ಅರೆಭಾಷೆ ಪದ್ಯದಂಗಡಿ' ಹ್ಯಾಶ್ ಟ್ಯಾಗ್ ಬಳಸಿ ಫೇಸ್ ಬುಕ್ ನಲ್ಲಿ ತಮ್ಮ ಕವನಗಳನ್ನು ಓದಬಹುದು. ಇಲ್ಲಿ ಒಬ್ಬರು ಒಂದು ಕವನವನ್ನು ಓದಿದ ನಂತರ ಇನ್ನೊಬ್ಬರ ಹೆಸರನ್ನು ನಾಮೀನೇಟ್ ಮಾಡಬೇಕು. ಹೀಗೇ 'ಅರೆಭಾಷೆ ಪದ್ಯದಂಗಡಿ' ವಿಸ್ತಾರವಾಗುತ್ತಾ ಹೋಗಿ, ಈಗಾಗಲೇ 100ಕ್ಕಿಂತ ಹೆಚ್ಚು ಅರೆಭಾಷೆ ಕವಿಗಳು ತಮ್ಮ ಕವನಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 'ಪದ್ಯದಂಗಡಿ'ಯಲ್ಲಿ ಹೊರದೇಶದಲ್ಲಿರುವವರು ಕೂಡಾ ಭಾಗವಹಿಸಿ ಮೆರುಗು ತಂದಿದ್ದಾರೆ. ಅರೆಭಾಷೆ ಬಗೆಗೆ ಅರಿವು ಇರುವವರು ಪಾಲ್ಗೊಳ್ಳಬಹುದು ಎಂದು 'ಅರೆಭಾಷೆ ಪದ್ಯಂಗಡಿ' ಅಭಿಯಾನ ಆರಂಭಿಸಿರುವ ಕುಶ್ವಂತ್ ಕೋಳಿಬೈಲು ಅವರು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ