ಆ್ಯಪ್ನಗರ

‘ಆರೋಹಣ ಕೊಡಗು’ ತಂಡದ ಪರಿಸರ ಕಾಳಜಿ

ಕೊಡಗಿನ ಆರೋಹಣ ಚಾರಣ ತಂಡ 'ಪ್ರಕೃತಿಯೆಡೆಗೆ ನಮ್ಮ ನಡಿಗೆ'' ಎಂಬ ಘೋಷ ವಾಕ್ಯದೊಂದಿಗೆ ಪ್ರವಾಸಿಗರಿಂದ ಕಲುಷಿತಗೊಳ್ಳುತ್ತಿರುವ ಕೊಡಗಿನ ಪರಿಸರವನ್ನು ಸ್ವಚ್ಛಗೊಳಿಸುವ ಪ್ರಯತ್ನ ನಡೆಸುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Vijaya Karnataka Web 6 Jun 2018, 5:00 am
ಮಡಿಕೇರಿ: ಕೊಡಗಿನ ಆರೋಹಣ ಚಾರಣ ತಂಡ 'ಪ್ರಕೃತಿಯೆಡೆಗೆ ನಮ್ಮ ನಡಿಗೆ'' ಎಂಬ ಘೋಷ ವಾಕ್ಯದೊಂದಿಗೆ ಪ್ರವಾಸಿಗರಿಂದ ಕಲುಷಿತಗೊಳ್ಳುತ್ತಿರುವ ಕೊಡಗಿನ ಪರಿಸರವನ್ನು ಸ್ವಚ್ಛಗೊಳಿಸುವ ಪ್ರಯತ್ನ ನಡೆಸುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Vijaya Karnataka Web arohana teams concer
‘ಆರೋಹಣ ಕೊಡಗು’ ತಂಡದ ಪರಿಸರ ಕಾಳಜಿ


ಆರೋಹಣ ಕೊಡಗು ಮಡಿಕೇರಿಯ ಯೋಗಾಸಕ್ತರು ಪ್ರಕೃತಿ ಪ್ರೇಮಿಗಳನ್ನೊಳಗೊಂಡ ಒಂದು ತಂಡ. ಯೋಗಾಭ್ಯಾಸ, ಕೊಡಗಿನ ಬೆಟ್ಟಗುಡ್ಡಗಳಿಗೆ ಚಾರಣ, ಪ್ರಕೃತಿ ಬಗ್ಗೆ ಕಾಳಜಿ ಮತ್ತು ಜಾಗೃತಿ ಮೂಡಿಸುವುದು ತಂಡದ ಪ್ರಮುಖ ಉದ್ದೇಶ. ಆರೋಹಣ ಕೊಡಗು ಆರಂಭಗೊಂಡು ಒಂದು ವರ್ಷ ಪೂರೈಸಿದ್ದು, ಹಲವು ಕಾರ್ಯಕ್ರಮಗಳನ್ನು ಕೈಗೊಂಡು ಪ್ರಶಂಸೆಗಳಿಸಿದೆ. ವಿಶೇಷವಾಗಿ ತಿಂಗಳಿಗೊಮ್ಮೆ ಯೋಗ ನಡಿಗೆ, ಮಳೆಗಾಲದಲ್ಲಿ ಪ್ರಕೃತಿ ನಡಿಗೆ, ಪರಿಸರಕ್ಕೆ ಪೂರಕ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಂಡದ ಚಾರಣಿಗರು ಆಯಾ ಪ್ರದೇಶದಲ್ಲಿ ಪ್ರವಾಸಿಗರಿಂದ ಕಲುಷಿತಗೊಂಡ ಪರಿಸರವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈಚೆಗೆ ಮಾಂದಲಪಟ್ಟಿಯಲ್ಲಿ ಪ್ರವಾಸಿಗರು ಎಸೆದಿರುವ ನೀರಿನ ಬಾಟಲಿಗಳನ್ನು ವಿಲೇವಾರಿ ಮಾಡಿ ಸ್ವಚ್ಛಗೊಳಿಸಿದ್ದಾರೆ. ಕೋಟೆ ಬೆಟ್ಟ, ಕೋಟೆ ಅಬ್ಬಿ, ತಲಕಾವೇರಿ ಸುತ್ತಮುತ್ತ ಹಾಗೂ ಇತರ ಪ್ರವಾಸಿ ಸ್ಥಳಗಳಿಗೆ ತಂಡ ಚಾರಣ ಕೈಗೊಂಡಾಗ, ಅಲ್ಲಿನ ಸ್ಥಳಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡಿದೆ. ಮಡಿಕೇರಿಯ ಯೋಗ ಗುರು ಕೆ.ಕೆ. ಮಹೇಶ್‌ಕುಮಾರ್‌ ಮತ್ತು ಇ.ಎಲ್‌. ಸುರೇಶ್‌ಕುಮಾರ್‌ ಅವರ ನೇತೃತ್ವದಲ್ಲಿ ಸುಮಾರು 100 ಸದಸ್ಯರನ್ನೊಳಗೊಂಡ ಸಮಾನ ಮನಸ್ಕರ ತಂಡ ಪರಿಸರ ರಕ್ಷಣೆ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಪರಿಸರವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕೆಂದು ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ