ಆ್ಯಪ್ನಗರ

ಅಧಿಕಾರಿಗಳಿಗೆ ‘ಮಾಸ್ಟರ್’ ತರಬೇತಿ

ಮಡಿಕೇರಿಯ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರ ಅಪ್ಪಂಗಳದಲ್ಲಿ ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ಅಧಿಕಾರಿಗಳಿಗೆ ಮಾಸ್ಟರ್ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

ವಿಕ ಸುದ್ದಿಲೋಕ 23 Mar 2016, 4:24 am
ಮಡಿಕೇರಿ: ಮಡಿಕೇರಿಯ ಸಾಂಬಾರ ಬೆಳೆಗಳ ಸಂಶೋಧನಾ ಕೇಂದ್ರ ಅಪ್ಪಂಗಳದಲ್ಲಿ ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ಅಧಿಕಾರಿಗಳಿಗೆ ಮಾಸ್ಟರ್ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
Vijaya Karnataka Web authorities master training
ಅಧಿಕಾರಿಗಳಿಗೆ ‘ಮಾಸ್ಟರ್’ ತರಬೇತಿ

ಅಪ್ಪಂಗಳ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಧ ಡಾ.ಎಸ್.ಜೆ.ಅಂಕೇಗೌಡ ಮೆಣಸಿನ ಬಳ್ಳಿಗೆ ನೀರನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉತ್ಪಾದನೆ ಮತ್ತು ಸಾಂಬಾರ ಬೆಳೆಗಳ ಪೂರ್ವ ಕೊಯ್ಲು ಬಗೆಗಿನ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ಎ.ಪಿ ಅನಂತಕುಮಾರ್, ಡಾ.ಕೆ.ಸಾಜು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ವಿಜ್ಞಾನಿ ಡಾ.ಶರಣ್ ಅರವಿಂದ್ ವಿವಿಧ ಸಂಬಾರ ಬೆಳೆಗಳ ಸಂಪತ್ತಿನ ಬಗ್ಗೆ, ಪ್ರಧಾನ ವಿಜ್ಞಾನಿ ಡಾ.ಎಸ್.ಜೆ.ಅಂಕೆಗೌಡ ಸಂಬಾರ ಬೆಳೆಗಳ ಸಸ್ಯಪಾಲಿಕೆ ಮತ್ತು ನಿರ್ವಹಣೆ ಬಗ್ಗೆ, ಕಲ್ಲಿಕೋಟೆ ಐ.ಸಿ.ಎ.ಆರ್-ಐ.ಐ.ಎಸ್.ಆರ್ ವಿಜ್ಞಾನಿ, ಡಾ.ಬಿಜು ಸಿ.ಎನ್, ಸಂಬಾರ ಬೆಳೆಗಳ ರೋಗಭಾದೆ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಾನಾ ಇಲಾಖೆಗಳಿಂದ 60 ವಿಸ್ತರಣಾ ಅಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ