ಆ್ಯಪ್ನಗರ

ಆಟೊ ಚಾಲಕನ ಹತ್ಯೆ: ಕುಶಾಲನಗರದಲ್ಲಿ ಪ್ರತಿಭಟನೆ

ಆಟೊ ಚಾಲಕ ಪ್ರವೀಣ್‌ ಅವರ ಹತ್ಯೆ ಖಂಡಿಸಿ ಕುಶಾಲನಗರದಲ್ಲಿ ಭಾರಿ ಪ್ರತಿಭಟನೆ ನಡೆಯಿತು.

ವಿಕ ಸುದ್ದಿಲೋಕ 15 Aug 2016, 4:05 pm
ಕುಶಾಲನಗರ: ಆಟೊ ಚಾಲಕ ಪ್ರವೀಣ್‌ ಅವರ ಹತ್ಯೆ ಖಂಡಿಸಿ ಕುಶಾಲನಗರದಲ್ಲಿ ಭಾರಿ ಪ್ರತಿಭಟನೆ ನಡೆಯಿತು.
Vijaya Karnataka Web auto driver murder protest
ಆಟೊ ಚಾಲಕನ ಹತ್ಯೆ: ಕುಶಾಲನಗರದಲ್ಲಿ ಪ್ರತಿಭಟನೆ


ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭಾನುವಾರ ರಾತ್ರಿ ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಪ್ರವೀಣ್‌ ತನ್ನ ಆಟೊದಲ್ಲಿ ವಾಪಸಾಗಿದ್ದರು. ಆದರೆ ರಾತ್ರಿ 11.30 ಕ್ಕೆ ಗುಡ್ಡೆಹೊಸೂರಿನಲ್ಲಿ ಆತನ ಆಟೊ ಪತ್ತೆಯಾಗಿದ್ದು, ಪ್ರವೀಣ್ ಚಿಂತಾಜನಕ ಸ್ಥಿತಿಯಲ್ಲಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗದೆ ಮೃತಪಟ್ಟಿದ್ದಾರೆ.

ಹತ್ಯೆ ಸುದ್ದಿ ಹರಡುತ್ತಿದ್ದಂತೆ ಪ್ರತಿಭಟನಾಕಾರರು ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.ಆರೋಪಿಗಳ ಬಂಧನಕ್ಕೆ ಒಂದು ದಿನದ ಗಡುವು ನೀಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನಿಡಿದ್ದಾರೆ.

ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದ್ದೆದು, ದಕ್ಷಿಣ ವಲಯ ಐ.ಜಿ.ಬಿ.ಕೆ. ಸಿಂಗ್, ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ, ಎಸ್ಪಿ ರಾಜೆಂದ್ರ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ