ಆ್ಯಪ್ನಗರ

ಬಾಳೆ, ಸಿಲ್ವರ್ ತೋಟಕ್ಕೆ ಬೆಂಕಿ

ಪಟ್ಟಣದ ಹೊರ ವಲಯದಲ್ಲಿ ಬಾಳೆ ಹಾಗೂ ಸಿಲ್ವರ್ ಗಿಡಗಳಿದ್ದ ತೋಟವೊಂದು ಭಾನುವಾರ ಅಗ್ನಿಗಾಹುತಿಯಾಗಿ ಬಹುತೇಕ ಸುಟ್ಟು ಕರಕಲಾಗಿದೆ.

ವಿಕ ಸುದ್ದಿಲೋಕ 21 Mar 2016, 4:31 am
ಸೋಮವಾರಪೇಟೆ: ಪಟ್ಟಣದ ಹೊರ ವಲಯದಲ್ಲಿ ಬಾಳೆ ಹಾಗೂ ಸಿಲ್ವರ್ ಗಿಡಗಳಿದ್ದ ತೋಟವೊಂದು ಭಾನುವಾರ ಅಗ್ನಿಗಾಹುತಿಯಾಗಿ ಬಹುತೇಕ ಸುಟ್ಟು ಕರಕಲಾಗಿದೆ.
Vijaya Karnataka Web banana silver garden fire
ಬಾಳೆ, ಸಿಲ್ವರ್ ತೋಟಕ್ಕೆ ಬೆಂಕಿ

ಪಟ್ಟಣ ಹಾಗೂ ಬಳಗುಂದ ಗ್ರಾಮವನ್ನು ಸಂಪರ್ಕಿಸುವ ಕರ್ಕಳ್ಳಿ ಬಾಣೆಯ ಸಮೀಪದಲ್ಲಿ ರಾಜಗೋಪಾಲ ಎಂಬುವವರಿಗೆ ಸೇರಿದ್ದು ಎನ್ನಲಾದ ತೋಟ ಅಗ್ನಿಗಾಹುತಿಯಾಗಿದೆ. ಭಾನುವಾರ ಮಧ್ಯಾಹ್ನ ಬಿಸಿಲಿನ ಧಗೆ ಏರುತ್ತಿದ್ದಂತೆ ಪಟ್ಟಣದ ರೇಂಜರ್ಸ್‌ ಬಡಾವಣೆಗೆ ಹೊಂದಿಕೊಂಡಂತಿದ್ದ ಕರ್ಕಳ್ಳಿ ಬಾಣೆಯ ಕಡೆಯಿಂದ ದಟ್ಟ ಹೊಗೆ ಕಾಣಿಸಿಕೊಂಡು ಒಮ್ಮೆಲೆ ಬೆಂಕಿ ಹೊತ್ತಿ ಉರಿದಿದೆ. ಧಗೆಯೊಂದಿಗೆ ಬೀಸುತ್ತಿದ್ದ ಭಾರಿ ಗಾಳಿಗೆ ಬೆಂಕಿ ಕ್ಷಣ ಮಾತ್ರದಲ್ಲಿ ತೋಟ ಆವರಿಸಿದೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ, ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಬೆಂಕಿ ಹೊತ್ತಿ ಉರಿಯುತ್ತಿದ್ದ ತೋಟಕ್ಕೂ ರೆಂಜರ್ಸ್‌ ಬ್ಲಾಕ್‌ನ ಭಾಗಕ್ಕೂ ಮಧ್ಯೆ ಚಿಕ್ಕ ಕೊಲಿ ಹರಿಯುತ್ತಿದ್ದು ಈ ಭಾಗಕ್ಕೆ ಬೆಂಕಿಯ ಜ್ವಾಲೆ ಹಬ್ಬಲಿಲ್ಲ, ಆದರೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸದೇ ಹೋಗಿದ್ದರೆ ಸಮೀಪದ ಬಳಗುಂದ ಗ್ರಾಮದೆಡೆಯಲ್ಲಿನ ಕಾಫಿ ತೋಟಗಳು ಬೆಂಕಿಗೆ ಆಹುತಿಯಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ