ಆ್ಯಪ್ನಗರ

2021ಕ್ಕೆ ಬೆಂಗ್ಳೂರು-ಮೈಸೂರು ದಶಪಥ ರಸ್ತೆ ಸಂಚಾರಕ್ಕೆ ಮುಕ್ತ

ಬೆಂಗಳೂರು-ಮೈಸೂರು ಮಧ್ಯೆ 10 ಪಥದ ಹೆದ್ದಾರಿ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, 2021ರ ದಸರಾ ವೇಳೆಗೆ ಈ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

Vijaya Karnataka 15 Jun 2019, 9:17 pm
ಮಡಿಕೇರಿ: ಬೆಂಗಳೂರು-ಮೈಸೂರು ಮಧ್ಯೆ 10 ಪಥದ ಹೆದ್ದಾರಿ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, 2021ರ ದಸರಾ ವೇಳೆಗೆ ಈ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.
Vijaya Karnataka Web bangalore mysore 10 lane to 2021
2021ಕ್ಕೆ ಬೆಂಗ್ಳೂರು-ಮೈಸೂರು ದಶಪಥ ರಸ್ತೆ ಸಂಚಾರಕ್ಕೆ ಮುಕ್ತ


ಶುಕ್ರವಾರ ಇಲ್ಲಿನ ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಕೊಡಗು ಪ್ರೆಸ್‌ಕ್ಲಬ್‌ ವತಿಯಿಂದ ಏರ್ಪಡಿಸಿದ್ದ ಸಂವಾದ ಕಾರ‍್ಯಕ್ರಮದಲ್ಲಿ ಮಾತನಾಡಿದರು.

''ಎರಡೂ ನಗರಗಳ ಮಧ್ಯೆ ಬರುವ 6 ಪಟ್ಟಣಗಳಲ್ಲಿ 52.5 ಕಿ.ಮೀ. ದೂರದ ಬೈಪಾಸ್‌ ಕೂಡ ನಿರ್ಮಾಣ ಆಗಲಿದೆ. 7555 ಕೋಟಿ ರೂ. ವೆಚ್ಚದ ಈ ಯೋಜನೆಯ ಸಂಪೂರ್ಣ ಖರ್ಚನ್ನು ಕೇಂದ್ರ ಸರಕಾರವೇ ಭರಿಸುತ್ತಿದೆ. ಎಕರೆಗೆ ಗರಿಷ್ಠ 1.5 ಕೋಟಿ ರೂ. ತನಕ ಪರಿಹಾರವನ್ನು ಕೇಂದ್ರ ಸರಕಾರ ಕೊಡುವುದರಿಂದ ಎಲ್ಲಿಯೂ ಭೂ ಸ್ವಾಧೀನಕ್ಕೆ ಅಡ್ಡಿಯಾಗಿಲ್ಲ. ಈ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ನಂತರ ಮೈಸೂರು-ಬೆಂಗಳೂರು ಮಧ್ಯೆ ಸಂಚಾರಕ್ಕೆ 90 ನಿಮಿಷ ಮಾತ್ರ ಸಾಕಾಗಲಿದೆ,''ಎಂದರು.

''ರಾಜ್ಯದಲ್ಲಿ ಒಂದೂ ರೈಲು ತರಲು ಸಾಧ್ಯವಾಗದ ಸಂಸದರು ಇರುವಾಗ ನಾನು ಮೈಸೂರಿಗೆ 6 ಹೊಸ ರೈಲುಗಳನ್ನು ತಂದಿದ್ದೇನೆ. ದನಗಳ ಮೇವಿನ ತಾಣವಾಗಿದ್ದ ಮೈಸೂರು ವಿಮಾನ ನಿಲ್ದಾಣ ಈಗ ಚಟುವಟಿಕೆಯ ತಾಣವಾಗಿದೆ. ಮೈಸೂರಿನಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಕಲ್ಪಿಸಲಾಗುತ್ತಿದೆ. ಸದ್ಯದಲ್ಲೇ ಕೊಚ್ಚಿ, ಗೋವಾ ಹಾಗೂ ಹೈದರಾಬಾದ್‌ಗೆ ಇಲ್ಲಿಂದ ವಿಮಾನ ಹಾರಾಟ ನಡೆಸಲಿದೆ,''ಎಂದು ಹೇಳಿದರು.

ಬೆಂಗಳೂರು ಎಂಎಐ ವಂಚನೆ ಬಗ್ಗೆ ಪ್ರತಿಕ್ರಿಯಿಸಿ, ''ವಿನಿವಿಂಕ್‌ ಶಾಸ್ತ್ರಿ ಸೇರಿದಂತೆ ಹಲವು ಪ್ರಕರಣಗಳು ನಡೆದರೂ ಸಾರ್ವಜನಿಕರು ಇಂತಹ ಮೋಸದ ಜಾಲಕ್ಕೆ ಮತ್ತೆ ಮತ್ತೆ ಬಲಿಯಾಗುತ್ತಿರುವುದು ಬೇಸರ ತಂದಿದೆ. ಈ ವಿಷಯದಲ್ಲಿ ಜನಸಾಮಾನ್ಯರೇ ಎಚ್ಚೆತ್ತುಕೊಳ್ಳಬೇಕು,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ