ಆ್ಯಪ್ನಗರ

ಬೈಕ್‌ ಮಾರಾಟಗಾರರಿಗೆ ದಂಡ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಲವು ಪ್ರಕರಣಗಳಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿದೆ.

Vijaya Karnataka 2 Jul 2018, 5:00 am
ಮಡಿಕೇರಿ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಲವು ಪ್ರಕರಣಗಳಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿದೆ.
Vijaya Karnataka Web bike seller penalised
ಬೈಕ್‌ ಮಾರಾಟಗಾರರಿಗೆ ದಂಡ


ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ಕುಂಬಾರಹಳ್ಳಿ ನಿವಾಸಿ ಕಿರಣ, ರಾಜರಾಜೇಶ್ವರಿ ಹೀರೋ ಮೋಟಾರ್ಸ್‌ನಲ್ಲಿ ತಮ್ಮ ಹಳೇ ಬೈಕ್‌ ಹಾಗೂ 21 ಸಾವಿರ ರೂ. ನೀಡಿ, ಹೊಸದೊಂದು ಬೈಕ್‌ ಖರೀದಿಸಿದ್ದರು. ಇವರು ಪೂರ್ತಿ ಹಣವನ್ನು ಕಂತುಗಳಲ್ಲಿ ಪಾವತಿಸಿದರೂ ಇನ್ನೂ ಅಸಲು 38,080 ರೂ. ಮತ್ತು ಬಡ್ಡಿ 31,320 ರೂ. ಬಾಕಿ ಇದೆ ಎಂದು ಹೇಳಿ ಹಣ ಪಾವತಿಸಲು ಒತ್ತಾಯಿಸಲಾಗಿತ್ತು. ಆದ್ದರಿಂದ ಅವರು ಕೊಡಗಿನ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರನ್ನು ನೀಡಿದ್ದರು.

ಈ ಹಿನ್ನೆಲೆ ದೂರನ್ನು ನ್ಯಾಯಾಲಯದ ಅಧ್ಯಕ್ಷ ಸಿ.ವಿ.ಮರಗೂರ ಮತ್ತು ಸದಸ್ಯ ಎಂ.ಸಿ ದೇವಕುಮಾರ್‌ ಅವರು ಎರಡು ಪಕ್ಷ ದವರು ಹಾಜರುಪಡಿಸಿದ ದಾಖಲೆಗಳ ಆಧಾರದ ಮೇಲೆ 65,806 ರೂ., ಮಾನಸಿಕ ತೊಂದರೆಗೆ 3 ಸಾವಿರ ರೂ. ಸಹಿತ ಶೇ.12ರಂತೆ ಬಡ್ಡಿಯನ್ನು ಕಿರಣ ಅವರಿಗೆ ಶ್ರೀ ರಾಜರಾಜೇಶ್ವರಿ ಹೀರೋ ಮೋಟಾರ್ಸ್‌ ಭರಿಸಬೇಕೆಂದು ತೀರ್ಪು ನೀಡಿದ್ದಾರೆ.

ಮತ್ತೊಂದು ಪ್ರಕರಣ: ನಗರದ ಸಿ.ವಿ. ಪಲಕಶನ್‌ ಎಂಬವರು ಬೆಂಗಳೂರಿನ ಜೆ.ಆರ್‌.ಇನ್ಫೊಟೆಕ್‌ನಿಂದ 2016ರ ಮಾ. 30 ರಂದು ಕ್ಯಾನನ್‌ ಪ್ರಿಂಟರ್‌ನ್ನು ರೂ.2584 ಗಳಿಗೆ ಖರೀದಿಸಿದ್ದರು. ಆದರೆ, ಒಂದು ವರ್ಷದ ವಾರೆಂಟಿ ಅವಧಿಯ ಒಳಗೆ ಈ ಪ್ರಿಂಟರ್‌ ಕೆಟ್ಟು ಹೋಗಿತ್ತು. ಆದ್ದರಿಂದ ಸಿ.ವಿ. ಪಲಶಲನ್‌ ಅವರು ಈ ಪ್ರಿಂಟರ್‌ ಅನ್ನು ಸರಬರಾಜು ಮಾಡಿದ ಅಂಗಡಿ ವಿರುದ್ಧ ಕೊಡಗಿನ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ದಾಖಲಿಸಿದ್ದರು.

ಈ ದೂರಿನ ದಾಖಲೆಗಳನ್ನು ಪರಿಶೀಲಿಸಿ, ಪ್ರತಿವಾದಿ ವೇದಿಕೆಯ ಮುಂದೆ ಹಾಜರಾಗಿಲ್ಲದ ಕಾರಣ ಏಕಪಕ್ಷೀಯವಾಗಿ 2,580 ರೂ. ಪ್ರಿಂಟರ್‌ ವೆಚ್ಚ, 1,500 ರೂ. ಪರಿಹಾರ ಮತ್ತು 2 ಸಾವಿರ ರೂ. ವೆಚ್ಚ ಪಾವತಿಸಲು ಆದೇಶಿಸಿದೆ. ಈ ಅದೇಶ ಪಾಲಿಸಲು 60 ದಿನಗಳ ಅವಧಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ