ಸುಂಟಿಕೊಪ್ಪ
ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ 2.25 ಲಕ್ಷ ರೂ. ಮೌಲ್ಯದ ಕರಿಮೆಣಸನ್ನು ಕಳವು ಮಾಡಿದ ಮೂವರು ಆರೋಪಿಗಳನ್ನು ವಾಹನ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
7 ಕ್ವಿಂಟಾಲ್ 2.25 ಲಕ್ಷ ಮೌಲ್ಯದ ಕರಿಮೆಣಸು ಕಳ್ಳತನ ನಡೆಸಿದ ನಾಕೂರು ವ್ಯಾಪ್ತಿಯ 3 ಮಂದಿ ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲ್ಲೂರು ಗ್ರಾಮದ ಕಾಫಿ ಬೆಳೆಗಾರರಾದ ಸುನೀತ್ ತಂದೆ ಕುಮಾರಪ್ಪ ಅವರ ತೋಟದಲ್ಲಿ ಬೆಳೆದ ಕರಿಮೆಣಸನ್ನು ಕಟಾವುಗೊಳಿಸಿ 7 ಕ್ವಿಂಟಾಲ್ ಅನ್ನು ತಮ್ಮ ಗೆಸ್ಟ್ಹೌಸ್ ಕೆಳಭಾಗದ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಅವರ ತಂದೆ ಅನಾರೋಗ್ಯದಿಂದ ಮಂಗಳೂರಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಆಸ್ಪತ್ರೆ ದಾಖಲಿಸಿ, ಮರಳಿದ್ದರು.
ಬಳಿಗ ಜೂ. 3ರಂದು ಪುನಃ ಮಂಗಳೂರಿಗೆ ತಂದೆಯವರನ್ನು ನೋಡಿಕೊಳ್ಳಲು ತೆರಳಿದ್ದ ಅವರು, ಜೂ. 21ರಂದು ಬೆಳಗ್ಗೆ 11.30ಕ್ಕೆ ವಾಪಸ್ ತೋಟಕ್ಕೆ ಬಂದು ಗೋದಾಮಿನ ಹತ್ತಿರ ತೆರಳಿ ನೋಡಿದಾಗ ರೋಲಿಂಗ್ ಷಟರ್ಗೆ ಹಾಕಿದ ಬೀಗ ಇಲ್ಲದಿರುವುದು ಕಂಡು ಬಂತು. ಸಂಶಯದಿಂದ ರೋಲಿಂಗ್ ಷಟರನ್ನು ಎತ್ತಿನೋಡಿದಾಗ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸಿನ ಚೀಲಗಳ ಪೈಕಿ 26 ಚೀಲಗಳಲಿದ್ದ ಕರಿಮೆಣಸನ್ನು ಯಾರೋ ಕಳ್ಳರು ಕಳ್ಳವು ಮಾಡಿರುವುದು ಪತ್ತೆಯಾಯಿತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷ ಕ ಪಿ.ಕೆ.ಮುರುಳೀಧರ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷ ಕ ಬಿ.ಎಸ್.ದಿನೇಶ್ ಕುಮಾರ್ ಮತ್ತು ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್.ಜಯರಾಮ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸ್ ಸಿಬ್ಬಂದಿ ನಾಕೂರು ಶಿರಂಗಾಲ ಗ್ರಾಮದ ಉದಯ (27), ವಿನೋದ (20), ಟಿ.ಎಂ.ಸುಬ್ಬುರಾಜು ಆಲಿಯಾಸ್ ಸುಬ್ರಮಣಿ(35) ಎಂಬವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಮೂವರನ್ನು ಬಂಧಿಸಿ 7 ಕ್ವಿಂಟಾಲ್ ಕರಿಮೆಣಸು, ಕೃತ್ಯಕ್ಕೆ ಬಳಸಿದ ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಯು.ಎ.ಸತೀಶ್, ಬಿ.ವಿ.ಹರೀಶ್ಕುಮಾರ್, ಪುನೀತ್ ಕುಮಾರ್,ಅಭಿಲಾಷ್, ವಿಜಯಕುಮಾರ್, ಖಾದರ್, ಮಂಜುನಾಥ್, ಸುಧೀಶಕುಮಾರ್, ಎ.ಆರ್. ಗಣೇಶ್, ರವಿ, ಅಬ್ದುಲ್ರೆಹಮಾನ್, ಸಂಪತ್ಕುಮಾರ್, ಪ್ರಶಾಂತ್ ಪಾಲ್ಗೊಂಡಿದ್ದರು.
ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ 2.25 ಲಕ್ಷ ರೂ. ಮೌಲ್ಯದ ಕರಿಮೆಣಸನ್ನು ಕಳವು ಮಾಡಿದ ಮೂವರು ಆರೋಪಿಗಳನ್ನು ವಾಹನ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
7 ಕ್ವಿಂಟಾಲ್ 2.25 ಲಕ್ಷ ಮೌಲ್ಯದ ಕರಿಮೆಣಸು ಕಳ್ಳತನ ನಡೆಸಿದ ನಾಕೂರು ವ್ಯಾಪ್ತಿಯ 3 ಮಂದಿ ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲ್ಲೂರು ಗ್ರಾಮದ ಕಾಫಿ ಬೆಳೆಗಾರರಾದ ಸುನೀತ್ ತಂದೆ ಕುಮಾರಪ್ಪ ಅವರ ತೋಟದಲ್ಲಿ ಬೆಳೆದ ಕರಿಮೆಣಸನ್ನು ಕಟಾವುಗೊಳಿಸಿ 7 ಕ್ವಿಂಟಾಲ್ ಅನ್ನು ತಮ್ಮ ಗೆಸ್ಟ್ಹೌಸ್ ಕೆಳಭಾಗದ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಅವರ ತಂದೆ ಅನಾರೋಗ್ಯದಿಂದ ಮಂಗಳೂರಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಆಸ್ಪತ್ರೆ ದಾಖಲಿಸಿ, ಮರಳಿದ್ದರು.
ಬಳಿಗ ಜೂ. 3ರಂದು ಪುನಃ ಮಂಗಳೂರಿಗೆ ತಂದೆಯವರನ್ನು ನೋಡಿಕೊಳ್ಳಲು ತೆರಳಿದ್ದ ಅವರು, ಜೂ. 21ರಂದು ಬೆಳಗ್ಗೆ 11.30ಕ್ಕೆ ವಾಪಸ್ ತೋಟಕ್ಕೆ ಬಂದು ಗೋದಾಮಿನ ಹತ್ತಿರ ತೆರಳಿ ನೋಡಿದಾಗ ರೋಲಿಂಗ್ ಷಟರ್ಗೆ ಹಾಕಿದ ಬೀಗ ಇಲ್ಲದಿರುವುದು ಕಂಡು ಬಂತು. ಸಂಶಯದಿಂದ ರೋಲಿಂಗ್ ಷಟರನ್ನು ಎತ್ತಿನೋಡಿದಾಗ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸಿನ ಚೀಲಗಳ ಪೈಕಿ 26 ಚೀಲಗಳಲಿದ್ದ ಕರಿಮೆಣಸನ್ನು ಯಾರೋ ಕಳ್ಳರು ಕಳ್ಳವು ಮಾಡಿರುವುದು ಪತ್ತೆಯಾಯಿತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷ ಕ ಪಿ.ಕೆ.ಮುರುಳೀಧರ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷ ಕ ಬಿ.ಎಸ್.ದಿನೇಶ್ ಕುಮಾರ್ ಮತ್ತು ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್.ಜಯರಾಮ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸ್ ಸಿಬ್ಬಂದಿ ನಾಕೂರು ಶಿರಂಗಾಲ ಗ್ರಾಮದ ಉದಯ (27), ವಿನೋದ (20), ಟಿ.ಎಂ.ಸುಬ್ಬುರಾಜು ಆಲಿಯಾಸ್ ಸುಬ್ರಮಣಿ(35) ಎಂಬವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಮೂವರನ್ನು ಬಂಧಿಸಿ 7 ಕ್ವಿಂಟಾಲ್ ಕರಿಮೆಣಸು, ಕೃತ್ಯಕ್ಕೆ ಬಳಸಿದ ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಯು.ಎ.ಸತೀಶ್, ಬಿ.ವಿ.ಹರೀಶ್ಕುಮಾರ್, ಪುನೀತ್ ಕುಮಾರ್,ಅಭಿಲಾಷ್, ವಿಜಯಕುಮಾರ್, ಖಾದರ್, ಮಂಜುನಾಥ್, ಸುಧೀಶಕುಮಾರ್, ಎ.ಆರ್. ಗಣೇಶ್, ರವಿ, ಅಬ್ದುಲ್ರೆಹಮಾನ್, ಸಂಪತ್ಕುಮಾರ್, ಪ್ರಶಾಂತ್ ಪಾಲ್ಗೊಂಡಿದ್ದರು.