ಆ್ಯಪ್ನಗರ

ಸೇತುವೆ, ರಸ್ತೆ ನಿರ್ಮಾಣ: ಪರಿಶೀಲನೆಗೆ ಸೇನಾ ತಂಡ

ಯುದ್ಧ ಸಂದರ್ಭದಲ್ಲಿ ಬಳಸುವ ಸಾಮಗ್ರಿಗಳಿಂದ ನಿರ್ಮಾಣ ಪರಿಶೀಲನೆ

Vijaya Karnataka 28 Aug 2018, 5:00 am
ಮಡಿಕೇರಿ: ಜಿಲ್ಲೆಯಲ್ಲಿ ತುರ್ತಾಗಿ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿರುವ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ಸೇನಾ ತಂಡ ಭೇಟಿ ನೀಡಲಿದೆ.
Vijaya Karnataka Web bridge road construction army team for scrutiny
ಸೇತುವೆ, ರಸ್ತೆ ನಿರ್ಮಾಣ: ಪರಿಶೀಲನೆಗೆ ಸೇನಾ ತಂಡ


ಕರ್ನಲ್‌ ಮೂರ್ತಿ ಅವರು ಸದ್ಯದಲ್ಲಿಯೇ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅವರು ಜಿಲ್ಲೆಯಲ್ಲಿ ಮಳೆ ಹಾಗೂ ಭೂಕುಸಿತದಿಂದ ಹಾನಿಯಾಗಿರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ತುರ್ತಾಗಿ ಹೇಗೆ ಸಂಪರ್ಕ ಕಲ್ಪಿಸಬಹುದು ಎಂಬುದನ್ನು ಅವರು ಪರಿಶೀಲಿಸಲಿದ್ದಾರೆ. ಸೇನೆಯ ಎಂಇಜಿ ತಂಡ ಜಿಲ್ಲೆಗೆ ಎಲ್ಲ ನೆರವು ನೀಡಲು ಸಿದ್ಧವಿದೆ. ಯುದ್ಧಕಾಲದಲ್ಲಿ ತುರ್ತಾಗಿ ಸೇತುವೆ ಹಾಗೂ ರಸ್ತೆ ನಿರ್ಮಿಸುವ ಸಾಮಗ್ರಿ ಸೇನೆಯಲ್ಲಿದೆ. ಅವುಗಳ ಮೂಲಕ ನಿರ್ಮಾಣದ ಸಾಧ್ಯತೆ ಪರಿಶೀಲಿಸಲಿದ್ದಾರೆ ಎಂದು ನಿವೃತ್ತ ಮೇಜರ್‌ ಬಿದ್ದಂಡ ನಂಜಪ್ಪ ಅವರು ತಿಳಿಸಿದರು.

ನಿವೃತ್ತ ಸೇನಾನಿಗಳು ಜಿಲ್ಲೆಯನ್ನು ಪುನರ್‌ ಕಟ್ಟುವ ಕಾರ್ಯಕ್ಕೆ ಎಲ್ಲ ರೀತಿಯ ನೆರವು ನೀಡುತ್ತಿದ್ದಾರೆ. ಈಗಾಗಲೇ ನಿರಾಶ್ರಿತರ ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯ ಇರುವ ಕಿಟ್‌ಗಳನ್ನು ತರಿಸಲಾಗಿದೆ. ಅದೇ ರೀತಿ ತುರ್ತು ಅಗತ್ಯ ಇರುವ ಫಿನಾಯಿಲ್‌, ರೋಗನಿರೋಧಕ ಔಷಧ ಮುಂತಾದವುಗಳನ್ನು ತರಿಸಲಾಗುವುದು ಎಂದು ಹೇಳಿದರು.

ಕರಿಕೆಯಲ್ಲಿ ನೀರು ಹರಿಯುವ ಸದ್ದು: ಜಿಲ್ಲೆಯ ಗಡಿಭಾಗವಾಗಿರುವ ಕರಿಕೆಯ ಚೆತ್ತುಕಾಯ ಗ್ರಾಮದಲ್ಲಿ ಭೂಮಿಯೊಳಗೆ ನೀರು ಹರಿಯುತ್ತಿರುವ ಸದ್ದು ಕೇಳಿ ಬರುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಅಲ್ಲಿನ ಕಳ್ಳಾರ್‌ ಕೇಶವ್‌ ನಾಯ್ಕ ಅವರ ಮನೆಯ ಹಿತ್ತಲಿನಲ್ಲಿ ನೀರು ಬತ್ತಿದ್ದು, ಅದರೊಳಗಿನಿಂದ ಭಾರೀ ಸದ್ದು ಕೇಳಿ ಬರುತ್ತಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದಾರೆ.

ಮಡಿಕೇರಿಯಲ್ಲಿ ಮಳೆ ಮುಂದುವರಿದಿರುವುದು ಕೂಡ ಜನರ ಆತಂಕಕ್ಕೆ ಕಾರಣವಾಗಿದೆ. ಭಾರಿ ಮಳೆಯಿಲ್ಲದಿದ್ದರೂ ಜಿನುಗು ಮಳೆ ಹಾಗೂ ಕೆಲವೊಮ್ಮೆ ಬಿರುಸಿನ ಮಳೆಯಾಗುತ್ತಿದೆ. ಇದರಿಂದ ಮತ್ತೆ ಮಣ್ಣು ಜಾರುವ ಅಪಾಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ