ಆ್ಯಪ್ನಗರ

ಗಾಂಜಾ ಸೇವನೆ: ಏಳು ಮಂದಿ ಬಂಧನ

ಗಾಂಜಾ ಸೇವನೆ ಮಾಡುತ್ತಿದ್ದ ಯುವಕರ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.

Vijaya Karnataka 11 Jul 2019, 5:06 pm
ಗೋಣಿಕೊಪ್ಪಲು : ಗಾಂಜಾ ಸೇವನೆ ಮಾಡುತ್ತಿದ್ದ ಯುವಕರ ತಂಡದ ಮೇಲೆ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.
Vijaya Karnataka Web cannabis seven arrested
ಗಾಂಜಾ ಸೇವನೆ: ಏಳು ಮಂದಿ ಬಂಧನ


ವೀರಾಜಪೇಟೆ ತಾಲೂಕು ಪೊನ್ನಂಪೇಟೆ ಜೂನಿಯರ್‌ ಕಾಲೇಜ್‌ ಮತ್ತು ರಾಮಕೃಷ್ಣ ಶಾರದಾಶ್ರಮದ ಸಮೀಪದ ಬಸ್‌ ತಂಗುದಾಣದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದವರ ಮೇಲೆ ಪೊನ್ನಂಪೇಟೆ ಪೊಲೀಸ್‌ ಠಾಣಾಧಿಕಾರಿ ಬಿ.ಜಿ. ಮಹೇಶ್‌ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಪೊನ್ನಂಪೇಟೆ ಜೂನಿಯರ್‌ ಕಾಲೇಜು ಜಂಕ್ಷ ನ್‌ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ನಿಸರ್ಗ ನಗರದ ಸಿ.ಜೆ.ರತನ್‌, ಐ.ಎಸ್‌. ಮನು, ಹಳ್ಳಿಗಟ್ಟು ಗ್ರಾಮದ ಬಿ. ನಿಂಗರಾಜು, ಜನತಾ ಕಾಲನಿ ನಿವಾಸಿ ಪಿ.ಎ. ಮುಬಾಷಿರ್‌ ಮತ್ತು ಪೊನ್ನಂಪೇಟೆ ಆಶ್ರಮ ಶಾಲೆಯ ಬಸ್‌ ತಂಗುದಾಣದ ಬಳಿ ಕಾಟ್ರಕೊಲ್ಲಿ ಪೈಸಾರಿ ನಿವಾಸಿ ವಿ.ಎಚ್‌. ಫೈಸಲ್‌, ನಿಸರ್ಗ ನಗರದ ಟಿ.ಜಿ. ಕಾರ್ಯಪ್ಪ, ಬಿ.ವಿ.ವರುಣ್‌ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ದಾಳಿಯಲ್ಲಿ ಸಿಬ್ಬಂದಿ ಎಸ್‌. ಮಣಿಕಂಠ, ಎಂ.ಡಿ. ಮನು ಪಾಲ್ಗೊಂಡಿದ್ದರು.

-------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ