ಆ್ಯಪ್ನಗರ

ಸೆರೆ ಸಿಕ್ಕ ಕಾಳಿಂಗ ಸರ್ಪ ಕಾಡಿಗೆ

ಕೊತ್ತನಳ್ಳಿ ಗ್ರಾಮದ ಮನೆಯ ಸಮೀಪದ ಮರವೊಂದರಲ್ಲಿ ಕಂಡು ಬಂದ ಬೃಹತ್‌ ಕಾಳಿಂಗ ಸರ್ಪವನ್ನು ಸ್ನೇಕ್‌ ರಘು ಸೆರೆಹಿಡಿದು ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

Vijaya Karnataka 18 May 2018, 5:00 am
ಸೋಮವಾರಪೇಟೆ: ಕೊತ್ತನಳ್ಳಿ ಗ್ರಾಮದ ಮನೆಯ ಸಮೀಪದ ಮರವೊಂದರಲ್ಲಿ ಕಂಡು ಬಂದ ಬೃಹತ್‌ ಕಾಳಿಂಗ ಸರ್ಪವನ್ನು ಸ್ನೇಕ್‌ ರಘು ಸೆರೆಹಿಡಿದು ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.
Vijaya Karnataka Web captured serpent released to forest
ಸೆರೆ ಸಿಕ್ಕ ಕಾಳಿಂಗ ಸರ್ಪ ಕಾಡಿಗೆ


ಗ್ರಾಮದ ಪ್ರಸಾದ್‌ ಎಂಬುವವರ ಮನೆಯ ಪಕ್ಕದ ಮರದಲ್ಲಿ ಕಂಡು ಬಂದ ಕಾಳಿಂಗವನ್ನು ಹರಸಾಹಸ ಮಾಡಿ ಸೆರೆ ಹಿಡಿದಿದ್ದಾರೆ. ಕಳೆದ ವಾರದಿಂದ ಮನೆಯ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪವನ್ನು ಹಿಡಿಯಲು ಪ್ರಸಾದ್‌ ಮನವಿ ಮಾಡಿಕೊಂಡಿದ್ದರು.ಗುರುವಾರ ಬೆಳಗ್ಗೆ ಗ್ರಾಮಕ್ಕೆ ತೆರಳಿದ ರಘು ಎಷ್ಟೇ ಹುಡುಕಿದರೂ ಅವರಿಗೆ ಕಾಳಿಂಗ ಕಾಣಿಸಿಕೊಂಡಿಲ್ಲ. ನಂತರ ಮರದ ಮೇಲಿರುವುದು ಗೋಚರವಾಗಿದೆ. ಕಾಳಿಂಗವನ್ನು ಮರದಿಂದ ಇಳಿಯುವಂತೆ ಮಾಡಿ ಸೆರೆ ಹಿಡಿಯಲಾಗಿದೆ. ಸ್ಥಳಕ್ಕೆ ಆರ್‌ಎಫ್‌ಒ ಲಕ್ಷ್ಮೀಕಾಂತ್‌ ತೆರಳಿ, ಕಾಳಿಂಗವನ್ನು ವ್ಯವಸ್ಥಿತವಾಗಿ ಪುಷ್ಪಗಿರಿ ತಪ್ಪಲಿನಲ್ಲಿ ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ