ಆ್ಯಪ್ನಗರ

ಕಾರು ಡಿಕ್ಕಿ: ಮಾಜಿ ಯೋಧ ಸಾವು

ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಕಾರು ಡಿಕ್ಕಿಯೊಡೆದ ಪರಿಣಾಮ ಶನಿವಾರ ಮಾಜಿ ಯೋಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟರು.

Vijaya Karnataka 24 Feb 2019, 5:00 am
ವಿರಾಜಪೇಟೆ : ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಕಾರು ಡಿಕ್ಕಿಯೊಡೆದ ಪರಿಣಾಮ ಶನಿವಾರ ಮಾಜಿ ಯೋಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟರು.
Vijaya Karnataka Web car collision the death of a former soldier
ಕಾರು ಡಿಕ್ಕಿ: ಮಾಜಿ ಯೋಧ ಸಾವು


ಪಟ್ಟಣದ ಐಮಂಡ ರವಿ (47) ಮೃತರು. ತಾಲೂಕಿನ ವಿರಾಜಪೇಟೆ-ಮಡಿಕೇರಿ ಮುಖ್ಯರಸ್ತೆ ಪಕ್ಕದ ಮಲ್ಲಮಟ್ಟಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 7ರ ಸುಮಾರಿನಲ್ಲಿ ಅಂಗಡಿಯಿಂದ ದಿನಪತ್ರಿಕೆ ಕೊಂಡು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.

ವೇಗದ ಸಂಚಾರ ತಡೆಗೆ ಆಗ್ರಹ: ''ಮಲ್ಲಮಟ್ಟಿಯ ಕಡಿದಾದ ತಿರುವು ಅಪಘಾತ ವಲಯವಾಗಿದ್ದು, ಬಹುತೇಕ ವಾಹನ ಚಾಲಕರು ಇಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆಯುತ್ತಿದೆ. ಆದ್ದರಿಂದ ಸಂಬಂಧಿಸಿದವರು ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು,'' ಎಂದು ವಿ.ಪೇಟೆ ಸರಕಾರಿ ಆಸ್ವತ್ರೆ ಶವಗಾರದ ಮುಂದೆ ಸೇರಿದ್ದ ಗ್ರಾಮಸ್ಥರು ಆಗ್ರಹಿಸಿದರು.

ಕಾರು ಚಾಲಕ, ಬೆಂಗಳೂರು ಮೂಲದ ರಮೇಶ್‌ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ