ಭ್ರಷ್ಟಾಚಾರಿಗಳು ಬೀದಿಗೆ ಬರಬೇಕು, ಭ್ರಷ್ಟಾಚಾರಿಗಳನ್ನು ಬೆಂಬಲಿಸಿ ಯಾರೂ ಬೀದಿಗಿಳಿಯಬಾರದು: ಸಿ.ಟಿ.ರವಿ
ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ರನ್ನು ಬಂಧಿಸಿರುವುದನ್ನು ಖಂಡಿಸಿ ಒಕ್ಕಲಿಗರ ಸಂಘ ಸಂಸ್ಥೆಗಳು ಕರೆ ನೀಡಿರುವ ಬುಧವಾರದ ಪ್ರತಿಭಟನೆಗೆ ಜನಸಾಗರವೇ ಹರಿದು ಬಂದಿತ್ತು.
Vijaya Karnataka 12 Sep 2019, 7:44 am
ಮಡಿಕೇರಿ: ಡಿಕೆಶಿ ಬಂಧನವಾಗಿರೋದು ಅವರ ಜಾತಿಯ ಕಾರಣಕ್ಕೆ ಅಲ್ಲ. ಇಡಿಗೆ ಯಾವುದೇ ಜಾತಿ ಇಲ್ಲಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗರ ಪ್ರತಿಭಟನೆ ಬಗ್ಗೆ ಮಾಧ್ಯಮದವರಿಗೆ ಮಡಿಕೇರಿಯಲ್ಲಿಪ್ರತಿಕ್ರಿಯಿಸಿದ ಅವರು, ''ಪ್ರಾಮಾಣಿಕರ ಮನೆಯಲ್ಲಿಕೋಟಿಗಟ್ಟಲೆ ಹಣ ಇರೋಕೆ ಸಾಧ್ಯ ಇದೆಯಾ? ಈ ಪ್ರಶ್ನೆಗೆ ಉತ್ತರ ಹುಡುಕಿದ್ರೆ ಸಮುದಾಯ ಮಾಡ್ತಿರೋದು ಸರಿಯಾ, ತಪ್ಪಾ ಗೊತ್ತಾಗುತ್ತೆ. ಈ ಪ್ರಶ್ನೆಗೆ ಉತ್ತರ ಹುಡುಕದಿದ್ರೆ ಜಾತಿ ಹೆಸರಿನಲ್ಲಿ ಭ್ರಷ್ಟಾಚಾರಿಗಳು ಆಶ್ರಯ ಪಡೆಯುತ್ತಾರೆ. ಭ್ರಷ್ಟಾಚಾರಿಗಳು ಬೀದಿಗೆ ಬರಬೇಕು. ಆದರೆ ಭ್ರಷ್ಟಾಚಾರಿಗಳನ್ನು ಬೆಂಬಲಿಸಿ ಯಾರೂ ಬೀದಿಗಿಳಿಯಬಾರದು,'' ಎಂದರು.
ಒಕ್ಕಲಿಗರ ಮೇಲೆ ಬಿಜೆಪಿ ದ್ವೇಷ ಸಾಧಿಸುತ್ತಿದೆ ಎಂಬ ತಂಜಾವೂರು ಶ್ರೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ''ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಜಾತಿವಿಜಾತಿ ಎನಬೇಡ, ಜಾತ ಒಲಿದಾತನೇ ಸರ್ವಜ್ಞ,'' ಎಂದು ವಚನದ ಮೂಲಕ ತಿರುಗೇಟು ನೀಡಿದರು.
''ಜಾತಿಯಿಂದ ಯಾರೂ ಕೂಡ ದೊಡ್ಡವರಾಗಲ್ಲ, ನೀತಿಯಿಂದ ಮಾತ್ರ ದೊಡ್ಡವರಾಗ್ತಾರೆ. ಅದು ಎಲ್ಲರಿಗೂ ಅನ್ವಯಿಸುತ್ತೆ,'' ಎಂದು ಖಡಕ್ ಪ್ರತಿಕ್ರಿಯೆ ಕೊಟ್ಟರು.
ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗರ ಪ್ರತಿಭಟನೆ ಬಗ್ಗೆ ಮಾಧ್ಯಮದವರಿಗೆ ಮಡಿಕೇರಿಯಲ್ಲಿಪ್ರತಿಕ್ರಿಯಿಸಿದ ಅವರು, ''ಪ್ರಾಮಾಣಿಕರ ಮನೆಯಲ್ಲಿಕೋಟಿಗಟ್ಟಲೆ ಹಣ ಇರೋಕೆ ಸಾಧ್ಯ ಇದೆಯಾ? ಈ ಪ್ರಶ್ನೆಗೆ ಉತ್ತರ ಹುಡುಕಿದ್ರೆ ಸಮುದಾಯ ಮಾಡ್ತಿರೋದು ಸರಿಯಾ, ತಪ್ಪಾ ಗೊತ್ತಾಗುತ್ತೆ. ಈ ಪ್ರಶ್ನೆಗೆ ಉತ್ತರ ಹುಡುಕದಿದ್ರೆ ಜಾತಿ ಹೆಸರಿನಲ್ಲಿ ಭ್ರಷ್ಟಾಚಾರಿಗಳು ಆಶ್ರಯ ಪಡೆಯುತ್ತಾರೆ. ಭ್ರಷ್ಟಾಚಾರಿಗಳು ಬೀದಿಗೆ ಬರಬೇಕು. ಆದರೆ ಭ್ರಷ್ಟಾಚಾರಿಗಳನ್ನು ಬೆಂಬಲಿಸಿ ಯಾರೂ ಬೀದಿಗಿಳಿಯಬಾರದು,'' ಎಂದರು.
ಒಕ್ಕಲಿಗರ ಮೇಲೆ ಬಿಜೆಪಿ ದ್ವೇಷ ಸಾಧಿಸುತ್ತಿದೆ ಎಂಬ ತಂಜಾವೂರು ಶ್ರೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ''ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಜಾತಿವಿಜಾತಿ ಎನಬೇಡ, ಜಾತ ಒಲಿದಾತನೇ ಸರ್ವಜ್ಞ,'' ಎಂದು ವಚನದ ಮೂಲಕ ತಿರುಗೇಟು ನೀಡಿದರು.
''ಜಾತಿಯಿಂದ ಯಾರೂ ಕೂಡ ದೊಡ್ಡವರಾಗಲ್ಲ, ನೀತಿಯಿಂದ ಮಾತ್ರ ದೊಡ್ಡವರಾಗ್ತಾರೆ. ಅದು ಎಲ್ಲರಿಗೂ ಅನ್ವಯಿಸುತ್ತೆ,'' ಎಂದು ಖಡಕ್ ಪ್ರತಿಕ್ರಿಯೆ ಕೊಟ್ಟರು.