ಆ್ಯಪ್ನಗರ

Cauvery River Drying Up: ಬಿಸಿಲ ಧಗೆಗೆ ಬತ್ತುತ್ತಿರುವ ಜೀವನದಿ ಕಾವೇರಿ: ಕುಶಾಲನಗರಕ್ಕೆ ತಲೆದೋರಿದ ನೀರಿನ ಸಮಸ್ಯೆ

Cauvery River Drying Up: ಬೇಸಿಗೆಯಿಂದಾಗಿ ಕಾವೇರಿ ನೀರಿನ ಹರಿವು ಕಡಿಮೆ ಆಗಿ ಕುಶಾಲನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಬೋರ್‌ವೆಲ್‌ಗಳನ್ನು ನಂಬಿ ಬದುಕು ನಡೆಸುವಂತಾಗಿದೆ.

Authored byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 28 Feb 2023, 6:17 pm

ಹೈಲೈಟ್ಸ್‌:

  • ಬೇಸಿಗೆ ಆರಂಭ ಆಗುತ್ತಿದ್ದಂತೆಯೇ ಜೀವನದಿ ಕಾವೇರಿ ನದಿಯ ಹರಿವು ಕುಶಾಲನಗರದ ಭಾಗದಲ್ಲಿ ಕಡಿಮೆಯಾಗುತ್ತಿದೆ
  • ಕುಶಾಲನಗರದ ಕೆಲ ಪ್ರದೇಶಗಳಿಗೆ ಖಾಸಗಿ ಬೋರ್‌ವೆಲ್ ನಿಂದ ನೀರು ಒದಗಿಸಲಾಗುತ್ತಿದೆ. ಬೈಚೆನಹಳ್ಳಿ ಬಳಿ ನಿತ್ಯವೂ ಎರಡು 60 ಎಚ್‌ಪಿ ಪವರ್‌ನ ಪಂಪ್‌ ಮೂಲಕ 9 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ತುಂಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
  • ನದಿಯಲ್ಲಿ ನೀರಿನ ಹರಿವು ನಿಧಾನವಾದರೆ , ನದಿಯ ಎತ್ತರದ ಜಲಾನಯನ ಪ್ರದೇಶದಲ್ಲಿ ಬೆಳೆಗಳಿಗೆ ಪಂಪ್ ಮೂಲಕ ನೀರು ಹರಿಸುವುದನ್ನು ನಿಲ್ಲಿಸುವಂತೆ ಕೊಡಗು ಉಪ ಆಯುಕ್ತರಿಗೆ ಮನವಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Cauvery river
Although the river was overflowing during the rainy season, it is drying up every year during the summer
ಮಡಿಕೇರಿ: ಬೇಸಿಗೆ ಆರಂಭ ಆಗುತ್ತಿದ್ದಂತೆಯೇ ಜೀವನದಿ ಕಾವೇರಿ ನದಿಯ ಹರಿವು ಕುಶಾಲನಗರದ ಭಾಗದಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ಈ ವರ್ಷ ಫೆಬ್ರವರಿ ಅಂತ್ಯಕ್ಕೆ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿ, ಸುತ್ತಲಿನ ಹಳ್ಳಿಗಳಿಗೆ ಹಾಗೂ ಕುಶಾಲನಗರ ಪೇಟೆಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ.
ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಆರಂಭ ಆಗುತ್ತಿದ್ದಂತೆ ಪ್ರತೀ ವರ್ಷ ನದಿ ಬತ್ತುತ್ತಾ ಬರುತ್ತಿರುವುದು ಸಾಮಾನ್ಯವಾಗಿದೆ. ಕುಶಾಲನಗರ ಹಾಗೂ ಪಿರಿಯಾಪಟ್ಟಣದ ಜನರಿಗೆ ಕುಡಿಯುವ ಶುದ್ಧ ನೀರು ಒದಗಿಸಲು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಹಲವು ದಶಕಗಳ ಹಿಂದೆಯೇ ನೀರಿನ ಯೋಜನೆಯನ್ನು ರಚಿಸಲಾಗಿತ್ತು. ಮಂಡಳಿಯು ಕುಶಾಲನಗರ, ಗುಮ್ಮನಕೊಳ್ಳಿ, ಮುಳ್ಳುಸೋಗೆ ಹಳ್ಳಿಯ 30 ಸಾವಿರ ಜನರಿಗೆ ನೀರು ಒದಗಿಸಲು ಬದ್ಧವಾಗಿತ್ತು.

Tiger Attack In Kodagu- ಒಂದೇ ದಿನದ ಅಂತರದಲ್ಲಿ ಒಂದೇ ಕುಟುಂಬದ ಇಬ್ಬರನ್ನು ಕೊಂದ ಹುಲಿ: ಭಾನುವಾರ ಯುವಕ, ಸೋಮವಾರ ತಾತ ಬಲಿ

ಆದ್ರೆ ಈಗ ಕುಶಾಲನಗರವೊಂದಕ್ಕೆಯೇ ಪ್ರತಿನಿತ್ಯ 28 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಬೈಚೇನಹಳ್ಳಿ ಪಟ್ಟಣದ ಬಳಿ ನದಿಯಿಂದ ನೀರನ್ನು ಪಂಪ್ ಮಾಡುವ ಕಾಮಗಾರಿ ಚಾಲನೆಯಲ್ಲಿದೆ. ಕುಶಾಲನಗರದ ಕೆಲ ಪ್ರದೇಶಗಳಿಗೆ ಖಾಸಗಿ ಬೋರ್‌ವೆಲ್ ನಿಂದ ನೀರು ಒದಗಿಸಲಾಗುತ್ತಿದೆ. ಬೈಚೆನಹಳ್ಳಿ ಬಳಿ ನಿತ್ಯವೂ ಎರಡು 60 ಎಚ್‌ಪಿ ಪವರ್‌ನ ಪಂಪ್‌ ಮೂಲಕ 9 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ತುಂಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮಂಡಳಿಯ ಇಂಜಿನಿಯರ್ ಆನಂದ್ ಮಾತನಾಡಿ, ಪ್ರತೀ ಮೂರು ದಿನಕ್ಕೊಮ್ಮೆ, ಎರಡು ಗಂಟೆಯ ಕಾಲ ನದಿಯಿಂದ ನೀರು ಪಂಪ್ ಮಾಡಲಾಗುತ್ತಿದೆ ಎಂದಿದ್ದಾರೆ.

ಜೊತೆಗೆ, ಮುಂದಿನ 10 ದಿನದಲ್ಲಿ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಆದರೆ, ತಕ್ಷಣ ಪರ್ಯಾಯ ಮಾರ್ಗ ಕಂಡುಕೊಳ್ಳುವುದಾಗಿ ಆನಂದ್ ಹೇಳಿದ್ದಾರೆ. ಅಲ್ಲದೆ ನದಿಯಲ್ಲಿ ನೀರಿನ ಹರಿವು ನಿಧಾನವಾದರೆ , ನದಿಯ ಎತ್ತರದ ಜಲಾನಯನ ಪ್ರದೇಶದಲ್ಲಿ ಬೆಳೆಗಳಿಗೆ ಪಂಪ್ ಮೂಲಕ ನೀರು ಹರಿಸುವುದನ್ನು ನಿಲ್ಲಿಸುವಂತೆ ಕೊಡಗು ಉಪ ಆಯುಕ್ತರಿಗೆ ಮನವಿ ಮಾಡುವುದಾಗಿ ತಿಳಿಸಿದರು. ಅಲ್ಲದೆ ನದಿಗೆ ಸುತ್ತಲೂ ದಂಡೆ ನಿರ್ಮಾಣ ಮಾಡಿ, ನೀರು ನದಿಯಲ್ಲಿ ಶೇಖರಣೆ ಆಗಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಡಗಿನ ಮಾಕುಟ್ಟ ಬಳಿ ಕೇರಳ ತ್ಯಾಜ್ಯ: ಪರಿಸರ ರಕ್ಷಣೆಗೆ ಅಧಿಕಾರಿಗಳು ವಿಫಲ: ಸಾರ್ವಜನಿಕರ ಅಸಮಾಧಾನ
ಅಲ್ಲದೆ ಕುಶಾಲನಗರದ ಬಹುತೇಕ ವಾರ್ಡ್‌ಗಳಿಗೆ ಬೋರ್‌ವೆಲ್ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ ಜನರಿಗೂ ನೀರಿನ ಮಿತಬಳಕೆ ಮಾಡುವಂತೆ ಪುರಸಭೆ ಕಡೆಯಿಂದ ಜನಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಪುರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ ನಗರದ ಕಲುಷಿತ ನೀರು ನೇರವಾಗಿ ನದಿ ದಡಕ್ಕೆ ಬಂದು ಸೇರುತ್ತಿದ್ದು, ನದಿಯ ನೀರೂ ಕಲುಷಿತವಾಗಿ ನೇರವಾಗಿ ಉಪಯೋಗಿಸಲು ಯೋಗ್ಯವಲ್ಲದಂತಾಗಿದೆ. ಒಂದು ವೇಳೆ ಬಳಸಿದರೂ ಸಾಂಕ್ರಾಮಿಕ ಖಾಯಿಲೆ ಹಬ್ಬುವ ಭೀತಿ ಎದುರಾಗಿದೆ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ನದಿಯ ಸ್ವಚ್ಛತೆ ಕಾಪಾಡಲು ಹಾಗೂ ನದಿ ನೀರಿನ ಅತಿ ಬಳಕೆಯನ್ನು ತಡೆಯಲು ಸೂಕ್ತ ಯೋಜನೆ ರೂಪಿಸಬೇಕಿದೆ. ಅಲ್ಲದೆ ಈ ಬೇಸಿಗೆಯಲ್ಲಿ ಅಗತ್ಯಕ್ಕೆ ಬೇಕಾದ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ