ಆ್ಯಪ್ನಗರ

ವಿದ್ಯಾರ್ಥಿ ತಂಡದಿಂದ ನೆರೆ ಪೀಡಿತ ಪ್ರದೇಶ ಸ್ವಚ್ಛತೆ

ನೆರೆ ಪೀಡಿತ ಬಡಾವಣೆಗಳ ಮನೆ ಹಾಗೂ ಪರಿಸರ ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರ ತಂಡ ನಿರತವಾಗಿದೆ.

Vijaya Karnataka 22 Aug 2018, 5:34 pm
Vijaya Karnataka Web cleanliness drive by students team
ವಿದ್ಯಾರ್ಥಿ ತಂಡದಿಂದ ನೆರೆ ಪೀಡಿತ ಪ್ರದೇಶ ಸ್ವಚ್ಛತೆ
ಕುಶಾಲನಗರ

ನೆರೆ ಪೀಡಿತ ಬಡಾವಣೆಗಳ ಮನೆ ಹಾಗೂ ಪರಿಸರ ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರ ತಂಡ ನಿರತವಾಗಿದೆ.

ರಾಜ್ಯ ವಿಜ್ಞಾನ ಪರಿಷತ್‌ ಕೊಡಗು ಜಿಲ್ಲಾ ಸಮಿತಿ, ರಾಮನಗರ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿನ ಎನ್‌ಎಸ್‌ಎಸ್‌ ಘಟಕ, ಕುಶಾಲನಗರ ಸರಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ತಂಡ ಮತ್ತು ಸ್ಥಳೀಯ ಸ್ವಯಂಸೇವಕರು, ಪ್ರಾಥಮಿಕ, ಪ್ರೌಢಶಾಲೆ ಶಿಕ್ಷ ಕರು ಜತೆಗೂಡಿ ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ಪ.ಪಂ.ವ್ಯಾಪ್ತಿಯ ಬಸಪ್ಪ, ಕುವೆಂಪು ಬಡಾವಣೆಯಲ್ಲಿ ನೆರೆ ಹಾವಳಿಯಿಂದ ಹಾನಿಯಾದ ಮನೆ ಮನೆಗೆ ತೆರಳಿ ಶುಚಿಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಮನೆಯಲ್ಲಿ ತುಂಬಿ ನಿಂತಿದ್ದ ಕೆಸರು ಮಣ್ಣು ತೆರವುಗೊಳಿಸಿ ಬ್ಲೀಚಿಂಗ್‌ ಪೌಡರ್‌ ಹಾಕಿ ತೊಳೆಯಲಾಗುತ್ತಿದೆ. ಹಾನಿಗೀಡಾದ ಪೀಠೋಪಕರಣಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಈ ತಂಡ ತೊಡಗಿಸಿಕೊಂಡಿದೆ. ಎರಡು ದಿನಗಳಲ್ಲಿ 40 ಕ್ಕೂ ಅಧಿಕ ಮನೆಗಳನ್ನು ಈ ತಂಡ ಶುಚಿಗೊಳಿಸಿದೆ.

ರಾಜ್ಯ ವಿಜ್ಞಾನ ಪರಿಷತ್‌ ಕೊಡಗು ಜಿಲ್ಲಾ ಸಮಿತಿ ಸಂಚಾಲಕ ಟಿ.ಜಿ.ಪ್ರೇಮ್‌ಕುಮಾರ್‌ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್‌, ಮುಳ್ಳುಸೋಗೆ ಗ್ರಾ.ಪಂ. ಪಿಡಿಒ ರಾಜಶೇಖರ್‌, ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷ ಕಿ ಬಿ.ಬಿ.ಸಾವಿತ್ರಿ ಸಹಕಾರ ನೀಡಿದ್ದು, ಪೊಲೀಸ್‌ ಕೆಡೆಟ್‌ ತಂಡದ ಮುಖ್ಯಸ್ಥ ಡಾ.ಸದಾಶಿವ ಪಲ್ಲೇದ್‌, ರಾಮನಗರ ಕಾಲೇಜಿನ ಎನ್‌ಎಸ್‌ಎಸ್‌ ಅಧಿಕಾರಿ ಮಹೇಶ್‌ ಪ್ರಭು, ಕರಾವಿಪ ಜಿಲ್ಲಾ ಸಮಿತಿ ಉಪಾಧ್ಯಕ್ಷ ವೆಂಕಟನಾಯಕ್‌, ಪ್ರಮುಖರಾದ ಶ್ರೀಹರ್ಷ, ಮಂಜುನಾಥ್‌, ಲೋಕೇಶ್‌ ಬಡಾವಣೆಗಳ ನಿವಾಸಿಗಳಾದ ಪ್ರಕಾಶ್‌, ಮುಖೇಶ್‌, ನಿಶಾಂತ್‌ ತಂಡದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ