ಆ್ಯಪ್ನಗರ

ರೆಸಾರ್ಟ್‌ ವಾಸ್ತವ್ಯ ಮುಗಿಸಿ ತೆರಳಿದ ಸಿಎಂ

ಮಡಿಕೇರಿ ಸಮೀಪದ ರೆಸಾರ್ಟ್‌ನಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರು ಭಾನುವಾರ ಮಧ್ಯಾಹ್ನ ಅಲ್ಲಿಂದ ತೆರಳಿದರು.

Vijaya Karnataka 13 May 2019, 5:00 am
ಸಿಎಂ ವಿರುದ್ಧ ಗೋವಿಂದ ಕಾರಜೋಳ ಟೀಕೆಗೆ ಸಚಿವ ಸಾರಾ ಅಸಮಾಧಾನ
Vijaya Karnataka Web cm resorted to resort stay
ರೆಸಾರ್ಟ್‌ ವಾಸ್ತವ್ಯ ಮುಗಿಸಿ ತೆರಳಿದ ಸಿಎಂ


ಮಡಿಕೇರಿ:
ಮಡಿಕೇರಿ ಸಮೀಪದ ರೆಸಾರ್ಟ್‌ನಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರು ಭಾನುವಾರ ಮಧ್ಯಾಹ್ನ ಅಲ್ಲಿಂದ ತೆರಳಿದರು.

ಮೇ 10ರಂದು ಪತ್ನಿ ಅನಿತಾ ಹಾಗೂ ಪುತ್ರ ನಿಖಿಲ್‌ರೊಂದಿಗೆ ವಿಶ್ರಾಂತಿಗಾಗಿ ರೆಸಾರ್ಟ್‌ಗೆ ಆಗಮಿಸಿದ್ದ ಸಿಎಂ, ತಮ್ಮ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ.

ಸಿಎಂಗೆ ಮೊದಲ ದಿನದಿಂದಲೇ ರೆಸಾರ್ಟ್‌ನಲ್ಲಿ ಸಚಿವ ಸಾ.ರಾ. ಮಹೇಶ್‌ ಸಾಥ್‌ ನೀಡಿದ್ದರೆ, ಶನಿವಾರ ಸಂಜೆ ಸಚಿವ ಸಿ.ಎಸ್‌.ಪುಟ್ಟರಾಜು ರೆಸಾರ್ಟ್‌ಗೆ ಆಗಮಿಸಿದ್ದರು.

ರೆಸಾರ್ಟ್‌ನಿಂದ ಹೊರಟ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಾ.ರಾ. ಮಹೇಶ್‌, ಕುಮಾರಸ್ವಾಮಿಯ ರೆಸಾರ್ಟ್‌ ವಾಸ್ತವ್ಯದ ಕುರಿತು ಶಾಸಕ ಗೋವಿಂದ ಕಾರಜೋಳ ಅವರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ''ಗೋವಿಂದ ಕಾರಜೋಳ ಮನೆಗೆ ಹೋಗಿ ಮಲಗೋದಿಲ್ವ? ಚುನಾವಣಾ ಪ್ರಚಾರದ ವೇಳೆ ಅವರು ಎಲ್ಲಿ ಹೋಗ್ತಾರೆ? ಅವರು ಹಿರಿಯ ರಾಜಕಾರಣಿಯಾಗಿದ್ದು ಹೀಗೆ ಮಾತನಾಡಬಾರದು. ಕೆಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕಾರಣಿಗಳನ್ನು ಯಾವ ರೀತಿ ತೋರಿಸುತ್ತಾರೆ ಎಂಬುದನ್ನು ನೋಡಿಲ್ಲವೇ, ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು,'' ಎಂದರು.

''ಕೆಲವು ಮಾಧ್ಯಮಗಳಿಗೆ ಜೆಡಿಎಸ್‌ ನಾಯಕರು ಬಿಟ್ಟರೆ ಬೇರೆ ವಿಚಾರವಿಲ್ಲ. ಅದಕ್ಕಾಗಿ ನಮ್ಮ ಹಿಂದೆ ಬಿದ್ದಿದ್ದಾರೆ,'' ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.

''ಮೇ 23ರ ನಂತರ ದೇಶದಲ್ಲಿ ಕ್ರಾಂತಿ ಆಗುತ್ತದೆ. ಭಾರತೀಯ ಜನತಾ ಪಕ್ಷ ದವರು ಅಧಿಕಾರದಿಂದ ಇಳಿದು ಬೇರೆ ಪಕ್ಷ ದವರು ಅಧಿಕಾರ ಹಿಡಿಯುತ್ತಾರೆ,'' ಎಂದು ಪುನರುಚ್ಚರಿಸಿದರು.

ಭೇಟಿಗೆ ಸಿಗದ ಸಿಎಂ: ಬೆಳೆಗಾರರಿಗೆ ನಿರಾಸೆ

ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಜಿಲ್ಲೆಯ ಕಾಫಿ ಹಾಗೂ ಕಾಳುಮೆಣಸು ಬೆಳೆಗಾರರು ಭಾನುವಾರ ಬೆಳಗ್ಗೆಯೇ ರೆಸಾರ್ಟ್‌ ಬಳಿಗೆ ಆಗಮಿಸಿ ಕಾದಿದ್ದರು. ಕಾಫಿ ಬೆಳೆಗೆ ನೀರು ಹಾಯಿಸಲು ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಮನವಿ ಸಲ್ಲಿಸಲು ಮುಂದಾಗಿದ್ದರು. ರೆಸಾರ್ಟ್‌ಗೆ ಬಿಗಿ ಭದ್ರತೆ ಇದ್ದುದರಿಂದ ಅವರಿಗೆ ಸಿಎಂ ಭೇಟಿಗೆ ಅವಕಾಶ ನೀಡಲಿಲ್ಲ. ಬೆಳೆಗಾರರು ಮಧ್ಯಾಹ್ನ ಸಿಎಂ ತೆರಳುವ ಹೊತ್ತಿನ ಕಾದು ನಿರಾಸೆಯಿಂದ ವಾಪಸಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ