ಆ್ಯಪ್ನಗರ

ಸ.ಸಂಘದ ಚುನಾವಣೆ: ನಾಮಪತ್ರ ಪರಿಶೀಲನೆ

ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಯಲ್ಲಿ ಖಾಲಿ ಇರುವ ಹಿಂದುಳಿದ ‘ಬಿ’ ವರ್ಗದ ನಿರ್ದೇಶಕರ ಒಂದು ಸ್ಥಾನಕ್ಕೆ ಮಾ.27ರಂದು ನಡೆಯಲಿರುವ ಚುನಾ ವಣೆಗೆ ನಾಮಪತ್ರ ಪರಿಶೀಲನೆ ಯನ್ನು ಸಹಕಾರ ಸಂಘದ ಚುನಾವಣಾಧಿಕಾರಿ ಮೋಹನ್ ಪರಿಶೀಲಿಸಿ ತಿರಸ್ಕೃತರ ಹಾಗೂ ಅನುಮೋದಕರನ್ನು ಪ್ರಕಟಿಸಿದರು.

ವಿಕ ಸುದ್ದಿಲೋಕ 23 Mar 2016, 4:26 am
ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
Vijaya Karnataka Web co operative election nomination papers for verification
ಸ.ಸಂಘದ ಚುನಾವಣೆ: ನಾಮಪತ್ರ ಪರಿಶೀಲನೆ

ಕುಶಾಲನಗರ: ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಯಲ್ಲಿ ಖಾಲಿ ಇರುವ ಹಿಂದುಳಿದ ‘ಬಿ’ ವರ್ಗದ ನಿರ್ದೇಶಕರ ಒಂದು ಸ್ಥಾನಕ್ಕೆ ಮಾ.27ರಂದು ನಡೆಯಲಿರುವ ಚುನಾ ವಣೆಗೆ ನಾಮಪತ್ರ ಪರಿಶೀಲನೆ ಯನ್ನು ಸಹಕಾರ ಸಂಘದ ಚುನಾವಣಾಧಿಕಾರಿ ಮೋಹನ್ ಪರಿಶೀಲಿಸಿ ತಿರಸ್ಕೃತರ ಹಾಗೂ ಅನುಮೋದಕರನ್ನು ಪ್ರಕಟಿಸಿದರು.
ಕಳೆದ ವರ್ಷ ನಿರ್ದೇಶಕರಾಗಿದ್ದ ವಿ.ಎನ್.ಮಹೇಶ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆಗೆ ಎ.ಎಂ.ಗಣಿಪ್ರಸಾದ್, ಎಂ.ಜಿ.ಸ್ವಾಮಿ, ರಾಜೇಶ್ ಎಂ.ಎಸ್.ನಾಮಪತ್ರ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ರಾಜೇಶ್ ನಾಮಪತ್ರ ತಿರಸ್ಕಾರ ಮಾಡಬೇಕೆಂದು ಮಡಿಕೇರಿಯ ವಕೀಲರಾದ ಕವಿರಾಜ್ ವಾದ ಮಂಡಿಸಿ ದಾಖಲೆಗಳನ್ನು ಹಾಜರುಪಡಿಸಿದರು.
ರಾಜೇಶ್ ಪರವಾಗಿ ಉಪಾಧ್ಯಕ್ಷ ಕಾರ್ತೀಶನ್ ತಮ್ಮ ಆಕ್ಷೇಪಣೆ ಮಾಡಿ ದರು. ಲಿಖಿತ ದಾಖಲೆಗಳಿಲ್ಲದ ಕಾರಣ ಸಹಕಾರ ಸಂಘಗಳ ಕಾಯ್ದೆ ಕಲಂ 29(ಸಿ) (1)ಜೆ ಕಲಂ 98 ಎನ್ ಹಾಗೂ ನಿಯಮ 13(ಇ)(2)ಸಿ, 14(ಬಿ) ಹಾಗೂ ಸಂಘದ ಉಪನಿಯಮದ ಸಂಖ್ಯೆ 21(10)ಕ್ಕೆ ಒಳಪಟ್ಟು ಎಂ.ಎಸ್ ರಾಜೇಶ್ ರವರ ನಾಮಪತ್ರವನ್ನು ತಿರಸ್ಕರಿಸಿರುವುದಾಗಿ ಹಾಗೂ ಸಿ.ಎಂ ಗಣಿಪ್ರಸಾದ್, ಎಂ.ಜಿ. ಸ್ವಾಮಿ ಇವರು ನಾಮಪತ್ರವನ್ನು ಅನುಮೋದಿಸಿರುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ