ಆ್ಯಪ್ನಗರ

ಕೆರೆಗೆ ಹಾರಿ ಕಾರ್ಮಿಕ ಆತ್ಮಹತ್ಯೆ

ಕೆರೆಗೆ ಹಾರಿ ತೋಟ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 19 Sep 2018, 5:00 am
ಸುಂಟಿಕೊಪ್ಪ: ಕೆರೆಗೆ ಹಾರಿ ತೋಟ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web commits suicide
ಕೆರೆಗೆ ಹಾರಿ ಕಾರ್ಮಿಕ ಆತ್ಮಹತ್ಯೆ


ಶ್ರೀ ದೇವಿ ತೋಟದ ಕಾರ್ಮಿಕ ವಾಸುಪೂಜಾರಿ (48) ಮೃತ. ವಾಸು ಪೂಜಾರಿ ಕಾಣೆಯಾಗಿರುವ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಸಂಬಂಧಿಕರು ದೂರು ದಾಖಲಿಸಿದ್ದರು. ತೋಟದ ಕೆರೆಯ ದಂಡೆ ಮೇಲೆ ಅವರ ಪಾದರಕ್ಷೆ ಕಂಡುಬಂದ ಹಿನ್ನೆಲೆಯಲ್ಲಿ ಈ ವಿಷಯವನ್ನು ವಾಸು ಪೂಜಾರಿ ಸಂಬಂಧಿಕರು ತಿಳಿಸಿದ್ದರು. ಕುಶಾಲನಗರ ಅಗ್ನಿಶಾಮಕ ಸಿಬ್ಬಂದಿ ಮೂಲಕ ಶೋಧ ನಡೆಸಿದಾಗ ಶವ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಠಾಣಾಧಿಕಾರಿ ಜಯಣ್ಣ, ಸಿಬ್ಬಂದಿ ಚಂದ್ರಹಾಸ ಸಾಲಿಯಾನ್‌, ಯಮುನಪ್ಪ ಕೊಲ್ಲಿ, ಪ್ರಶಾಂತ್‌, ಪ್ರೇಮಾನಂದ, ರಾಜೇಶ್‌ ಶರೀರವನ್ನು ಹೊರ ತೆಗೆಯುವಲ್ಲಿ ಶ್ರಮಿಸಿದರು. ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ