ಆ್ಯಪ್ನಗರ

ಅಗಸ್ತ್ಯ ಲಿಂಗ ವಿಸರ್ಜನೆಗೆ ತಡೆ: ಗ್ರಾಮಸ್ಥರ ಸ್ವಾಗತ

ಪುರಾಣ ಪ್ರಸಿದ್ಧ ತಲಕಾವೇರಿಯ ಅಗಸ್ತ್ಯ ಲಿಂಗವನ್ನು ಸಮುದ್ರಕ್ಕೆ ವಿಸರ್ಜನೆ ಮಾಡಲು ಹೊರಟಿದ್ದ ಭಾಗಮಂಡಲ ತಲಕಾವೇರಿ ದೇವಸ್ಥಾನ ಸಮಿತಿಯ ತೀರ್ಮಾನಕ್ಕೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಭಾಗಮಂಡಲ ಸಾರ್ವಜನಿಕರು ಸ್ವಾಗತಿಸಿದ್ದಾರೆ ಎಂದು ಗ್ರಾಮಸ್ಥ ಕುದುಕುಳಿ ಭರತ್‌ ತಿಳಿಸಿದ್ದಾರೆ.

Vijaya Karnataka 14 Apr 2019, 5:00 am
ಮಡಿಕೇರಿ: ಪುರಾಣ ಪ್ರಸಿದ್ಧ ತಲಕಾವೇರಿಯ ಅಗಸ್ತ್ಯ ಲಿಂಗವನ್ನು ಸಮುದ್ರಕ್ಕೆ ವಿಸರ್ಜನೆ ಮಾಡಲು ಹೊರಟಿದ್ದ ಭಾಗಮಂಡಲ ತಲಕಾವೇರಿ ದೇವಸ್ಥಾನ ಸಮಿತಿಯ ತೀರ್ಮಾನಕ್ಕೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಭಾಗಮಂಡಲ ಸಾರ್ವಜನಿಕರು ಸ್ವಾಗತಿಸಿದ್ದಾರೆ ಎಂದು ಗ್ರಾಮಸ್ಥ ಕುದುಕುಳಿ ಭರತ್‌ ತಿಳಿಸಿದ್ದಾರೆ.
Vijaya Karnataka Web court stay on immersion welcomed
ಅಗಸ್ತ್ಯ ಲಿಂಗ ವಿಸರ್ಜನೆಗೆ ತಡೆ: ಗ್ರಾಮಸ್ಥರ ಸ್ವಾಗತ


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸರಕಾರದ ದೇವಸ್ಥಾನಗಳಲ್ಲಿರುವ ವ್ಯವಸ್ಥಾಪನಾ ಸಮಿತಿಯವರು ದೇವಸ್ಥಾನಗಳ ಸಾಂಪ್ರದಾಯಿಕ ವ್ಯವಸ್ಥೆಗಳನ್ನು ನಡೆಸಿಕೊಂಡು ಹೋಗುವುದು ಮುಖ್ಯ. ಆದರೆ ವಿನಾಕಾರಣ ಭಕ್ತರ ನಂಬಿಕೆಗಳಿಗೆ ವಿರುದ್ಧವಾಗಿ ಸಂಪ್ರದಾಯ ಮತ್ತು ಮೂಲ ವಿಗ್ರಹವನ್ನು ಬದಲಾಯಿಸಲು ಮುಂದಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ. ಧರ್ಮ ರಕ್ಷ ಣೆ ಹಿನ್ನೆಲೆ ನ್ಯಾಯಾಲಯ ತೆಗೆದುಕೊಂಡ ತೀರ್ಮಾನಕ್ಕೆ ಸ್ಥಳೀಯ ಭಕ್ತರು ಬದ್ಧರಾಗಿದ್ದೇವೆ. ಜಿಲ್ಲೆಯ ಜನತೆ ಕೂಡ ಮುಂದಿನ ದಿನಗಳಲ್ಲಿ ಇದಕ್ಕೆ ಸಹಕರಿಸುತ್ತ ಅಗಸ್ತ್ಯ ಲಿಂಗ ವಿಸರ್ಜನೆಗೆ ಅವಕಾಶ ನೀಡಬಾರದು,'' ಎಂದು ಮನವಿ ಮಾಡಿದರು.

''ಹಿಂದೂ ಧರ್ಮದ ತಳಹದಿಯೇ, ಸಪ್ತ ನದಿಗಳು ಮತ್ತು ಸಪ್ತ ಋುಷಿಗಳು ಎಂಬುದು ಧಾರ್ಮಿಕ ಮುಖಂಡರ ಮತ್ತು ಪೀಠಾಧಿಪತಿಗಳ ಅಭಿಪ್ರಾಯ. ಅಲ್ಲದೆ ಪುರಾಣಗಳ ಪ್ರಕಾರ ಕಾವೇರಿಯು ಅಗಸ್ತ್ಯ ಮಹರ್ಷಿಗಳ ಕಮಂಡಲುವಿನಿಂದ ಉದ್ಭವಿಸಿದ್ದಾಳೆ ಎಂಬುದು ಹಿಂದೂ ಧಾರ್ಮಿಕ ಭಕ್ತರ ನಂಬಿಕೆಯಾಗಿದೆ. ಇದರೊಂದಿಗೆ ಅಗಸ್ತ್ಯ ಮಹರ್ಷಿಗಳು ಕಾವೇರಿ ನದಿ ಸಮುದ್ರ ಸೇರುವಲ್ಲಿಯವರೆಗೆ ನೂರಾರು ಅಗಸ್ತ್ಯ ಲಿಂಗಗಳನ್ನು ಸ್ಥಾಪಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಅದರಂತೆ ಕೊಡಗಿನಲ್ಲಿಯೂ ಅಗಸ್ತ್ಯ ಲಿಂಗ ಸ್ಥಾಪನೆ ಮಾಡಲಾಗಿದೆ,'' ಎಂದು ಹೇಳಿದರು.

''ಭಕ್ತರ ದೈವಿಕ ಭಾವನೆಯಂತೆ ಭಾಗಮಂಡಲದಲ್ಲಿ ಮಾರ್ಚ್‌ ತಿಂಗಳಿನಲ್ಲಿ ಊರಿನವರು ಸೇರಿ ಮಳೆಗಾಗಿ 2 ಬಾರಿ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ್ದೆವು. ಅಂದು ಮಳೆ ಹಿಂದಿನ ವರ್ಷದಂತೆ ಬಂದಿರಲಿಲ್ಲ. ಆದರೆ ಏ.10ರಂದು ರಾತ್ರಿ ಬಿರುಗಾಳಿ, ಮಿಂಚು, ಗುಡುಗು ಮಿಶ್ರಿತ ಮಳೆಯಾಗಿದೆ. ಅದೇ ದಿನ ಲಿಂಗ ವಿಸರ್ಜನೆಗೆ ತಡೆ ಆದೇಶ ಬಂದಿರುವುದು ಸ್ಥಳೀಯ ಭಕ್ತರ ದೈವಿಕ ಭಾವನೆಗೆ ಪುಷ್ಟಿ ದೊರೆತಂತಾಗಿದೆ,'' ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ವಿನೋದ್‌ ಸಿಂಗ್‌, ಮೂಲೆಮಜಲು ಪೂಣಚ್ಚ, ರಾಧಕೃಷ್ಣ, ರಿಶಿತ್‌ ಮಾದಯ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ