ಆ್ಯಪ್ನಗರ

ಆಂಬ್ಯುಲೆನ್ಸ್‌ನಲ್ಲಿ ಹರಳು ಕಲ್ಲು ಸಾಗಣೆ: ಮಾಲು ಸಮೇತ ಮೂವರ ಸೆರೆ

ಖಾಸಗಿ ಆಂಬ್ಯುಲೆನ್ಸ್‌ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹರಳು ಕಲ್ಲುಗಳ ಸಮೇತ ವಾಹನ ಮತ್ತು ಮೂವರು ಆರೋಪಿಗಳನ್ನು ಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Vijaya Karnataka 20 Dec 2018, 5:00 am
ಕುಶಾಲನಗರ: ಖಾಸಗಿ ಆಂಬ್ಯುಲೆನ್ಸ್‌ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹರಳು ಕಲ್ಲುಗಳ ಸಮೇತ ವಾಹನ ಮತ್ತು ಮೂವರು ಆರೋಪಿಗಳನ್ನು ಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Vijaya Karnataka Web crystal stone shipment in ambulance three men arrested
ಆಂಬ್ಯುಲೆನ್ಸ್‌ನಲ್ಲಿ ಹರಳು ಕಲ್ಲು ಸಾಗಣೆ: ಮಾಲು ಸಮೇತ ಮೂವರ ಸೆರೆ


ಮಡಿಕೇರಿಯಿಂದ ಕುಶಾಲನಗರದ ಕಡೆ ಬರುತ್ತಿದ್ದ ಆಂಬ್ಯುಲೆನ್ಸ್‌ ನಲ್ಲಿ 50 ಸಾವಿರ ರೂ. ಮೌಲ್ಯದ ಹರಳು ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಶಾಲನಗರ ಪೊಲೀಸರು ಕುಶಾಲನಗರದ ಮಾದಾಪಟ್ಟಣ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಬಳಿ ವಾಹನ ತಡೆದು ಮಡಿಕೇರಿಯ ರಫಿವುಲ್ಲಾ ಖಾನ್‌, ಎಂ.ಎಂ.ಸಿರಾಜ್‌, ಸಿಕಂದರ್‌, ಎಂ.ಎಂ.ಮಹಮ್ಮದ್‌ ಆಲಿ ಅವರನ್ನು ವಶಕ್ಕೆ ಪಡೆದುಕೊಂಡರು.

ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಸಲೀಂ ಎಂಬುವವರ ಗೂಡ್ಸ್‌ ಆಟೋದಲ್ಲಿ ಮುಖ್ಯರಸ್ತೆಗೆ ತಂದು ನಂತರ ಮಡಿಕೇರಿಯ ಖಾಸಗಿ ಆಂಬ್ಯುಲೆನ್ಸ್‌ ಬಾಡಿಗೆ ಪಡೆದು ಸಾಗಣೆ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷ ಕ ಕ್ಯಾತೆಗೌಡ, ಠಾಣಾಧಿಕಾರಿ ಜಗದೀಶ್‌, ಹೆಡ್‌ಕಾನ್ಸ್‌ಟೇಬಲ್‌ ರವೀಂದ್ರ, ಕೆ.ಪಿ.ಮಾಚಯ್ಯ, ಸುಧೀಶ್‌ ಕುಮಾರ್‌, ಚಾಲಕ ಪ್ರವೀಣ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ