ಆ್ಯಪ್ನಗರ

ವಿದೇಶದಲ್ಲಿ ನೆಲೆಸಿದ್ದ ತಲಕಾವೇರಿ ಅರ್ಚಕರ ಪುತ್ರಿಯರ ಆಗಮನ, ತಂದೆ-ತಾಯಿಯನ್ನ ನೆನೆದು ಕಣ್ಣೀರು!

ಸದ್ಯ ಮಣ್ಣಿನಡಿಯಲ್ಲಿ ಸಿಲುಕಿರುವ ಐವರ ಪೈಕಿ ಒಂದು ಮೃತ ದೇಹ ಸಿಕ್ಕಿದ್ದು ಇದು ನಾರಾಯಣ ಆಚಾರ್‌ ಅವರ ಸಹೋದರನ್ನದ್ದು ಎಂದು ಪತ್ತೆ ಹಚ್ಚಲಾಗಿದೆ. ಎನ್‌ಡಿಆರ್‌ಎಫ್‌ ಮಣ್ಣಿನಲ್ಲಿ ಸಿಲುಕಿರುವ ಇನ್ನುಳಿದ(ನಾಲ್ಕು) ಜನರ ಮೃತದೇಹಕ್ಕಾಗಿ ಕಾರ್ಯಾಚರಣೆ ಮುಂದುವರಿಸಿದೆ. ಭಾರೀ ಮಹಿಳೆ ಇರುವ ಹಿನ್ನೆಲೆ ಶೋಧ ಕಾರ್ಯಕ್ಕೆ ಸಮಸ್ಯೆಯಾಗುತ್ತಿದೆ.

Vijaya Karnataka Web 10 Aug 2020, 12:44 pm
ಕೊಡಗು: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದ ಹಿನ್ನೆಲೆ ತಲಕಾವೇರಿಯ ದೇವಸ್ಥಾನದ ಅರ್ಚಕರ ಎರಡು ಮನೆಗಳ ಮೇಲೆ ಬಿದ್ದಿತ್ತು. ಈ ಅವಘಡದಲ್ಲಿ ಪ್ರಧಾನ ಅಚ೯ಕ ನಾರಾಯಾಣಾಚಾರ್ ಕುಟುಂಬ ಭೂ ಸಮಾಧಿಯಾಗಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ವಿದೇಶದಲ್ಲಿ ನೆಲೆಸಿದ್ದ ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದಾ ಮತ್ತು ನಮಿತಾ ಕೊಡಗು ಜಿಲ್ಲೆಗೆ ತಲುಪಿದ್ದಾರೆ.
Vijaya Karnataka Web GDizsU2k


ಆಸ್ಟೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ವಾಸಿಸುತ್ತಿರುವ ಪುತ್ರಿಯರಾದ ಶಾರದಾ ಮತ್ತು ನಮಿತಾ ಆಗಮಿಸಿದ್ದು, ಇವರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ರಿ ಶಾರಾದ, ಪ್ರತೀ ದಿನ ಅಪ್ಪ ಅಮ್ಮನೊಂದಿಗೆ ಮಾತನಾಡುತ್ತಿದ್ದೆವು. ಘಟನೆಯಿಂದ ಆಘಾತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಇದೆ ವೇಳೆ ನಾರಾಯಣಾಚಾರ್ ಪುತ್ರಿಯರಿಗೆ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಸಾಂತ್ವನ ಹೇಳಿದರು. ಇನ್ನೊಂದೆಡೆ ಅರ್ಚಕ ನಾರಾಯಣಾಚಾರ್ ಕಣ್ಮರೆ ಬಳಿಕ ಕಾವೇರಿ ಸನ್ನಿಧಿಯಲ್ಲಿ 5 ದಿನಗಳಿಂದ ಪೂಜೆ ನಡೆದಿಲ್ಲ. ಈ ಹಿನ್ನೆಲೆ ಆದಷ್ಟು ಬೇಗ ಪೂಜಾ ಕಾಯ೯ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ.

ಕೊಡಗು: ತಲಕಾವೇರಿ ಅರ್ಚಕರ ಕುಟುಂಬದ ಒಂದು ಮೃತ ದೇಹ ಪತ್ತೆ, ಮುಂದುವರಿದ ಶೋಧ ಕಾರ್ಯ!

ಸದ್ಯ ಮಣ್ಣಿನಡಿಯಲ್ಲಿ ಸಿಲುಕಿರುವ ಐವರ ಪೈಕಿ ಒಂದು ಮೃತ ದೇಹ ಸಿಕ್ಕಿದ್ದು ಇದು ನಾರಾಯಣ ಆಚಾರ್‌ ಅವರ ಸಹೋದರನ್ನದ್ದು ಎಂದು ಪತ್ತೆ ಹಚ್ಚಲಾಗಿದೆ. ಎನ್‌ಡಿಆರ್‌ಎಫ್‌ ಮಣ್ಣಿನಲ್ಲಿ ಸಿಲುಕಿರುವ ಇನ್ನುಳಿದ(ನಾಲ್ಕು)ವರ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ