ಆ್ಯಪ್ನಗರ

ಬಿರುನಾಣಿ - ಶೆಟ್ಟಿಗೇರಿ: ಮಳೆ ಹಾನಿ ಡಿಸಿ ಪರಿಶೀಲನೆ

ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಮಹಾ ಮಳೆಯಿಂದ ಹಾನಿಯಾಗಿರುವ ರಸ್ತೆ, ಕಾಫಿ ತೋಟ, ಮನೆ ಮತ್ತು ಭತ್ತದ ಗದ್ದೆ ಅಲ್ಲದೇ ಭೂಕುಸಿತಕೊಳಗಾಗಿರುವ ಹಲವು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 18 Aug 2019, 5:00 am
ಶ್ರೀಮಂಗಲ: ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಮಹಾ ಮಳೆಯಿಂದ ಹಾನಿಯಾಗಿರುವ ರಸ್ತೆ, ಕಾಫಿ ತೋಟ, ಮನೆ ಮತ್ತು ಭತ್ತದ ಗದ್ದೆ ಅಲ್ಲದೇ ಭೂಕುಸಿತಕೊಳಗಾಗಿರುವ ಹಲವು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web dc inspects rain affected areas
ಬಿರುನಾಣಿ - ಶೆಟ್ಟಿಗೇರಿ: ಮಳೆ ಹಾನಿ ಡಿಸಿ ಪರಿಶೀಲನೆ


ಪೊರಾಡು- ಹೈಸೂಡ್ಲೂರು ಮೂಲಕ ಹಾದು ಹೋಗುವ ಬಿರುನಾಣಿ - ಹುದಿಕೇರಿ ಮುಖ್ಯ ರಸ್ತೆಯಲ್ಲಿ ಪೊರಾಡು ಗ್ರಾಮದಲ್ಲಿ ಭೂಕುಸಿತಕ್ಕೆ ರಸ್ತೆ ಕುಸಿದು ನದಿಗೆ ಬಿದ್ದಿರುವ ಸ್ಥಳವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಈ ಸಂದರ್ಭ ಗ್ರಾಮಸ್ಥರು ಈ ರಸ್ತೆಯನ್ನು ಸಂಚಾರಕ್ಕೆ ಅನುವು ಮಾಡಲು ತಾತ್ಕಾಲಿಕವಾಗಿ ಸರಿಪಡಿಸುವಂತೆ ಮತ್ತು ನಂತರದಲ್ಲಿ ಶಾಶ್ವತವಾಗಿ ಸರಿಪಡಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಇದನ್ನು ಸದ್ಯದ ಮಟ್ಟಿಗೆ ಸರಿಪಡಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿದೆಯೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು.

ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ಮುಖ್ಯ ರಸ್ತೆಯ ಮೂಲಕ ಬಿರುನಾಣಿಗೆ ಸಂಪರ್ಕ ಕಲ್ಪಿಸಲು ಇರುವ ಪರ್ಯಾಯ ಮಾರ್ಗವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಈ ರಸ್ತೆಗೆ ಭೂಕುಸಿತದಿಂದ ಬಿದ್ದಿರುವ ಮರ ಮತ್ತು ಮಣ್ಣು ಬಿದ್ದು ಉಂಟಾಗಿರುವ ಹಾನಿಯನ್ನು ಸರಿಪಡಿಸಿ ಈ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ವಿರಾಜಪೇಟೆ ತಾಲೂಕು ತಹಸೀಲ್ದಾರ್‌ ಪುರಂದರ ಅವರಿಗೆ ಸೂಚಿಸಿದರು.

ನಂತರ ಶ್ರೀಮಂಗಲ-ಹುದಿಕೇರಿ ನಡುವ ಪೊಕಳೆತೋಡು ಎಂಬಲ್ಲಿ ಅಂತರರಾಜ್ಯ ಹೆದ್ದಾರಿ ಕುಸಿದಿರುವ ಜಾಗವನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಗುಟ್ಟುಕೊಲ್ಲಿ ಕಾಲೋನಿಯಲ್ಲಿ ಎರಡು ಮನೆ ಹಾನಿಯಾಗಿರುವುದನ್ನು ಪರಿಶೀಲಿಸಿ, ಅಪ್ಪಚ್ಚಂಗಡ ಮೋಟಯ್ಯ ಅವರ ಭತ್ತದ ಗದ್ದೆಗೆ ಹಾನಿಯಾಗಿರುವ ಸ್ಥಳ ವೀಕ್ಷಿಸಿದರು.

ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಭೂಕುಸಿತದಿಂದ ಕಾಫಿ ತೋಟ ಹಾನಿಯಾಗಿರುವುದು, ರಸ್ತೆ ಹಾನಿ ಆಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಹುದಿಕೇರಿ ಕಂದಾಯ ಪರಿವೀಕ್ಷ ಕ ನಿಶಾನ್‌, ಶ್ರೀಮಂಗಲ ಕಂದಾಯ ಪರಿವೀಕ್ಷ ಕ ಸುಧೀಂದ್ರ, ಕುಟ್ಟ ವೃತ್ತ ನಿರೀಕ್ಷ ಕ ವಿಜಯಕುಮಾರ್‌, ಶ್ರೀಮಂಗಲ ಉಪನಿರೀಕ್ಷ ಕ (ಪ್ರಭಾರ) ಸಾಬು, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ