ಸುನಿಲ್ ಪೊನ್ನೇಟಿ ಮಡಿಕೇರಿ
ಹಾರಂಗಿ ಅಣೆಕಟ್ಟೆಯ ಆಕರ್ಷಣೆ ಹೆಚ್ಚಿಸುವುದರ ಜತೆಗೆ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಅಣೆಕಟ್ಟೆ ಆವರಣದಲ್ಲಿ ನಿರ್ಮಿಸಲಾದ ಸುಂದರ ಉದ್ಯಾನ ನಿರ್ವಹಣೆ ಕೊರತೆಯಿಂದ ಮೂಲೆಗುಂಪಾಗುವ ಆತಂಕ ಎದುರಾಗಿದೆ. ಉದ್ಯಾನದ ಬಗ್ಗೆ ನಿರ್ಲಕ್ಷ ್ಯ ತೋರಿಸುವುದಕ್ಕೆ ಕಾರ್ಮಿಕರ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಚೆಂದದ ಹೂವಿನ ತೋಟ ದಿನದಿಂದ ದಿನಕ್ಕೆ ಕಳೆಗುಂದುತ್ತ ಸಾಗಿದೆ.
ಕೆಆರ್ಎಸ್ ಮಾದರಿ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆ, ಕೊಡಗಿಗೆ ಆಗಮಿಸುವ ಪ್ರವಾಸಿಗರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಮಳೆಗಾಲದಲ್ಲಿ ಅಣೆಕಟ್ಟೆ ತುಂಬಿದಾಗ ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಬಿಡುವ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಆದರೆ ಉಳಿದ ಅವಧಿಯಲ್ಲಿ ಪ್ರವಾಸಿಗರಿಗೆ ನೋಡುವುದಕ್ಕೆ ಇಲ್ಲಿ ಏನೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ವಋುತುಗಳಲ್ಲೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಮಂಡ್ಯದ ಕೆ.ಆರ್.ಎಸ್. ಮಾದರಿ ಹಾರಂಗಿಯಲ್ಲೂ ಚೆಂದದ ಉದ್ಯಾನ ನಿರ್ಮಿಸುವ ಯೋಜನೆ ಸಿದ್ಧವಾಯಿತು.
5 ಕೋಟಿಯ ಯೋಜನೆ: ಹಿಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಹಿನ್ನೆಲೆಯಲ್ಲಿ ಉದ್ಯಾನದ ಕನಸಿಗೆ ಜೀವ ಸಿಕ್ಕಿತ್ತು. ಸುಮಾರು 33 ಎಕರೆಯಷ್ಟು ವಿಸ್ತಾರದ ಜಾಗದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ಉದ್ಯಾನ ರೂಪಿಸಲಾಗಿದೆ. ಪುಷ್ಪೋದ್ಯಾನ, ಕೃತಕ ಜಲಪಾತಗಳು, ಪುಟ್ಟ ಸರೋವರ, ಕಾರಂಜಿ, ಕೂರುವುದಕ್ಕೆ ಕಲ್ಲಿನ ಬೆಂಚು, ವಾಕಿಂಗ್ ಪಾತ್, ವಿಶ್ರಾಂತಿ ಗೃಹ, ಮಕ್ಕಳಿಗೆ ಆಟದ ಪಾರ್ಕ್, ಶುದ್ಧ ಕುಡಿಯುವ ನೀರು, ಶೌಚಾಲಯ ಹೀಗೆ ಪ್ರತಿಯೊಂದನ್ನೂ ವ್ಯವಸ್ಥಿತವಾಗಿ ಉದ್ಯಾನದಲ್ಲಿ ಮಾಡಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದ ಎ.ಆರ್.ಸೀತಾರಾಮ್ ಉದ್ಯಾನ ಉದ್ಘಾಟಿಸಿದ್ದರು.
ನಿರ್ವಹಣೆ ಕೊರತೆ: ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಬರಬರುತ್ತ ಉದ್ಯಾನದ ಕಡೆಗೆ ಇಲಾಖೆ ನಿರ್ಲಕ್ಷ ್ಯ ತೋರಿಸಲಾರಂಭಿಸಿತು. ಉದ್ಯಾನÜಕ್ಕೆ ಈಗ ಭೇಟಿ ನೀಡಿದರೆ ಇದರ ಪರಿಣಾಮವನ್ನು ಕಾಣಬಹುದು. ಹೂ ಗಿಡಗಳ ನಿರ್ವಹಣೆ ಇಲ್ಲ. ಬಹುತೇಕ ಅಲಂಕಾರಿಕ ದೀಪಗಳಲ್ಲಿ ಬಲ್ಬ್ಗಳು ಕಾಣುವುದಿಲ್ಲ. ಪುಟ್ಟ ಕಾಲುವೆಗಳಲ್ಲಿ ಅಳವಡಿಸಿದ್ದ ಬಣ್ಣದ ದೀಪಗಳು ಕಿತ್ತುಬಂದಿವೆ. ಕಾರಂಜಿಗಳು ಕೆಲಸ ಮಾಡುವುದಿಲ್ಲ. ಕುಡಿಯುವ ನೀರಿಗಾಗಿ ಅಳವಡಿಸಿದ್ದ ಪೈಪ್ಗಳು ಒಡೆದು ಹೋದರೂ ಸರಿಪಡಿಸಿಲ್ಲ. ನದಿ ಬದಿಯ ತಡೆಗೋಡೆ ಮುರಿದುಬಿದ್ದಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಮಕ್ಕಳ ಪಾರ್ಕ್ನಲ್ಲಿ ಆಟಿಕೆಗಳು ಹಾಳಾಗಿವೆ. ಉಯ್ಯಾಲೆ ಸೇರಿದಂತೆ ಕಬ್ಬಿಣದ ಆಟಿಕೆಗಳು ತುಕ್ಕು ಹಿಡಿಯುತ್ತಿವೆ. ಗೇಟ್ ಪಕ್ಕ ಶೌಚಾಲಯ ಇದ್ದರೂ ಬೀಗ ತೆರೆಯುವುದಿಲ್ಲ.
ನಿರಾಸೆಯಿಂದ ವಾಪಸ್: ಈಗ ಬೇಸಿಗೆ ರಜೆ ಕಾರಣ ಹೊರ ರಾಜ್ಯ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾರಂಗಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ನಿರ್ವಹಣೆ ಇಲ್ಲದ ಉದ್ಯಾನ ನೋಡಿ ನಿರಾಸೆಯಿಂದ ಮರಳುತ್ತಿದ್ದಾರೆ. ಇದು ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಉದ್ಯಾನದ ಆಕರ್ಷಣೆ ಮತ್ತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಒತ್ತಾಯಗಳು ಕೇಳಿಬರುತ್ತಿದೆ.
ಉಚಿತ ಪ್ರವೇಶ: ಉದ್ಯಾನವನ್ನು ಸಾರ್ವಜನಿಕರ ವೀಕ್ಷ ಣೆಗೆ ಅವಕಾಶ ಮಾಡಿಕೊಟ್ಟು 2 ವರ್ಷಗಳಾಗಿವೆ. ಆದರೆ ಇನ್ನೂ ಪ್ರವೇಶ ದರ ನಿಗದಿ ಮಾಡಿಲ್ಲ. ಉದ್ಯಾನಕ್ಕೆ ಭೇಟಿ ನೀಡುವವರಿಗೆ ಪ್ರವೇಶ ದರ ವಿಧಿಸುವುದರಿಂದ ಆ ಹಣವನ್ನು ನಿರ್ವಹಣೆಗೆ ಬಳಸಬಹುದು ಎನ್ನುವ ಅಭಿಪ್ರಾಯಗಳು ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಇದಕ್ಕೆ ಇಲಾಖೆ ಕೂಡ ಸ್ಪಂದಿಸಿದ್ದು, ಈ ಸಂಬಂಧ ಪ್ರಸ್ತಾವವನ್ನು ಕಳುಹಿಸಿ ಸರಕಾರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
ಸದ್ಯಕ್ಕೆ ಚೆನ್ನಾಗಿದೆ ಸಂಗೀತ ಕಾರಂಜಿ
ಉದ್ಯಾನದ ಪಕ್ಕದಲ್ಲೇ ಸಂಗೀತ ಕಾರಂಜಿ ಕೂಡ ಇದೆ. ಪ್ರತಿ ಸಂಜೆ 7 ಗಂಟೆಯಿಂದ ಪ್ರದರ್ಶನ ಆರಂಭವಾಗುತ್ತದೆ. ಸದ್ಯಕ್ಕಂತೂ ಚೆನ್ನಾಗಿ ನಡೆಯುತ್ತಿದೆ. ಆದರೆ ವಿದ್ಯುತ್ ಕೈ ಕೊಟ್ಟರೆ ಆ ದಿನ ಪ್ರದರ್ಶನ ಇರುವುದಿಲ್ಲ. ಇದು ಕೂಡ ಉಚಿತ ಪ್ರದರ್ಶನವಾಗಿದೆ. ಇಲ್ಲೂ ಪ್ರವೇಶ ದರ ನಿಗದಿ ಮಾಡಿ, ವಿದ್ಯುತ್ ಪೂರೈಕೆ ಸ್ಥಗಿತವಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಸಂಗೀತ ಕಾರಂಜಿಯೂ ಉದ್ಯಾನÜದ ಹಾದಿ ಹಿಡಿಯುವ ದಿನ ದೂರವಿಲ್ಲ. ಕೋಟ್ಯಂತರ ವೆಚ್ಚ ಮಾಡಿ ನಿರ್ಮಿಸಿರುವ ಸಂಗೀತ ಕಾರಂಜಿ ಸ್ಥಗಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆ ಮೇಲಿದೆ.
ಹಾರಂಗಿಯಲ್ಲಿ ಉದ್ಯಾನ ಇದ್ದೂ ಇಲ್ಲದಂತಾಗಿದೆ. ನಿರ್ವಹಣೆಗೆ ಕಾರ್ಮಿಕರನ್ನು ನೇಮಿಸಿಕೊಳ್ಳದ ಕಾರಣ ಅಧಿಕಾರಿಗಳೂ ಆಸಕ್ತಿ ಕಳೆದುಕೊಂಡಿದ್ದಾರೆ. ಕಾರ್ಮಿಕರನ್ನು ನೇಮಿಸಿಕೊಳ್ಳುವಲ್ಲೂ ನಿರ್ಲಕ್ಷ ್ಯ ತೋರಿಸಲಾಗುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ನಿರ್ವಹಣಾ ಕೆಲಸಗಳನ್ನು ಈಗಲೇ ಶುರು ಮಾಡದಿದ್ದಲ್ಲಿ ಉದ್ಯಾನ ಮೂಲೆಗುಂಪು ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.
-ಭಾಸ್ಕರ್ ನಾಯಕ್, ಗ್ರಾಪಂ ಸದಸ್ಯ, ಹಾರಂಗಿ
ಉದ್ಯಾನದ ನಿರ್ಲಕ್ಷ ್ಯ ಮಾಡಿಲ್ಲ. ಕಾರ್ಮಿಕರ ಕೊರತೆ ಸ್ವಲ್ಪ ಇದೆ. ಉಳಿದಂತೆ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಕಾರಂಜಿಗಳನ್ನು ನಿರಂತರ ಅಲ್ಲದಿದ್ದರೂ ಆಗಾಗ ಚಾಲೂಗೊಳಿಸುತ್ತಿರುತ್ತೇವೆ. ಉದ್ಯಾನ ಪ್ರವೇಶ ದರದ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕ ಕೂಡಲೇ ಟಿಕೆಟ್ ವ್ಯವಸ್ಥೆ ಮಾಡಲಾಗುವುದು.
-ನಾಗರಾಜ್, ಸಹಾಯಕ ಎಂಜಿನಿಯರ್, ಹಾರಂಗಿ ಅಣೆಕಟ್ಟೆ
ಹಾರಂಗಿ ಅಣೆಕಟ್ಟೆಯ ಆಕರ್ಷಣೆ ಹೆಚ್ಚಿಸುವುದರ ಜತೆಗೆ ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಸೆಳೆಯುವ ಉದ್ದೇಶದಿಂದ ಅಣೆಕಟ್ಟೆ ಆವರಣದಲ್ಲಿ ನಿರ್ಮಿಸಲಾದ ಸುಂದರ ಉದ್ಯಾನ ನಿರ್ವಹಣೆ ಕೊರತೆಯಿಂದ ಮೂಲೆಗುಂಪಾಗುವ ಆತಂಕ ಎದುರಾಗಿದೆ. ಉದ್ಯಾನದ ಬಗ್ಗೆ ನಿರ್ಲಕ್ಷ ್ಯ ತೋರಿಸುವುದಕ್ಕೆ ಕಾರ್ಮಿಕರ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಚೆಂದದ ಹೂವಿನ ತೋಟ ದಿನದಿಂದ ದಿನಕ್ಕೆ ಕಳೆಗುಂದುತ್ತ ಸಾಗಿದೆ.
ಕೆಆರ್ಎಸ್ ಮಾದರಿ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆ, ಕೊಡಗಿಗೆ ಆಗಮಿಸುವ ಪ್ರವಾಸಿಗರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಮಳೆಗಾಲದಲ್ಲಿ ಅಣೆಕಟ್ಟೆ ತುಂಬಿದಾಗ ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಬಿಡುವ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಆದರೆ ಉಳಿದ ಅವಧಿಯಲ್ಲಿ ಪ್ರವಾಸಿಗರಿಗೆ ನೋಡುವುದಕ್ಕೆ ಇಲ್ಲಿ ಏನೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ವಋುತುಗಳಲ್ಲೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಮಂಡ್ಯದ ಕೆ.ಆರ್.ಎಸ್. ಮಾದರಿ ಹಾರಂಗಿಯಲ್ಲೂ ಚೆಂದದ ಉದ್ಯಾನ ನಿರ್ಮಿಸುವ ಯೋಜನೆ ಸಿದ್ಧವಾಯಿತು.
5 ಕೋಟಿಯ ಯೋಜನೆ: ಹಿಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಹಿನ್ನೆಲೆಯಲ್ಲಿ ಉದ್ಯಾನದ ಕನಸಿಗೆ ಜೀವ ಸಿಕ್ಕಿತ್ತು. ಸುಮಾರು 33 ಎಕರೆಯಷ್ಟು ವಿಸ್ತಾರದ ಜಾಗದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ಉದ್ಯಾನ ರೂಪಿಸಲಾಗಿದೆ. ಪುಷ್ಪೋದ್ಯಾನ, ಕೃತಕ ಜಲಪಾತಗಳು, ಪುಟ್ಟ ಸರೋವರ, ಕಾರಂಜಿ, ಕೂರುವುದಕ್ಕೆ ಕಲ್ಲಿನ ಬೆಂಚು, ವಾಕಿಂಗ್ ಪಾತ್, ವಿಶ್ರಾಂತಿ ಗೃಹ, ಮಕ್ಕಳಿಗೆ ಆಟದ ಪಾರ್ಕ್, ಶುದ್ಧ ಕುಡಿಯುವ ನೀರು, ಶೌಚಾಲಯ ಹೀಗೆ ಪ್ರತಿಯೊಂದನ್ನೂ ವ್ಯವಸ್ಥಿತವಾಗಿ ಉದ್ಯಾನದಲ್ಲಿ ಮಾಡಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದ ಎ.ಆರ್.ಸೀತಾರಾಮ್ ಉದ್ಯಾನ ಉದ್ಘಾಟಿಸಿದ್ದರು.
ನಿರ್ವಹಣೆ ಕೊರತೆ: ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಬರಬರುತ್ತ ಉದ್ಯಾನದ ಕಡೆಗೆ ಇಲಾಖೆ ನಿರ್ಲಕ್ಷ ್ಯ ತೋರಿಸಲಾರಂಭಿಸಿತು. ಉದ್ಯಾನÜಕ್ಕೆ ಈಗ ಭೇಟಿ ನೀಡಿದರೆ ಇದರ ಪರಿಣಾಮವನ್ನು ಕಾಣಬಹುದು. ಹೂ ಗಿಡಗಳ ನಿರ್ವಹಣೆ ಇಲ್ಲ. ಬಹುತೇಕ ಅಲಂಕಾರಿಕ ದೀಪಗಳಲ್ಲಿ ಬಲ್ಬ್ಗಳು ಕಾಣುವುದಿಲ್ಲ. ಪುಟ್ಟ ಕಾಲುವೆಗಳಲ್ಲಿ ಅಳವಡಿಸಿದ್ದ ಬಣ್ಣದ ದೀಪಗಳು ಕಿತ್ತುಬಂದಿವೆ. ಕಾರಂಜಿಗಳು ಕೆಲಸ ಮಾಡುವುದಿಲ್ಲ. ಕುಡಿಯುವ ನೀರಿಗಾಗಿ ಅಳವಡಿಸಿದ್ದ ಪೈಪ್ಗಳು ಒಡೆದು ಹೋದರೂ ಸರಿಪಡಿಸಿಲ್ಲ. ನದಿ ಬದಿಯ ತಡೆಗೋಡೆ ಮುರಿದುಬಿದ್ದಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಮಕ್ಕಳ ಪಾರ್ಕ್ನಲ್ಲಿ ಆಟಿಕೆಗಳು ಹಾಳಾಗಿವೆ. ಉಯ್ಯಾಲೆ ಸೇರಿದಂತೆ ಕಬ್ಬಿಣದ ಆಟಿಕೆಗಳು ತುಕ್ಕು ಹಿಡಿಯುತ್ತಿವೆ. ಗೇಟ್ ಪಕ್ಕ ಶೌಚಾಲಯ ಇದ್ದರೂ ಬೀಗ ತೆರೆಯುವುದಿಲ್ಲ.
ನಿರಾಸೆಯಿಂದ ವಾಪಸ್: ಈಗ ಬೇಸಿಗೆ ರಜೆ ಕಾರಣ ಹೊರ ರಾಜ್ಯ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾರಂಗಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ನಿರ್ವಹಣೆ ಇಲ್ಲದ ಉದ್ಯಾನ ನೋಡಿ ನಿರಾಸೆಯಿಂದ ಮರಳುತ್ತಿದ್ದಾರೆ. ಇದು ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಉದ್ಯಾನದ ಆಕರ್ಷಣೆ ಮತ್ತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಒತ್ತಾಯಗಳು ಕೇಳಿಬರುತ್ತಿದೆ.
ಉಚಿತ ಪ್ರವೇಶ: ಉದ್ಯಾನವನ್ನು ಸಾರ್ವಜನಿಕರ ವೀಕ್ಷ ಣೆಗೆ ಅವಕಾಶ ಮಾಡಿಕೊಟ್ಟು 2 ವರ್ಷಗಳಾಗಿವೆ. ಆದರೆ ಇನ್ನೂ ಪ್ರವೇಶ ದರ ನಿಗದಿ ಮಾಡಿಲ್ಲ. ಉದ್ಯಾನಕ್ಕೆ ಭೇಟಿ ನೀಡುವವರಿಗೆ ಪ್ರವೇಶ ದರ ವಿಧಿಸುವುದರಿಂದ ಆ ಹಣವನ್ನು ನಿರ್ವಹಣೆಗೆ ಬಳಸಬಹುದು ಎನ್ನುವ ಅಭಿಪ್ರಾಯಗಳು ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಇದಕ್ಕೆ ಇಲಾಖೆ ಕೂಡ ಸ್ಪಂದಿಸಿದ್ದು, ಈ ಸಂಬಂಧ ಪ್ರಸ್ತಾವವನ್ನು ಕಳುಹಿಸಿ ಸರಕಾರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
ಸದ್ಯಕ್ಕೆ ಚೆನ್ನಾಗಿದೆ ಸಂಗೀತ ಕಾರಂಜಿ
ಉದ್ಯಾನದ ಪಕ್ಕದಲ್ಲೇ ಸಂಗೀತ ಕಾರಂಜಿ ಕೂಡ ಇದೆ. ಪ್ರತಿ ಸಂಜೆ 7 ಗಂಟೆಯಿಂದ ಪ್ರದರ್ಶನ ಆರಂಭವಾಗುತ್ತದೆ. ಸದ್ಯಕ್ಕಂತೂ ಚೆನ್ನಾಗಿ ನಡೆಯುತ್ತಿದೆ. ಆದರೆ ವಿದ್ಯುತ್ ಕೈ ಕೊಟ್ಟರೆ ಆ ದಿನ ಪ್ರದರ್ಶನ ಇರುವುದಿಲ್ಲ. ಇದು ಕೂಡ ಉಚಿತ ಪ್ರದರ್ಶನವಾಗಿದೆ. ಇಲ್ಲೂ ಪ್ರವೇಶ ದರ ನಿಗದಿ ಮಾಡಿ, ವಿದ್ಯುತ್ ಪೂರೈಕೆ ಸ್ಥಗಿತವಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ಸಂಗೀತ ಕಾರಂಜಿಯೂ ಉದ್ಯಾನÜದ ಹಾದಿ ಹಿಡಿಯುವ ದಿನ ದೂರವಿಲ್ಲ. ಕೋಟ್ಯಂತರ ವೆಚ್ಚ ಮಾಡಿ ನಿರ್ಮಿಸಿರುವ ಸಂಗೀತ ಕಾರಂಜಿ ಸ್ಥಗಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆ ಮೇಲಿದೆ.
ಹಾರಂಗಿಯಲ್ಲಿ ಉದ್ಯಾನ ಇದ್ದೂ ಇಲ್ಲದಂತಾಗಿದೆ. ನಿರ್ವಹಣೆಗೆ ಕಾರ್ಮಿಕರನ್ನು ನೇಮಿಸಿಕೊಳ್ಳದ ಕಾರಣ ಅಧಿಕಾರಿಗಳೂ ಆಸಕ್ತಿ ಕಳೆದುಕೊಂಡಿದ್ದಾರೆ. ಕಾರ್ಮಿಕರನ್ನು ನೇಮಿಸಿಕೊಳ್ಳುವಲ್ಲೂ ನಿರ್ಲಕ್ಷ ್ಯ ತೋರಿಸಲಾಗುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ನಿರ್ವಹಣಾ ಕೆಲಸಗಳನ್ನು ಈಗಲೇ ಶುರು ಮಾಡದಿದ್ದಲ್ಲಿ ಉದ್ಯಾನ ಮೂಲೆಗುಂಪು ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.
-ಭಾಸ್ಕರ್ ನಾಯಕ್, ಗ್ರಾಪಂ ಸದಸ್ಯ, ಹಾರಂಗಿ
ಉದ್ಯಾನದ ನಿರ್ಲಕ್ಷ ್ಯ ಮಾಡಿಲ್ಲ. ಕಾರ್ಮಿಕರ ಕೊರತೆ ಸ್ವಲ್ಪ ಇದೆ. ಉಳಿದಂತೆ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಕಾರಂಜಿಗಳನ್ನು ನಿರಂತರ ಅಲ್ಲದಿದ್ದರೂ ಆಗಾಗ ಚಾಲೂಗೊಳಿಸುತ್ತಿರುತ್ತೇವೆ. ಉದ್ಯಾನ ಪ್ರವೇಶ ದರದ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕ ಕೂಡಲೇ ಟಿಕೆಟ್ ವ್ಯವಸ್ಥೆ ಮಾಡಲಾಗುವುದು.
-ನಾಗರಾಜ್, ಸಹಾಯಕ ಎಂಜಿನಿಯರ್, ಹಾರಂಗಿ ಅಣೆಕಟ್ಟೆ