ಆ್ಯಪ್ನಗರ

ಪುಷ್ಪಗಿರಿಯಲ್ಲಿ ನಾಪತ್ತೆಯಾಗಿದ್ದ ಯುವಕ ಪತ್ತೆ

ತಾಲೂಕಿನ ಪುಷ್ಪಗಿರಿ ಹಾಗೂ ಕುಮಾರಪರ್ವತದಿಂದ ಟ್ರಕ್ಕಿಂಗ್‌ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭ ಸುಬ್ರಹ್ಮಣ್ಯ ಮೀಸಲು ಅರಣ್ಯದಲ್ಲಿ ಭಾನುವಾರ ಸಂಜೆ ನಾಪತ್ತೆಯಾಗಿದ್ದ ಯುವಕ ಮಂಗಳವಾರ ಬೆಳಗ್ಗೆ ಸುಬ್ರಹ್ಮಣ್ಯ ಸಮೀಪದ ಕಲ್ಲುಗುಡ್ಡ ಎಂಬಲ್ಲಿ ಪತ್ತೆಯಾಗಿದ್ದಾರೆ.

Vijaya Karnataka 18 Sep 2019, 5:00 am
ಸೋಮವಾರಪೇಟೆ: ತಾಲೂಕಿನ ಪುಷ್ಪಗಿರಿ ಹಾಗೂ ಕುಮಾರಪರ್ವತದಿಂದ ಟ್ರಕ್ಕಿಂಗ್‌ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭ ಸುಬ್ರಹ್ಮಣ್ಯ ಮೀಸಲು ಅರಣ್ಯದಲ್ಲಿಭಾನುವಾರ ಸಂಜೆ ನಾಪತ್ತೆಯಾಗಿದ್ದ ಯುವಕ ಮಂಗಳವಾರ ಬೆಳಗ್ಗೆ ಸುಬ್ರಹ್ಮಣ್ಯ ಸಮೀಪದ ಕಲ್ಲುಗುಡ್ಡ ಎಂಬಲ್ಲಿಪತ್ತೆಯಾಗಿದ್ದಾರೆ.
Vijaya Karnataka Web detected young man in pushpagiri
ಪುಷ್ಪಗಿರಿಯಲ್ಲಿ ನಾಪತ್ತೆಯಾಗಿದ್ದ ಯುವಕ ಪತ್ತೆ


ಬೆಂಗಳೂರಿನ ಗಾಯತ್ರಿ ನಗರದ ನಿವಾಸಿ ಮೂರ್ತಿ, ವೀಣಾ ದಂಪತಿ ಪುತ್ರ ಖಾಸಗಿ ಕಂಪೆನಿ ಉದ್ಯೋಗಿ ಸಂತೋಷ್‌(25) ಪತ್ತೆಯಾದವರು.

ಬೆಂಗಳೂರಿನಿಂದ 12 ಮಂದಿ ಪುಷ್ಪಗಿರಿಗೆ ಟ್ರಕ್ಕಿಂಗ್‌ಗೆ ಬಂದಿದ್ದರು. ಸುಬ್ರಹ್ಮಣ್ಯ ಮೀಸಲು ಅರಣ್ಯದಲ್ಲಿತೆರಳುತ್ತಿದ್ದ ಸಂದರ್ಭ ಹಿಂದೆ ಉಳಿದಿದ್ದ ಸಂತೋಷ್‌ ತಂಡದಿಂದ ಬೇರ್ಪಟ್ಟು ಭಾನುವಾರ 4.30ರ ಸಮಯದಲ್ಲಿನಾಪತ್ತೆಯಾಗಿದ್ದರು ಎನ್ನಲಾಗಿದೆ. ಕಾಡಿನೊಳಗೆ ಜಿಗಣೆಗಳಿಂದ ಕಚ್ಚಿಸಿಕೊಂಡು, ಎರಡು ರಾತ್ರಿ ಬಂಡೆಗಳ ಮೇಲೆ ಕಳೆದಿದ್ದರು.

ಕಾಡಿನೊಳಗಿಂದ ಸುಬ್ರಮಣ್ಯ ದೇಗುಲಕ್ಕೆ ನೈಸರ್ಗಿಕ ನೀರು ಸರಬರಾಜು ಪೈಪ್‌ನ್ನು ಕಂಡ ಸಂತೋಷ್‌ ಪೈಪ್‌ಲೈನ್‌ನನ್ನೇ ದಾರಿ ಸೂಚಕವಾಗಿ ಬಳಸಿ ಮಂಗಳವಾರ ಬೆಳಗನ ಜಾವ ಕಲ್ಲುಗುಡ್ಡ ಎಂಬ ಸ್ಥಳದಲ್ಲಿದ್ದ ಒಂಟಿ ಮನೆಗೆ ತಲುಪಿದ್ದಾರೆ. ನಂತರ ಸುಬ್ರಹ್ಮಣ್ಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ 12.30ಕ್ಕೆ ಸುಬ್ರಹ್ಮಣ್ಯಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಸಂತೋಷ್‌ ನಾಪತ್ತೆಯಾಗಿರುವ ಬಗ್ಗೆ ಪುಷ್ಪಗಿರಿ ವನ್ಯಜೀವಿ ವಿಭಾಗದ ಸಿಬ್ಬಂದಿಗೆ ಭಾನುವಾರ ಸಂಜೆ 7 ಗಂಟೆಗೆ ಮಾಹಿತಿ ಲಭಿಸಿದ್ದು, ಸೋಮವಾರ ತಡರಾತ್ರಿವರೆಗೂ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಪುತ್ತೂರು ವಲಯದ ಡಿವೈಎಸ್‌ಪಿ ದಿನಕರ್‌ ಶೆಟ್ಟಿ, ಪುಷ್ಪಗಿರಿ ವನ್ಯಜೀವಿ ವಿಭಾಗದ ಎಸಿಎಫ್‌, ದಯಾನಂದ್‌, ಡಿಆರ್‌ಎಫ್‌ಒ ಶಶಿ, ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್‌ ಹಾಗೂ ಸಿಬ್ಬಂದಿ ಮಂಗಳವಾರ ಬೆಳಗ್ಗೆ ಸುಬ್ರಹ್ಮಣ್ಯ ಮೂಲಕ ಕಾರ್ಯಾಚರಣೆಗೆ ತೆರಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ