ಆ್ಯಪ್ನಗರ

ಕುಖ್ಯಾತ ಎಟಿಎಂ ವಂಚಕನ ಬಂಧನ

ಎಟಿಎಂನಲ್ಲಿ ಹಣ ಡ್ರಾ ಮಾಡುವ ಸಂದರ್ಭ ಹಿರಿಯರಿಗೆ ಹಾಗೂ ಅಶಕ್ತರಿಗೆ ವಂಚಿಸುತ್ತಿದ್ದ ಕುಖ್ಯಾತ ಖದೀಮನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಈತನಿಂದ 1.20 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ.

Vijaya Karnataka 25 Jun 2018, 5:00 am
ಮಡಿಕೇರಿ: ಎಟಿಎಂನಲ್ಲಿ ಹಣ ಡ್ರಾ ಮಾಡುವ ಸಂದರ್ಭ ಹಿರಿಯರಿಗೆ ಹಾಗೂ ಅಶಕ್ತರಿಗೆ ವಂಚಿಸುತ್ತಿದ್ದ ಕುಖ್ಯಾತ ಖದೀಮನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಈತನಿಂದ 1.20 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ.
Vijaya Karnataka Web detention of notorious atm craft
ಕುಖ್ಯಾತ ಎಟಿಎಂ ವಂಚಕನ ಬಂಧನ


ರಾಜ್ಯದ ನಾನಾ ಕಡೆಯಲ್ಲಿ ಎಟಿಎಂ ಪಕ್ಕದಲ್ಲಿ ಹೊಂಚು ಹಾಕಿ ಅಸಹಾಯಕರು ಬಂದಾಗ ಅವರಿಗೆ ನೆರವು ನೀಡುವಂತೆ ನಟಿಸಿ ನಂತರ ಹಣ ಲಪಾಟಯಿಸುತ್ತಿದ್ದ ಮೈಸೂರು ಸಿದ್ದಾರ್ಥ ನಗರದ ನಿವಾಸಿ ರಾಜು ಪ್ರಹ್ಲಾದ್‌ ಕುಲಕರ್ಣಿ ಎಂಬಾತ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮೇ.31 ರಂದು ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ 67 ವರ್ಷದ ಕೆ.ಯು.ಲೋಕೇಶ್‌ ಎಂಬವರು ನಗರದ ವಿಜಯ ಬ್ಯಾಂಕ್‌ ಎಟಿಎಂನಲ್ಲಿ ಹಣ ಡ್ರಾ ಮಾಡಲು ಆಗಮಿಸಿದ್ದಾರೆ. ಇದೇ ಸಂದರ್ಭ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಅವರಿಗೆ ನೆರವು ನೀಡಲು ಮುಂದೆ ಬಂದು 10 ಸಾವಿರ ರೂ. ಹಣ ಡ್ರಾ ಮಾಡಿ ನೀಡಿದ್ದಾನೆ. ಆದರೆ, ಲೋಕೇಶ್‌ ಅವರ ಎಟಿಎಂ ಕಾರ್ಡ್‌ ತಾನು ಇಟ್ಟುಕೊಂಡು ನಕಲಿ ಕಾರ್ಡ್‌ ನೀಡಿದ್ದಾನೆ.

ಜೂ.4 ರಂದು ಮತ್ತೆ ನಗರಕ್ಕೆ ಬಂದ ಲೋಕೇಶ್‌ ಅವರು ಎಟಿಎಂನಲ್ಲಿ ಹಣ ಡ್ರಾ ಮಾಡಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಕೆನರಾ ಬ್ಯಾಂಕ್‌ಗೆ ತೆರಳಿ ಕಾರ್ಡ್‌ ಪರೀಕ್ಷಿಸುವ ಸಂದರ್ಭ ಅದು ನಕಲಿ ಎನ್ನುವುದು ತಿಳಿಯಿತು. ಆತಂಕದಿಂದ ಖಾತೆ ಪರಿಶೀಲಿಸಿದಾಗ ಅವರ ಅರಿವಿಗೆ ಬಾರದೆ ಒಟ್ಟು 1.90 ಲಕ್ಷ ರೂ. ಡ್ರಾ ಆಗಿರುವುದು ತಿಳಿದು ಬಂದಿದೆ. ಈ ಕುರಿತು ನಗರ ಠಾಣೆಗೆ ದೂರು ನೀಡಿದರು. ಮೇ.31ರಂದು ನೆರವು ನೀಡಿದ ವ್ಯಕ್ತಿ ಬೇರೆ ಬೇರೆ ಎಟಿಎಂಗಳಲ್ಲಿ ಹಣ ಪಡೆದಿದ್ದ.

ಎಸ್ಪಿ ರಾಜೇಂದ್ರ ಪ್ರಸಾದ್‌ ಅವರ ನಿರ್ದೇಶನದಂತೆ ಡಿವೈಎಸ್ಪಿ ಸುಂದರ್‌ರಾಜ್‌ ನೇತೃತ್ವದಲ್ಲಿ ನಗರ ಠಾಣೆ ಸಿಐ ಉಮೇಶ್‌ ಉಪ್ಪಳಿಕೆ, ಎಸ್‌ಐ ಷಣ್ಮುಗಂ ಅವರು ತನಿಖೆ ಕೈಗೊಂಡಿದ್ದರು. ನಂತರ ಸಿಸಿಟಿವಿ ಆಧರಿಸಿ ಆರೋಪಿಯ ಸುಳಿವು ಪತ್ತೆಹಚ್ಚಲಾಯಿತು.

ಮೈಸೂರಿನ ಸಿದ್ದಾರ್ಥ ನಗರದದಲ್ಲಿ ವಾಸವಿದ್ದ ಮೂಲತಃ ಬೆಳಗಾವಿಯ ರಾಜು ಪ್ರಹ್ಲಾದ್‌ ಕುಲಕರ್ಣಿ(46) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿ ಹಲವು ಕಡೆಗಳಲ್ಲಿ ವಂಚಿಸಿರುವುದು ಪತ್ತೆಯಾಯಿತು. ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ 5 ಪ್ರಕರಣಗಳು, ಉಪ್ಪಾರಪೇಟೆಯಲ್ಲಿ 1 ಪ್ರಕರಣದಲ್ಲಿ ಈತ ಬೇಕಾದವನಾಗಿದ್ದು , ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಹುಬ್ಬಳ್ಳಿಯಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ.

ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಎಎಸ್‌ಐ ಸುಬ್ಬಯ್ಯ, ಸಿಬ್ಬಂದಿ ಸಿದ್ದಾರ್ಥ, ಕೆ.ಕೆ.ದಿನೇಶ್‌, ಮಧುಸೂದನ್‌, ಗಿರೀಶ್‌, ರಾಜೇಶ್‌ ಮುಂತಾದವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ