ಆ್ಯಪ್ನಗರ

ಶಿಥಿಲಾವಸ್ಥೆಯಲ್ಲಿ ಸೇತುವೆ: ಅಪಾಯಕ್ಕೆ ಆಹ್ವಾನ

ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಕ್ಕರಳ್ಳಿ ಸೇತುವೆ ಶಿಥಿಲಾವಸ್ಥೆ ತಲುಪಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.

Vijaya Karnataka 18 Aug 2019, 5:00 am
ಸೋಮವಾರಪೇಟೆ: ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಕ್ಕರಳ್ಳಿ ಸೇತುವೆ ಶಿಥಿಲಾವಸ್ಥೆ ತಲುಪಿದ್ದು, ಅನಾಹುತಕ್ಕೆ ಆಹ್ವಾನ ನೀಡುತ್ತಿದೆ.
Vijaya Karnataka Web dilapidated bridge inviting danger
ಶಿಥಿಲಾವಸ್ಥೆಯಲ್ಲಿ ಸೇತುವೆ: ಅಪಾಯಕ್ಕೆ ಆಹ್ವಾನ


ಮಾದಾಪುರ, ಗರ್ವಾಲೆ, ಸೂರ್ಲಬ್ಬಿ, ಕಿಕ್ಕರಳ್ಳಿ, ಬೆಟ್ಟದಕೊಪ್ಪ, ಶಾಂತಳ್ಳಿ ಸಂಪರ್ಕ ರಸ್ತೆಯಲ್ಲಿ ಈ ಸೇತುವೆ ಇದ್ದು, ಟಿಂಬರ್‌ ಲಾರಿಗಳು, ಮರಳು ಸಾಗಿಸುವ ಟಿಪ್ಪರ್‌ಗಳು, ಖಾಸಗಿ ಕಾರುಗಳು ಇದೇ ಹಳೆಯದಾದ ಸೇತುವೆ ಮೇಲೆ ಸಂಚರಿಸುತ್ತವೆ.

ವಾರ್ಷಿಕವಾಗಿ 400ರಿಂದ 500 ಇಂಚಿನಷ್ಟು ಮಳೆ ಕಿಕ್ಕರಳ್ಳಿಯ ಸುತ್ತಮುತ್ತಲ ಗ್ರಾಮದಲ್ಲಿ ಸುರಿಯುತ್ತದೆ. ಪ್ರತಿ ವರ್ಷ ಜೂನ್‌, ಜುಲೈ, ಆಗಸ್ಟ್‌ ತಿಂಗಳಲ್ಲಿ ಬೀಳುವ ಧಾರಾಕಾರ ಮಳೆಗೆ ಸೇತುವೆಯಲ್ಲಿ ನೀರು ರಭಸದಿಂದ ಹರಿಯುತ್ತದೆ. ಇಂತಹ ಸಂದರ್ಭದಲ್ಲಿ ವಾಹನಗಳು ತೆರಳುವಾಗ ಸೇತುವೆ ಕುಸಿದರೆ ಅನಾಹುತವಾಗಬಹುದು. ಅಲ್ಲದೇ, ಸೇತುವೆ ಸಮೀಪ ಇಳಿಜಾರು ಪ್ರದೇಶವಾಗಿದ್ದು, ಆತಂಕ ಎದುರಾಗಿದೆ. ಕೂಡಲೇ ಹೊಸ ಸೇತುವೆ ನಿರ್ಮಾಣವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ