ಆ್ಯಪ್ನಗರ

ಧರೆಗುರುಳಿದ ಶಿಥಿಲ ಕಟ್ಟಡ

Vijaya Karnataka 10 Sep 2019, 5:00 am
ಕುಶಾಲನಗರ
Vijaya Karnataka Web dilapidated building collapse
ಧರೆಗುರುಳಿದ ಶಿಥಿಲ ಕಟ್ಟಡ


ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿಶಿಥಿಲಗೊಂಡಿದ್ದ ಎರಡಂತಸ್ತಿನ ಕಟ್ಟಡ ಧರೆಗುರುಳಿದೆ.

ಜಾಮಿಯಾ ಮಸೀದಿ ಮುಂಭಾಗ ರಾಜ್ಯ ಹೆದ್ದಾರಿ ಒತ್ತಿನಲ್ಲಿರುವ ಪುರಾತನ ಕಾಲದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಪಟ್ಟಣ ಪಂಚಾಯ್ತಿಗೆ ಸೇರಿದೆ ಎನ್ನಲಾದ ಈ ಕಟ್ಟಡದ ವಾಜ್ಯ ನ್ಯಾಯಾಲಯದಲ್ಲಿರುವ ಕಾರಣ ಅಪಾಯಕಾರಿ ಸ್ಥಿತಿಯಲ್ಲಿದ್ದ ಇದನ್ನು ಕೆಡವಲು ಮುಂದಾಗಿರಲಿಲ್ಲ. ಕಳೆದ ವರ್ಷ ಮಳೆಗೆ ಕಟ್ಟಡದ ಒಂದು ಭಾಗದ ಗೋಡೆ ಕುಸಿದು ಬಿದ್ದಿತ್ತು. ಸೋಮವಾರ ಬೆಳಗ್ಗೆ ಕೂಡ ಕಟ್ಟಡದ ಒಂದು ಪಾಶ್ರ್ವ ಸಂಪೂರ್ಣ ನೆಲಕಚ್ಚಿದೆ.

ಜನನಿಬಿಡ ಪ್ರದೇಶದಲ್ಲಿರುವ ಇದೇ ಕಟ್ಟಡದ ಮುಂಭಾಗ ಸಾವಿರಾರು ಸಂಖ್ಯೆಯ ಸಾರ್ವಜನಿಕರು ಅಡ್ಡಾಡುತ್ತಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಇದೀಗ ಕಟ್ಟಡ ಕುಸಿದಿರುವ ಕಾರಣ ಸಮೀಪದ ಇಂದಿರಾ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಸಂಚಾರ ನಿರ್ಬಂಧಿಸಲಾಗಿದೆ. ಕಟ್ಟಡದ ಉಳಿದ ಅವಶೇಷ ಯಾವುದೇ ಸಂದರ್ಭ ಬೇಕಿದ್ದರೂ ನೆಲಕ್ಕುರುಳುವ ಸಾಧ್ಯತೆಯಿದ್ದ ಜನಸಂಚಾರ ಸ್ಥಗಿತಗೊಳಿಸಿ ಪೊಲೀಸ್‌ ಇಲಾಖೆಯಿಂದ ಬ್ಯಾರಿಕೆಡ್‌ ಅಳವಡಿಸಲಾಗಿದೆ.

ಇದರಿಂದಾಗಿ ಇಂದಿರಾ ಬಡಾವಣೆಗೆ ತೆರಳುವವರು ಸುತ್ತಿ ಬಳಸಿ ಪರ್ಯಾಯ ಮಾರ್ಗದಿಂದ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಟ್ಟಡವನ್ನು ಕೂಡಲ ಸಂಪೂರ್ಣವಾಗಿ ನೆಲಸಮಗೊಳಿಸಬೇಕು. ಕಟ್ಟಡ ಸುತ್ತಮುತ್ತ ಕಾಡು ಆವರಿಸಿದ್ದು, ಅಕ್ರಮ ಚಟುವಟಿಕೆಗಳಿಗೆ ಆಹ್ವಾನ ನೀಡುತ್ತಿದೆ. ಆಶ್ರಯ ಇಲ್ಲದ ಕೆಲವು ಅಸ್ವಸ್ಥರು ಈ ಕಟ್ಟಡದ ಮೇಲಂತಸ್ಥಿನ ಕೊಠಡಿಗಳಲ್ಲಿಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಪ್ರಾಣಹಾನಿ ಸಮಭವಿಸುವ ಮುನ್ನ ಸಂಬಂಧಿಸಿದವರು ಮಾತುಕತೆ ಮೂಲಕ ಕಟ್ಟಡ ನೆಲಸಮಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಸಮೀಪದ ರಸ್ತೆಯನ್ನು ಮುಕ್ತಗೊಳಿಸಬೇಕಿದೆ ಎಂದು ಇಂದಿರಾ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ