ಆ್ಯಪ್ನಗರ

ಚೆಟ್ಟಳ್ಳಿಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ 28 ರಿಂದ

ಆದಿ ದ್ರಾವಿಡ ಸೇವಾ ಸಮಾಜದಿಂದ ಆಯೋಜನೆ ವಿಕ ಸುದ್ದಿಲೋಕ ಸಿದ್ದಾಪುರ ಆದಿ ದ್ರಾವಿಡ ಜನಾಂಗದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮೇ 28 ಹಾಗೂ 29 ರಂದು ಚೆಟ್ಟಳ್ಳಿ ಪ್ರೌಢÜ ಶಾಲಾ ...

ವಿಕ ಸುದ್ದಿಲೋಕ 27 May 2017, 9:00 am

ಸಿದ್ದಾಪುರ: ಆದಿ ದ್ರಾವಿಡ ಜನಾಂಗದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮೇ 28 ಹಾಗೂ 29 ರಂದು ಚೆಟ್ಟಳ್ಳಿ ಪ್ರೌಢÜ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆದಿ ದ್ರಾವಿಡ ಸೇವಾ ಸಮಾಜದ ವಿರಾಜಪೇಟೆ ತಾಲೂಕು ಅಧ್ಯಕ್ಷ ಶಿವಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಿ ದ್ರಾವಿಡ ಸಮಾಜವನ್ನು ಬಲಪಡಿಸಲು ಹಾಗೂ ಸಮಾಜ ಭಾಂದವರು ಒಗ್ಗೂಡಿಸಲು ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 28 ಹಾಗೂ 29 ರಂದು ಪುರುಷರಿಗೆ ವಾಲಿಬಾಲ್‌, ಹಗ್ಗ ಜಗ್ಗಾಟ ಮತ್ತು ಓಟದ ಸ್ಪರ್ಧೆ, ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ಓಟದ ಸ್ಪರ್ಧೆ ಹಾಗೂ ಕಬಡ್ಡಿ ಮಕ್ಕಳಿಗೆ ಓಟದ ಸ್ಪರ್ಧೆ ಹಾಗೂ ಇತರ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಶಿವಪ್ಪ ತಿಳಿಸಿದರು.

ಕ್ರೀಡಾಕೂಟದ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್‌, ಕೆ.ಜಿ. ಬೋಪಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ತಾಲೂಕು ಪಂಚಾಯಿತಿ ಸದಸ್ಯ ಬಲ್ಲರಂಡ ಮಣಿ ಉತ್ತಪ್ಪ, ಆದಿ ದ್ರಾವಿಡ ಸಮಾಜದ ರಾಜ್ಯಾಧ್ಯಕ್ಷ ಶೀನ ಹಾಗೂ ಇನ್ನಿತರರು ಭಾಗವಹಿಸಲ್ಲಿದರೆ ಎಂದು ತಿಳಿಸಿದರು.

ಮಾಹಿತಿಗೆ ಮೊ: 9480905970, 9482980947 ಸಂರ್ಪಕಿಸುವಂತೆ ತಿಳಿಸಿದರು.

ನಿವೇಶನ ನೀಡಲು ಒತ್ತಾಯ: ಜಿಲ್ಲೆಯಲ್ಲಿ ಆದಿ ದ್ರಾವಿಡ ಜನಾಂಗದ ಬಾಂಧÜವರು ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ತೋಟಗಳ ಲೈನ್‌ ಮನೆಗಳಲ್ಲಿ ವಾಸ ಮಾಡಿಕೊಂಡಿದ್ದು ಇವರಿಗೆ ವಾಸಿಸಲು ಸ್ವಂತ ಮನೆಯಿಲ್ಲ. ಇವರಿಗೆ ನಿವೇಶನವನ್ನು ಸರಕಾರದಿಂದ ನೀಡಿ ಶಾಶ್ವತ ಸೂರುಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಜನಾಂಗದವರಿಗೆ ಕಂದಾಯ ಇಲಾಖೆಯಿಂದ ನೀಡುವ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲಗಳು ಆಗುತ್ತಿದ್ದು, ಇದನ್ನು ಸರಕಾರ ಹಾಗೂ ಜಿಲ್ಲಾಡಳಿತ ಸರಿಪಡಿಸಬೇಕೆಂದು ಆಗ್ರಹಿಸಿದರು.

ಆದಿ ದ್ರಾವಿಡ ಸೇವಾ ಸಮಾಜದ ಜಿಲ್ಲಾ ಅಧ್ಯಕ್ಷ ಜರ್ನಾದನ, ಗೌರವಾಧ್ಯಕ್ಷ ಓಂಕಾರಪ್ಪ, ಉಪಾಧ್ಯಕ್ಷ ಕುಶಾಲಪ್ಪ, ತಾಲೂಕು ಉಪಾಧ್ಯಕ್ಷ ಚಂದ್ರಶೇಕರ್‌, ಕ್ರೀಡಾ ಸಮಿತಿ ಅಧ್ಯಕ್ಷ ವಿಶ್ವನಾಥ್‌, ಕಾರ್ಯದರ್ಶಿ ಜಗನ್ನಾಥ ಹಾಜರಿದ್ದರು.

Vijaya Karnataka Web district level games in chettalli
ಚೆಟ್ಟಳ್ಳಿಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ 28 ರಿಂದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ