ಆ್ಯಪ್ನಗರ

ದಾನಿಗಳು ನೀಡಿದ ಬಟ್ಟೆ ಬೀದಿಪಾಲು

ದಾನಿಗಳಿಂದ ಸಂಗ್ರಹಿಸಿ ನಿರಾಶ್ರಿತರಿಗೆ ವಿತರಿಸಲು ಇಟ್ಟಿದ್ದ ಬಟ್ಟೆಗಳನ್ನು ಜಿಲ್ಲಾಡಳಿತ ಇಂದಿರಾನಗರದ ಮುಖ್ಯರಸ್ತೆಯಲ್ಲಿ ಸುರಿದಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.

Vijaya Karnataka 30 Aug 2018, 12:14 pm
ಮಡಿಕೇರಿ: ದಾನಿಗಳಿಂದ ಸಂಗ್ರಹಿಸಿ ನಿರಾಶ್ರಿತರಿಗೆ ವಿತರಿಸಲು ಇಟ್ಟಿದ್ದ ಬಟ್ಟೆಗಳನ್ನು ಜಿಲ್ಲಾಡಳಿತ ಇಂದಿರಾನಗರದ ಮುಖ್ಯರಸ್ತೆಯಲ್ಲಿ ಸುರಿದಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.
Vijaya Karnataka Web Clothes 1


ಇಂದಿರಾನಗರದಲ್ಲಿ ಸಾಕಷ್ಟು ಮಂದಿ ಮನೆ, ಮಠ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈಗಾಗಲೇ ಸಾಕಷ್ಟು ನೊಂದಿರೋ ಅವರಿಗೆ ಜಿಲ್ಲಾಡಳಿತ ನೋವಿನ ಮೇಲೆ ನೋವು ಕೊಡುತ್ತಿದೆ. ದಾನಿಗಳು ಸಂಗ್ರಹಿಸಿ ನೀಡಿರೋ ಬಟ್ಟೆಗಳನ್ನು ತಂದು ಇಂದಿರಾನಗರದ ಮುಖ್ಯರಸ್ತೆಯಲ್ಲಿ ಸುರಿದಿದ್ದಾರೆ ಎಂದು ಆರೋಪಿಸಿದ ನಿವಾಸಿಗಳು ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿ ಸ್ಥಳದಲ್ಲೇ ಪ್ರತಿಭಟಿಸಿದರು.

ಇನ್ನು ಈ ರೀತಿ ಬಟ್ಟೆಗಳನ್ನು ಸುರಿದಿರೋ ಕಡೆ ನಾಯಿಗಳು ಬಟ್ಟೆಯ ಮೇಲೆ ಬಂದು ಮಲಗಿಕೊಂಡಿದ್ದವು. ಜನರನ್ನು ನಾಯಿಗಳಂತೆ ನೋಡಬೇಡಿ. ನಿರಾಶ್ರಿತರಿಗಾಗಿ ನೀಡಿರೋ ವಸ್ತುಗಳನ್ನು ಅವರಿಗೆ ಸರಿಯಾಗಿ ತಲುಪಿಸಿ. ಈ ರೀತಿ ತಂದು ಸುರಿಯುವುದಕ್ಕಿಂತ ಅಗತ್ಯ ಇದ್ದವರಿಗೆ ನೀಡಿದರೆ ಉಪಕಾರವಾದರೂ ಆಗುತ್ತೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದಿರಾನಗರ ಸ್ಲಂ ಏರಿಯಾ ನಿಜ. ಹಾಗಂತ ನಮಗೆ ಗತಿ ಇಲ್ಲ ಎಂದು ಹಳೆ ಬಟ್ಟೆಗಳನ್ನು ಎಸೆದು ಹೋಗಿದ್ದೀರ? ಈವರೆಗೆ ಇಂದಿರಾನಗರಕ್ಕೆ ಒಂದು ಬಾರಿಯಾದರೂ ಭೇಟಿ ನೀಡಿದ್ದೀರ? ನಮ್ಮನ್ನೇನು ಭಿಕ್ಷೆ ಬೇಡೋರು ಅನ್ಕೊಂಡಿದ್ದೀರ? ಮೊದಲು ಇದನ್ನು ತೆರವುಗೊಳಿಸಿ ಮೊದಲೇ ಇದು ಸ್ಲಂ. ಮತ್ತಷ್ಟು ಈ ಏರಿಯಾಗಳನ್ನು ಹೊಲಸು ಮಾಡಬೇಡಿ ಎಂದು ಇಂದಿರಾನಗರ ನಿವಾಸಿ ಸೋಮಶೇಖರ್‌ ಅಸಮಾಧಾನ ವ್ಯಕ್ತಪಡಿಸಿದರು.

ನಿವಾಸಿಗಳ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಅಲ್ಲಿಂದ ಬಟ್ಟೆಗಳನ್ನು ಮತ್ತೆ ಜಿಲ್ಲಾಡಳಿತ ಭವನಕ್ಕೆ ಸಾಗಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ