ಆ್ಯಪ್ನಗರ

​ಸಾಕಾನೆ ದಾಳಿಯಿಂದ ಮಾವುತ ಗಾಯ

ದುಬಾರೆಯಲ್ಲಿ ಮಾವುತನ ಮೇಲೆ ಸಾಕಾನೆ ದಾಳಿ ನಡೆಸಿದ್ದು, ಮಾವುತ ಅಪ್ಪಯ್ಯ ಗಂಭೀರ ಗಾಯಗೊಂಡಿದ್ದಾರೆ.

Vijaya Karnataka Web 1 Feb 2018, 2:35 pm
ಮಡಿಕೇರಿ: ದುಬಾರೆಯಲ್ಲಿ ಮಾವುತನ ಮೇಲೆ ಸಾಕಾನೆ ದಾಳಿ ನಡೆಸಿದ್ದು, ಮಾವುತ ಅಪ್ಪಯ್ಯ ಗಂಭೀರ ಗಾಯಗೊಂಡಿದ್ದಾರೆ. ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಈ ಘಟನೆ
Vijaya Karnataka Web elephant attack on mahout
​ಸಾಕಾನೆ ದಾಳಿಯಿಂದ ಮಾವುತ ಗಾಯ

ನಡೆದಿದೆ.

ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡ ಬಳಿಕ ಮಡಿಕೇರಿಗೆ ಕರೆದೊಯ್ಯಲಾಗಿದೆ. ಮಾವುತ ಅಪ್ಪಯ್ಯ ಸಾಕಾನೆ ಗೋಪಿಯನ್ನು ಕಾಡಿಗಟ್ಟಲು ಸರಪಳಿಯಿಂದ ಬಿಚ್ಚುತ್ತಿದ್ದ ಸಂದರ್ಭದಲ್ಲಿ ದಂತದಿಂದ ತಿವಿದು ಗಾಯಗೊಳಿಸಿದೆ.

ಮೂವತ್ತೈದು ವರ್ಷ ಪ್ರಾಯದ ಗೋಪಿಯ ಮಾವುತನಾಗಿ ಅಪ್ಪಯ್ಯ ಕಳೆದ ಆರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇತ್ತೀಚೆಗೆ ಕಾರ್ತಿಕ ಎಂಬ ಸಾಕಾನೆ ಇಬ್ಬರು ಮಾವುತರನ್ನು ಬಲಿ ಪಡೆದಿದ್ದು, ಮತ್ತೊಬ್ಬರನ್ನು ಗಾಯಗೊಳಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ