ಆ್ಯಪ್ನಗರ

ಚಿಕ್ಕತ್ತೂರು ಅರಣ್ಯದ ಬಳಿ ಗಂಡಾನೆ ಶವ ಪತ್ತೆ

ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಚಿಕ್ಕತ್ತೂರು ಅರಣ್ಯ ಬಳಿ ಗಂಡು ಕಾಡಾನೆಯ ಕೊಳೆತ ಶವ ಪತ್ತೆಯಾಗಿದೆ.

Vijaya Karnataka 8 Jul 2019, 5:00 am
ಕುಶಾಲನಗರ: ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಚಿಕ್ಕತ್ತೂರು ಅರಣ್ಯ ಬಳಿ ಗಂಡು ಕಾಡಾನೆಯ ಕೊಳೆತ ಶವ ಪತ್ತೆಯಾಗಿದೆ.
Vijaya Karnataka Web elephant deadbody found
ಚಿಕ್ಕತ್ತೂರು ಅರಣ್ಯದ ಬಳಿ ಗಂಡಾನೆ ಶವ ಪತ್ತೆ

ಚಿಕ್ಕತ್ತೂರು ಸಮೀಪದ ತೇಗದ ತೋಪಿನೊಳಗೆ ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಾಡಾನೆ ಸತ್ತಿರುವುದು ಕಂಡುಬಂದಿದೆ. ಬಹುದಿನಗಳ ಹಿಂದೆಯೇ ಇದು ಮೃತಪಟ್ಟಿದ್ದು, ಶವ ಕೊಳೆತಿದೆ. ಈ ಕಾಡಾನೆಯ ಸೊಂಡಿಲು ಕೋರೆಗಳೊಳಗೆ ಸಿಕ್ಕಿಹಾಕಿಕೊಂಡ ಕಾರಣ ಆಹಾರ ಸೇವನೆ ಸಾಧ್ಯವಾಗದೇ ಸಾವು ಸಂಭವಿಸಿರಬಹುದೆಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಚಿಕ್ಕಅಳುವಾರದ ವನ್ಯಜೀವಿ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕಿ ಡಾ.ದಿವ್ಯಾ ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳಕ್ಕೆ ಎಸಿಎಫ್‌ ಕೊಚ್ಚೇರ ನೆಹರು ಭೇಟಿ ನೀಡಿ ಪರಿಶೀಲಿಸಿದರು. ನಂತರ ಆನೆಯ ಕಳೇಬರದ ಅಂತ್ಯಕ್ರಿಯೆ ನಡೆಯಿತು. ಅತ್ತೂರು ಉಪ ವಲಯ ಅರಣ್ಯಾಧಿಕಾರಿ ಡಿ'ಸೋಜ ಹಾಗೂ ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ