ಆ್ಯಪ್ನಗರ

ಕಾಡಾನೆ ಅಟ್ಟುವ ಕಾರ್ಯಾಚರಣೆ

ನಗರದ ಸುತ್ತಮುತ್ತ ಓಡಾಡುತ್ತ ಸಾರ್ವಜನಿಕರನ್ನು ಭಯಭೀತಗೊಳಿಸಿರುವ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸುತ್ತಿದೆ.

Vijaya Karnataka Web 4 Jul 2018, 5:00 am
ಮಡಿಕೇರಿ: ನಗರದ ಸುತ್ತಮುತ್ತ ಓಡಾಡುತ್ತ ಸಾರ್ವಜನಿಕರನ್ನು ಭಯಭೀತಗೊಳಿಸಿರುವ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸುತ್ತಿದೆ.
Vijaya Karnataka Web elephant drive operation
ಕಾಡಾನೆ ಅಟ್ಟುವ ಕಾರ್ಯಾಚರಣೆ


ನಗರದ ಇಬ್ನಿವಳವಾಡಿ, ಮೇಕೇರಿ ಹಾಗೂ ತಾಳತ್‌ಮನೆ ಪ್ರದೇಶದಲ್ಲಿ ಸಂಚರಿಸುತ್ತ ಹಲಸು, ಬಿದಿರು ತಿನ್ನುತ್ತಿರುವ ಕಾಡಾನೆಗಳಿಂದಾಗಿ ಜನರು ಆತಂಕಗೊಂಡಿದ್ದಾರೆ. ಇದೇ ಎರಡು ಆನೆಗಳು ಕೆಲ ಸಮಯದ ಹಿಂದೆ ನಗರದ ಮೈಸೂರು ಹೆದ್ದಾರಿಯ ಚೈನ್‌ಗೇಟ್‌ ಮುಖ್ಯರಸ್ತೆಯಲ್ಲಿ ಕಾಣಿಸಿಕೊಂಡಿತ್ತು. ಶಾಸಕ ಕೆ.ಜಿ.ಬೋಪಯ್ಯ ಅವರ ಮನೆಬಳಿಯೇ ಸುಳಿದಾಡಿತ್ತು. ನಂತರ ಮೂರು ದಿನಗಳ ಹಿಂದೆ ಇಬ್ನಿವಳವಾಡಿ ಬಳಿಯಲ್ಲಿ ನಿಲ್ಲಿಸಿದ ಆಟೊರಿಕ್ಷಾ ಮೇಲೆ ದಾಳಿ ನಡೆಸಿತ್ತು.

ಅರಣ್ಯ ಇಲಾಖೆಯ ಸುಮಾರು 24 ಮಂದಿ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಕಾಡಾನೆಗಳನ್ನು ಕಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುತ್ತಿದೆ. ಮಂಗಳವಾರ ಮೇಕೇರಿಯ ಶಾಂತಿ ಎಸ್ಟೇಟ್‌ ಬಳಿ ಬೀಡುಬಿಟ್ಟಿತ್ತು. ಒಮ್ಮೆ ಮುಖ್ಯರಸ್ತೆಗೆ ಬಂದ ಆನೆಗಳು ಮತ್ತೆ ತೋಟದೊಳಗೆ ಸೇರಿಕೊಂಡಿವೆ. ಸಂಜೆಯ ವೇಳೆ ಮಳೆ ಆರಂಭವದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಬುಧವಾರ ಮುಂದುವರಿಯಲಿದೆ.

ಈ ಆನೆಗಳನ್ನು ಕಡಗದಾಳು, ಮೋದೂರು ಮೂಲಕ ಕಾಡಿಗೆ ಅಟ್ಟುವ ಪ್ರಯತ್ನ ನಡೆಯುತ್ತಿದೆ. ಆದರೆ, ನಗರದ ಸುತ್ತಮುತ್ತವೇ ಸುಳಿದಾಡುತ್ತಿರುವ ಈ ಆನೆಗಳು ಕಾಡಿಗೆ ಹಿಂತಿರುಗದೆ ಓಡಾಡುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ