ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಶ್ರೀಮಂಗಲದ ಕಾಯಿಮಾನಿ ಎಂಬಲ್ಲಿ ಕಾಡಾನೆ ತುಳಿತಕ್ಕೆ ಕಾಫಿ ಬೆಳೆಗಾರ ಬಲಿಯಾಗಿದ್ದಾರೆ.
ಬೆಳಗ್ಗೆ 7 ಗಂಟೆ ಸಮಯದಲ್ಲಿ ಚೋಕಿರ ಸುಧ (42) ಎಂಬವರು ಅಂಗಡಿಗೆ ಹೋಗುವ ವೇಳೆ ಎದುರಾದ ಕಾಡಾನೆ ಅವರನ್ನು ತುಳಿದು ಸಾಯಿಸಿದೆ.
ಶ್ರೀಮಂಗಲ ಬಳಿ ಕಾಡಾನೆ ತುಳಿದು ಕಾಫಿ ಬೆಳೆಗಾರನ ಸಾವು ಪ್ರಕರಣಕ್ಕೆ ಅರಣ್ಯ ಇಲಾಖೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಹಿರಿಯ ಆಧಿಕಾರಿಗಳು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮೃತದೇಹವನ್ನು ತೆಗೆಯಲು ಬಿಡದೆ ಪ್ರತಿಭಟನೆ ನಡೆಸಿದರು. ಆನೆ ತುಳಿತಕ್ಕೆ ಸಾವಿಗೀಡಾದಾಗ ಹೆಚ್ಚು ಪರಿಹಾರ ನೀಡಬೇಕು, ಸಾಮಾನ್ಯ ಜನರು ವನ್ಯಪ್ರಾಣಿಗಳಿಂದ ಸಾವಿಗೀಡಾದಾಗ 1 ಕೋಟಿ ರೂ. ಪರಿಹಾರ ಮೊತ್ತ ನೀಡಬೇಕು, ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದರು.
ಸ್ಥಳೀಯ ಕೃಷಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.
ಬೆಳಗ್ಗೆ 7 ಗಂಟೆ ಸಮಯದಲ್ಲಿ ಚೋಕಿರ ಸುಧ (42) ಎಂಬವರು ಅಂಗಡಿಗೆ ಹೋಗುವ ವೇಳೆ ಎದುರಾದ ಕಾಡಾನೆ ಅವರನ್ನು ತುಳಿದು ಸಾಯಿಸಿದೆ.
ಶ್ರೀಮಂಗಲ ಬಳಿ ಕಾಡಾನೆ ತುಳಿದು ಕಾಫಿ ಬೆಳೆಗಾರನ ಸಾವು ಪ್ರಕರಣಕ್ಕೆ ಅರಣ್ಯ ಇಲಾಖೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆ ಹಿರಿಯ ಆಧಿಕಾರಿಗಳು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮೃತದೇಹವನ್ನು ತೆಗೆಯಲು ಬಿಡದೆ ಪ್ರತಿಭಟನೆ ನಡೆಸಿದರು. ಆನೆ ತುಳಿತಕ್ಕೆ ಸಾವಿಗೀಡಾದಾಗ ಹೆಚ್ಚು ಪರಿಹಾರ ನೀಡಬೇಕು, ಸಾಮಾನ್ಯ ಜನರು ವನ್ಯಪ್ರಾಣಿಗಳಿಂದ ಸಾವಿಗೀಡಾದಾಗ 1 ಕೋಟಿ ರೂ. ಪರಿಹಾರ ಮೊತ್ತ ನೀಡಬೇಕು, ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದರು.
ಸ್ಥಳೀಯ ಕೃಷಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.