ಆ್ಯಪ್ನಗರ

ಸೌಲಭ್ಯವಿದೆ, ಆದರೆ ವೈದ್ಯರೇ ಇಲ್ಲ

ಹೆಸರಿಗೆ ತಾಲೂಕು ಕೇಂದ್ರ ಆಸ್ಪತ್ರೆ. ನಿತ್ಯ 400ರಿಂದ 500 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ತಪಾಸಣೆ ಮಾಡಬೇಕಾದ ವೈದ್ಯರೇ ಇಲ್ಲ. ಕೋಟಿ ವೆಚ್ಚದ ಆಸ್ಪತ್ರೆಯಲ್ಲಿ ಕನಿಷ್ಠ ಸೇವೆ ಮಾಡುವ ವೈದ್ಯರ ಕೊರತೆ ಇದೆ.

Vijaya Karnataka 4 Mar 2019, 5:00 am
ತೇಲಪಂಡ ಕವನ್‌ ಕಾರ್ಯಪ್ಪ ಸೋಮವಾರಪೇಟೆ
Vijaya Karnataka Web facility available but no doctor
ಸೌಲಭ್ಯವಿದೆ, ಆದರೆ ವೈದ್ಯರೇ ಇಲ್ಲ


ಹೆಸರಿಗೆ ತಾಲೂಕು ಕೇಂದ್ರ ಆಸ್ಪತ್ರೆ. ನಿತ್ಯ 400ರಿಂದ 500 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ತಪಾಸಣೆ ಮಾಡಬೇಕಾದ ವೈದ್ಯರೇ ಇಲ್ಲ. ಕೋಟಿ ವೆಚ್ಚದ ಆಸ್ಪತ್ರೆಯಲ್ಲಿ ಕನಿಷ್ಠ ಸೇವೆ ಮಾಡುವ ವೈದ್ಯರ ಕೊರತೆ ಇದೆ.

ತಾಲೂಕು ಕೇಂದ್ರಕ್ಕೆ ಸುಮಾರು 58 ಗ್ರಾಮಗಳು ಸೇರುತ್ತವೆ. ಎಲ್ಲರೂ ಇಲ್ಲಿಯೇ ಚಿಕಿತ್ಸೆಯನ್ನು ಪಡೆಯಬೇಕು. ಅಪಘಾತ ಹಾಗೂ ತುರ್ತು ಸೇವಾ ಘಟಕ, ಡಯಾಲಿಸಿಸ್‌ ಸೇವೆ, ಹೆರಿಗೆ ವಿಭಾಗ, ಎಕ್ಸ್‌ ರೇ ಘಟಕ ಎಲ್ಲವೂ ಇದೆ. ವೈದ್ಯರಿಗೆ ಸುಸಜ್ಜಿತ ವಸತಿಗೃಹವೂ ನಿರ್ಮಾಣವಾಗಿದೆ. ಆಸ್ಪತ್ರೆಗೆ ಶಸ್ತ್ರಚಿಕಿತ್ಸಕರ ಹುದ್ದೆ ಹಲವು ತಿಂಗಳಿನಿಂದ ಖಾಲಿ ಉಳಿದಿದೆ.

ಖಾಲಿ ಖಾಲಿ: ಮೂಳೆ ತಜ್ಞರ ಹುದ್ದೆ ಹಲವು ತಿಂಗಳಿನಿಂದ ಖಾಲಿ ಇದೆ. ಸಣ್ಣಪುಟ್ಟ ಚಿಕಿತ್ಸೆಗೂ ಜಿಲ್ಲಾ ಕೇಂದ್ರ ಮಡಿಕೇರಿ ಅವಲಂಬಿಸಬೇಕಾಗಿದೆ. ಎನ್‌.ಆರ್‌.ಎಚ್‌.ಎಂ ಗುತ್ತಿಗೆ ಆಧಾರದ ಮೇಲೆ ನೇತ್ರ ತಜ್ಞರು, ರೇಡಿಯಾಲಜಿಸ್ಟ್‌ ಮತ್ತು ದಂತ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರವಳಿಕೆ ತಜ್ಞರು, ಜನರಲ್‌ ಮೆಡಿಸಿನ್‌ ವಿಭಾಗದ ವ್ಯೆದ್ಯರುಗಳೇ ಇಲ್ಲ. 11 ಹುದ್ದೆ ಮಂಜೂರು ಆಗಿದ್ದರೂ ಕೇವಲ ಐವರು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಉಳಿದ 6 ಹುದ್ದೆಗಳು ಖಾಲಿ ಇವೆ. ಡಿ ಗ್ರೂಪ್‌ ನೌಕರರ ಸಂಖ್ಯೆ 32 ಇರಬೇಕಾಗಿದ್ದು, ಕೇವಲ ಮೂವರು ಕಾಯಂ ನೌಕರರು ಮಾತ್ರ ಸೇವೆಯಲ್ಲಿ ಇದ್ದಾರೆ. ಉಳಿದ 29 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಾರದ ಎರಡು ದಿನ ಕೆಲಸ: ಇಲ್ಲಿನ ವ್ಯೆದ್ಯರೇ ಎರಡೆರಡು ದಿನ ನಿತ್ಯ 24 ಗಂಟೆ ಕೆಲಸ ಮಾಡುವ ಒಪ್ಪಂದ ಮಾಡಿಕೊಂಡಿರುವುದರಿಂದ ಎಲ್ಲ ವ್ಯೆದ್ಯರೂ ಎಲ್ಲ ರೋಗಿಗಳನ್ನು ತಪಾಸಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ವಾರದ ಎರಡು ದಿನ ಕೆಲಸ ಮಾಡಿ ಉಳಿದ ಐದು ದಿನ ತಮ್ಮ ಖಾಸಗಿ ಕ್ಲಿನಿಕ್‌ಗಳಲ್ಲಿ ಲಭ್ಯರಿರುತ್ತಾರೆ ಎಂಬುದು ಸಾರ್ವಜನಿಕರ ಆರೋಪ.

ಲಕ್ಷ ವೆಚ್ಚದ ಔಷಧಗಳು ಇದ್ದರೂ ಹೊರಗಿನ ಔಷಧಾಲಯಗಳಿಗೆ ಚೀಟಿ ಬರೆದು ಕೊಡುತ್ತಾರೆ. ಸಾಲದೆಂಬಂತೆ ಖರೀದಿಸಿದ ಔಷಧಗಳನ್ನು ಯಾವ ಔಷಧಾಲಯಗಳಿಂದ ಖರೀದಿಸಲಾಗಿದೆ ಎಂಬುದನ್ನು ತೋರಿಸಬೇಕು ಎಂದು ಆಜ್ಞೆ ಮಾಡುತ್ತಾರೆ ಎನ್ನುವುದು ಜನರ ಆರೋಪ. ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರವಿದ್ದರೂ ಇದರ ಬಗ್ಗೆ ಕೆಲವು ವೈದ್ಯರು ಶಿಫಾರಸು ಮಾಡುವ ಗೋಜಿಗೆ ಹೋಗುವುದಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸರಕಾರಕ್ಕೆ ವರದಿ ಮಾಡಲಾಗಿದೆ. ಶೀಘ್ರದಲ್ಲೇ ಮೂಳೆ ತಜ್ಞರು ನೇಮಕಗೊಳ್ಳಲಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲ ಸೇವೆಗಳು ಸಕಾಲದಲ್ಲಿ ದೊರೆಯುತ್ತಿದೆ. ವೈದ್ಯರಿಗೆ ಸುಸಜ್ಜಿತ ವಸತಿ ಗೃಹ ನಿರ್ಮಾಣಗೊಂಡಿದೆ.

-1.ಡಾ.ಶಿವಪ್ರಸಾದ್‌, ಪ್ರಭಾರ ಶಸ್ತ್ರ ಚಿಕಿತ್ಸಕರು, ಸೋಮವಾರಪೇಟೆ



ಇಲ್ಲಿ ನಾಯಿಕಚ್ಚಿದರೆ ನಾಲ್ಕು ಗಂಟೆ ಒಳಗೆ ಹೋಗಬೇಕು. ನಂತರ ಹೋದರೆ ಚಿಕಿತ್ಸೆ ದೊರಕುವುದಿಲ್ಲ. ಶುಶ್ರೂಷಕಿಯರು ಗದರಿಸುತ್ತಾರೆ. ಹಳೆಯ ಸಿಬ್ಬಂದಿ ಮತ್ತು ಹೊಸಬರ ನಡುವೆ ಹೊಂದಾಣಿಕೆ ಕೊರತೆ ಇದೆ. ಇದರಿಂದ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ.

-.ಎ.ಜೆ.ಅರ್ಪಿತಾ, ಸೋಮವಾರಪೇಟೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ