ಆ್ಯಪ್ನಗರ

ಅಡಕೆ ಕದಿಯಲು ಬಂದವ ಗುಂಡೇಟಿಗೆ ಬಲಿ

ಅಡಕೆ ಕಳವು ಮಾಡುತ್ತಿದ್ದ ವ್ಯಕ್ತಿ ಗುಂಡೇಟಿಗೆ ಬಲಿಯಾದ ಘಟನೆ ಕರಿಕೆ ಗ್ರಾಮದ ಎಳ್ಳುಕೊಚ್ಚಿಯಲ್ಲಿನಡೆದಿದೆ.

Vijaya Karnataka 31 Aug 2019, 5:00 am
ಮಡಿಕೇರಿ: ಅಡಕೆ ಕಳವು ಮಾಡುತ್ತಿದ್ದ ವ್ಯಕ್ತಿ ಗುಂಡೇಟಿಗೆ ಬಲಿಯಾದ ಘಟನೆ ಕರಿಕೆ ಗ್ರಾಮದ ಎಳ್ಳುಕೊಚ್ಚಿಯಲ್ಲಿನಡೆದಿದೆ.
Vijaya Karnataka Web fall victim to the shoot who came to steal areca
ಅಡಕೆ ಕದಿಯಲು ಬಂದವ ಗುಂಡೇಟಿಗೆ ಬಲಿ


ದೇವಂಗೋಡಿ ಗಣೇಶ ಗುಂಡೇಟಿಗೆ ಬಲಿಯಾದ ವ್ಯಕ್ತಿ. ಕರಿಕೆ ಗ್ರಾಮದ ಮಂದೋಡಿ ಹೊನ್ನಣ್ಣ ತನ್ನ ಮನೆಯ ಕೊಟ್ಟಿಗೆಯಲ್ಲಿದಾಸ್ತಾನು ಇರಿಸಿದ್ದ ಒಣ ಅಡಕೆ ಚೀಲಗಳು ಕೆಲವು ದಿನಗಳಿಂದ ಕಳವಾಗುತ್ತಿದ್ದ ಹಿನ್ನೆಲೆಯಲ್ಲಿ ಅಡಕೆ ದಾಸ್ತಾನು ಕೊಠಡಿಯ ಬಾಗಿಲಿಗೆ ಹಗ್ಗ ಕಟ್ಟಿ ತಾನು ಮಲಗುವ ಕೊಠಡಿಯ ಬಳಿ ಶಬ್ದ ಬರುವಂತೆ ವ್ಯವಸ್ಥೆ ಮಾಡಿದ್ದರು.

ಗುರುವಾರ ತಡರಾತ್ರಿ ಕಳ್ಳ ದಾಸ್ತಾನು ಕೊಠಡಿ ಬಾಗಿಲು ತೆರೆದಾಗ ಶಬ್ದವಾಗಿದ್ದು, ಹೊನ್ನಣ್ಣ ತಕ್ಷಣ ಹೊರ ಹೊರಬಂದು ನೋಡಿದಾಗ ಮುಸುಕುದಾರಿ ವ್ಯಕ್ತಿಯೊಬ್ಬ ಅಂಗಳದಲ್ಲಿಅಡಕೆ ಮೂಟೆ ಹೊತ್ತುಕೊಂಡು ಬರುವುದನ್ನು ಗಮನಿಸಿ ಗದರಿಸಿದ್ದಾರೆ. ಈ ವೇಳೆ ಕಳ್ಳ ಅಡಕೆ ಚೀಲ ಕೆಳಹಾಕಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಮಾಲೀಕನ ಮೇಲೆ ಹಲ್ಲೆಮಾಡಲು ಮುಂದಾಗಿದ್ದಾನೆ. ಈ ಸಂದರ್ಭ ಹೊನ್ನಣ್ಣ ತಮ್ಮ ಬಳಿಯಿದ್ದ ಲೈಸನ್ಸ್‌ ಹೊಂದಿದ ಬಂದೂಕಿನಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು, ಗುಂಡು ಮುಸುಕುಧಾರಿ ಗಣೇಶನ ಎಡ ತೊಡೆಗೆ ತಗುಲಿ ಸ್ಥಳದಲ್ಲಿಕುಸಿದು ಮೃತಪಟ್ಟಿದ್ದಾರೆ. ನಂತರ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿದಾಗ ಹಲವಾರು ಕಳವು ಪ್ರಕರಣಗಳಲ್ಲಿಭಾಗಿಯಾಗಿದ್ದ ದೇವಂಗೋಡಿ ಗಣೇಶ ಎಂದು ಗೊತ್ತಾಗಿದೆ. ಪೊಲೀಸರು ಹೊನ್ನಣ್ಣ ಹಾಗೂ ಗುಂಡು ಹಾರಿಸಿದ ಒಂಟಿ ನಳಿಕೆಯ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.

ಮೃತ ಗಣೇಶ್‌ ಕಳೆದ ಹಲವು ವರ್ಷಗಳಿಂದ ಗ್ರಾಮ ಸೇರಿದಂತೆ ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಠಾಣೆಯಲ್ಲಿಹಲವು ಕಳವು ಪ್ರಕರಣ ಎದುರಿಸುತ್ತಿದ್ದು, ಭಾಗಮಂಡಲ- ಪೊಲೀಸ್‌ ಠಾಣೆಯಲ್ಲಿನಾಲ್ಕು ಪ್ರಕರಣ, ಸುಳ್ಯ ಠಾಣೆಯಲ್ಲಿಎರಡು ಸೇರಿದಂತೆ ಕೇರಳ ರಾಜ್ಯದಲ್ಲಿಕೂಡ ಪ್ರಕರಣ ದಾಖಲಾಗಿರುವುದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪನ್ನೆಕರ್‌ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲಾಸ್ಪತ್ರೆಯಲ್ಲಿಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

------------

ಕಳ್ಳರಿಗೆ ಎಚ್ಚರಿಕೆ ಗಂಟೆ

ಕಳ್ಳ ಬಂದರೆ ತಿಳಿಯಲಿ ಎಂಬ ಉದ್ದೇಶದಿಂದ ಅಡಕೆ ದಾಸ್ತಾನು ಮಾಡಿದ್ದ ಕೊಠಡಿಯಿಂದ ಮಲಗುವ ಕೋಣೆಗೆ ಶಬ್ದ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದರಿಂದಲೇ ಹೊನ್ನಣ್ಣ ಅವರಿಗೆ ಕಳ್ಳ ಬಂದಿದ್ದು ಗೊತ್ತಾಗಿದೆ. ಈ ವೇಳೆ ತನ್ನ ಆತ್ಮರಕ್ಷಣೆಗಾಗಿ ಹೊನ್ನಣ್ಣ ಗುಂಡು ಹಾರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ