ಹಣ ಕೇಳಿದ್ದಕ್ಕೆ ಕ್ಯಾಂಟೀನ್ ನೌಕರರ ಮೇಲೆ ಗುಂಡಿನ ದಾಳಿ
ಎಗ್ ರೋಲ್ ಪಡೆದ ಆರೋಪಿಗಳು ಗೋಬಿ ನೀಡುವಂತೆ ಕೇಳಿದಾಗ ಕ್ಯಾಂಟೀನ್ ಯುವಕರು ಹಣ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಮೂರು ಬಾರಿ ಗುಂಡು ಹಾರಿಸಿದ್ದಾರೆ.
Vijaya Karnataka Web 19 Oct 2018, 11:56 am
ಮಡಿಕೇರಿ: ತಿಂಡಿ ಕೊಂಡು ಹಣ ನೀಡದ್ದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಂಟೀನ್ ನೌಕರರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.
ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಲೋಕೇಶ್ ಮತ್ತು ಅಕ್ರಂ ಎಂಬುವವರು ರಿಯಾಝ್ (31), ಸಮೀಮ್ (24)ಮೇಲೆ ದಾಳಿ ನಡೆಸಿದ್ದಾರೆ.
ಎಗ್ ರೋಲ್ ಪಡೆದ ಆರೋಪಿಗಳು ಗೋಬಿ ನೀಡುವಂತೆ ಕೇಳಿದಾಗ ಕ್ಯಾಂಟೀನ್ ಯುವಕರು ಹಣ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಅಲ್ಲಿಂದ ಹೊರ ಹೋಗಿ ಪಕ್ಕದಲ್ಲಿದ್ದ ಬಾರ್ ಕಿಟಕಿಯಿಂದ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ರಿಯಾಝ್ ತೊಡೆಗೆ ಮತ್ತು ಸಮೀಮ್ ಕಾಲಿಗೆ ಗಾಯವಾಗಿದ್ದು ಅವರಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳಲ್ಲೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ ಗನ್ ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿ ಕ್ಯಾಮರಾ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಲೊಬ್ಬನಾದ ಲೋಕೇಶ್ ಒಂದು ತಿಂಗಳ ಹಿಂದೆ ಅಬ್ಬಿ ಜಲಪಾತಕ್ಕೆ ತೆರಳುವ ರಸ್ತೆಯಲ್ಲಿ ಅಪರಿಚಿತರ ಮನೆಗೆ ಗುಂಡು ಹಾರಿಸಿ ಸೆರೆವಾಸದಲ್ಲಿದ್ದ ಎಂದು ತಿಳಿದುಬಂದಿದೆ.
ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಲೋಕೇಶ್ ಮತ್ತು ಅಕ್ರಂ ಎಂಬುವವರು ರಿಯಾಝ್ (31), ಸಮೀಮ್ (24)ಮೇಲೆ ದಾಳಿ ನಡೆಸಿದ್ದಾರೆ.
ಎಗ್ ರೋಲ್ ಪಡೆದ ಆರೋಪಿಗಳು ಗೋಬಿ ನೀಡುವಂತೆ ಕೇಳಿದಾಗ ಕ್ಯಾಂಟೀನ್ ಯುವಕರು ಹಣ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಅಲ್ಲಿಂದ ಹೊರ ಹೋಗಿ ಪಕ್ಕದಲ್ಲಿದ್ದ ಬಾರ್ ಕಿಟಕಿಯಿಂದ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ರಿಯಾಝ್ ತೊಡೆಗೆ ಮತ್ತು ಸಮೀಮ್ ಕಾಲಿಗೆ ಗಾಯವಾಗಿದ್ದು ಅವರಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳಲ್ಲೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ ಗನ್ ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿ ಕ್ಯಾಮರಾ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಲೊಬ್ಬನಾದ ಲೋಕೇಶ್ ಒಂದು ತಿಂಗಳ ಹಿಂದೆ ಅಬ್ಬಿ ಜಲಪಾತಕ್ಕೆ ತೆರಳುವ ರಸ್ತೆಯಲ್ಲಿ ಅಪರಿಚಿತರ ಮನೆಗೆ ಗುಂಡು ಹಾರಿಸಿ ಸೆರೆವಾಸದಲ್ಲಿದ್ದ ಎಂದು ತಿಳಿದುಬಂದಿದೆ.