ಆ್ಯಪ್ನಗರ

ಸ್ಮಶಾನ ಸಮಸ್ಯೆ ಬಗೆಹರಿಸಿ

ಸಿದ್ದಾಪುರ: ತೋಟಗಾರಿಕೆ ಇಲಾಖೆಯಿಂದ ಹಣ ಪಡೆದು ಪ್ರಯೋಜನಕ್ಕೆ ಬಾರದ ಗಿಡಗಳನ್ನು ನೀಡಲಾಗುತ್ತಿದೆ ಎಂದು ಗ್ರಾಪಂ ಸದಸ್ಯರು ಆರೋಪಿಸಿದರು.

ವಿಕ ಸುದ್ದಿಲೋಕ 2 Sep 2016, 4:02 am

ಮರಗೋಡು ಗ್ರಾಮ ಪಂಚಾಯಿತಿ ಗ್ರಾಮ ಸಭೆ

ಸಿದ್ದಾಪುರ: ತೋಟಗಾರಿಕೆ ಇಲಾಖೆಯಿಂದ ಹಣ ಪಡೆದು ಪ್ರಯೋಜನಕ್ಕೆ ಬಾರದ ಗಿಡಗಳನ್ನು ನೀಡಲಾಗುತ್ತಿದೆ ಎಂದು ಗ್ರಾಪಂ ಸದಸ್ಯರು ಆರೋಪಿಸಿದರು.

ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್‌ ಅಧ್ಯಕ್ಷ ತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಕೆಲ ಸದಸ್ಯರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ರೈತರಿಂದ ಹಣ ಪಡೆದು ಪ್ರಯೋಜನಕ್ಕೆ ಬಾರದ ಗಿಡಗಳನ್ನು ತೋಟಗಾರಿಕೆ ಇಲಾಖೆ ವಿತರಿಸುತ್ತಿದೆ. ಅದೇ ಹಣ ಪಾವತಿ ಮಾಡಿ ಖಾಸಗಿ ನರ್ಸರಿಯಿಂದ ಗುಣ ಮಟ್ಟದ ಸಸಿಗಳನ್ನು ಪಡೆದುಕೊಳ್ಳುತ್ತೇವೆ. ಇಲಾಖೆಯಿಂದ ರೈತರಿಗೆ ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದರು.

ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಸರಕಾರಿ ಜಾಗಗಳು ಒತ್ತುವರಿಯಾಗಿದೆ. ವಿಷಯದ ಕುರಿತು ಕಡತಗಳನ್ನು ಅಧಿಕಾರಿಗಳಿಗೆ ನೀಡಿದ್ದರೂ, ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ರುದ್ರಭೂಮಿಗೂ ಸ್ಥಳದ ಕೊರತೆ ಎದುರಾಗಿದೆ. ನಿವೇಶನ ರಹಿತರು ಬಹಳಷ್ಟಿದ್ದು, ಇಲಾಖೆ ಯಾವುದೆ ಕ್ರಮ ಕೈಗೊಳ್ಳುತ್ತಿಲವೆಂದು ಸಭೆಯ ಅಧ್ಯಕ್ಷ ಬಿದ್ರುಪಣೆ ಮೋಹನ್‌ ಗ್ರಾಮ ಲೆಕ್ಕಿಗ ರುದ್ರೇಶ್‌ರನ್ನು ತರಾಟೆಗೆ ತೆಗೆದುಕೊಂಡರು.

ಮಳೆಗಾಲದಲ್ಲಿ ಈ ಭಾಗದಿಂದ ಭಾರಿ ವಾಹನಗಳಲ್ಲಿ ಮರಗಳ ನಾಟಗಳನ್ನು ಸಾಗಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ಮಟ್ಟದ ರಸ್ತೆಗಳು ಹಾಳಾಗುತ್ತಿದೆ. ಅಧಿಕಾರಿಗಳು ವ್ಯಾಪಾರಿಗಳಿಗೆ ಅನುಕೂಲ ಮಾಡುವ ದೃಷ್ಟಿಯಲ್ಲಿ, ಗ್ರಾಮದ ಅಬಿವೃದ್ಧಿ ಹಾಳಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕಾದ ಅರಣ್ಯ ಇಲಾಖೆ ನಿರ್ಲಕ್ಷ ್ಯವಹಿಸಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗೆ ಒತ್ತಾಯಿಸಿದರು.

ವಸತಿ ಯೋಜನೆ ಜಾರಿಯಾದರು ವಸತಿ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಮರಳಿನ ಸಮಸ್ಯೆ ಅಧಿಕವಾಗಿದೆ. ಕಾಳ ಸಂತೆಯಿಂದ ಮರಳುಕೊಂಡು ಮನೆ ನಿರ್ಮಿಸಿಲು ಸಾಧ್ಯವಾಗುತ್ತಿಲ್ಲ. ಆಡಳಿತ ಮಂಡಳಿ ಮರಳಿನ ಬಗ್ಗೆ ಗಮನ ಹರಿಸಬೇಕು ಎಂದು ಫಲಾನುಭವಿಗಳು ದೂರಿದರು. ಮರಳಿನ ಕುರಿತು ಕೆಲವೊಂದು ಜಾಗವನ್ನು ಗುರುತಿಸಿ, ಪಂಚಾಯಿತಿ ಮೂಲಕ ಗಣಿ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇಲಾಖೆಯಿಂದ ಮುಂದಿನ ಆದೇಶಕ್ಕಾಗಿ ಕಾಯುತ್ತಿರುವುದಾಗಿ ಸಭೆಯ ಅಧ್ಯಕ್ಷ ಹೇಳಿದರು.

ತಾಪಂ ಇಒ ಜೀವನ್‌, ಪಿಡಿಒ ಆಶಾ ಕುಮಾರಿ ನಾನಾ ಇಲಾಖೆ ಅಧಿಕಾರಿಗಳು, ಕೆಡಿಪಿ ಸದಸ್ಯ ಪಾಪು ಸಣ್ಣಯ್ಯ, ತಾಲೂಕು ಪಂಚಾಯಿತಿ ಸದಸ್ಯ ರವಿಂದ್ರ ಬಿ.ವೈ, ಪಂಚಾಯಿತಿ ಉಪಾಧ್ಯಕ್ಷೆ ಗಂಗಾ, ಮೂಡೊಂಡಿ ನಂದಾ ನಾಣಯ್ಯ, ಬಾಳಗಜ್ಜೆ ಯೋಗೇಂದ್ರ, ಗೌರಮ್ಮ, ಐಮಂಡ ರೇಶ್ಮ, ದಮಯಂತಿ, ಸುರೇಶ್‌, ಬೋಜಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ