ಆ್ಯಪ್ನಗರ

ಕೊಡವ ಸಾಂಸ್ಕೃತಿಕ, ಜಾನಪದ ಕಲೆ ತರಬೇತಿಗೆ ಚಾಲನೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬಿರುನಾಣಿ ಮಹಿಳಾ ಸಮಾಜದ ಜಂಟಿ ಆಶ್ರಯದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಕೊಡವ ಸಾಂಸ್ಕೃತಿಕ-ಜಾನಪದ ಕಲೆ ತರಬೇತಿ ಶಿಬಿರವನ್ನು ಅಕಾಡೆಮಿ ಸದಸ್ಯ ಅಣ್ಣೀರ ಹರೀಶ್ ಮಾದಪ್ಪ ಉದ್ಘಾಟಿಸಿದರು.

ವಿಕ ಸುದ್ದಿಲೋಕ 3 Mar 2016, 4:48 am
ಶ್ರೀಮಂಗಲ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬಿರುನಾಣಿ ಮಹಿಳಾ ಸಮಾಜದ ಜಂಟಿ ಆಶ್ರಯದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಕೊಡವ ಸಾಂಸ್ಕೃತಿಕ-ಜಾನಪದ ಕಲೆ ತರಬೇತಿ ಶಿಬಿರವನ್ನು ಅಕಾಡೆಮಿ ಸದಸ್ಯ ಅಣ್ಣೀರ ಹರೀಶ್ ಮಾದಪ್ಪ ಉದ್ಘಾಟಿಸಿದರು.
Vijaya Karnataka Web flat cultural folk art training inaguration
ಕೊಡವ ಸಾಂಸ್ಕೃತಿಕ, ಜಾನಪದ ಕಲೆ ತರಬೇತಿಗೆ ಚಾಲನೆ

ನಂತರ ಮಾತನಾಡಿದ ಅವರು, ಕರ್ನಾಟಕ ಕೊಡವ ಸಾಹಿತ್ಯಕಾಡೆಮಿ ವತಿಯಿಂದ ಕೊಡವ ಸಾಂಸ್ಕೃತಿಕ ಜಾನಪದ ಕಲೆ ತರಬೇತಿ ಯೋಜನೆಯಾದ ಆಟ್ ಪಾಟ್ ಪಡಿಪು ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಸಾರ್ವಜನಿಕರು, ಸಂಘ ಸಂಸ್ಥೆಗಳ ಮೂಲಕ ಕಲಿಯುವ ಉತ್ಸಾಹ ತೋರುತ್ತಿದ್ದು ಈ ಬಗ್ಗೆ ಬರುವ ಮನವಿಗಳನ್ನು ಪರಿಗಣಿಸಿ ಅಕಾಡೆಮಿ ವತಿಯಿಂದ ಇಂತಹ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದು ಕಲಿಕೆಗೆ ವೇದಿಕೆ ಸೃಷ್ಟಿಸುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಬಿರುನಾಣಿ ಮಹಿಳಾ ಸಮಾಜದ ಅಧ್ಯಕ್ಷೆ ಬುಟ್ಟಿಯಂಡ ಲೀನಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಿರುನಾಣಿ ಕೊಡವ ಸಮಾಜದ ಕಾರ್ಯದರ್ಶಿ ಗುಡ್ಡಮಾಡ ಶಂಭು ಚಂಗಪ್ಪ, ತರಬೇತಿದಾರರಾದ ಚೀಯಬೆರ ವೀಣಾ ಸೋಮಯ್ಯ, ಚಂಙಣಮಾಡ ಬೋಪಣ್ಣ, ಗ್ರಾ.ಪಂ.ಸದಸ್ಯ ಕುಪ್ಪಣಮಾಡ ಬೇಬಿ, ಕರ್ತಮಾಡ ವಿನೋದ್, ಬುಟ್ಟಿಯಂಡ ಸುನಿತ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ