ಆ್ಯಪ್ನಗರ

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅವಶ್ಯಕ

ಮಕ್ಕಳಿಗೆ ಶಿಕ್ಷ ಣ ಕೊಡಿಸುವ ಮೂಲಕ ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡುವ ಕೆಲಸವನ್ನು ಪೊಷಕರು ಮಾಡಬೇಕಾಗಿದೆ ಎಂದು ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷ ನಿರ್ಮಾಲಾನಂದ ಸ್ವಾಮೀಜಿ ಹೇಳಿದರು.

Vijaya Karnataka 12 Dec 2018, 4:24 pm
ಶನಿವಾರಸಂತೆ: ಮಕ್ಕಳಿಗೆ ಶಿಕ್ಷ ಣ ಕೊಡಿಸುವ ಮೂಲಕ ಮಕ್ಕಳನ್ನು ಜ್ಞಾನಿಗಳನ್ನಾಗಿ ಮಾಡುವ ಕೆಲಸವನ್ನು ಪೊಷಕರು ಮಾಡಬೇಕಾಗಿದೆ ಎಂದು ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷ ನಿರ್ಮಾಲಾನಂದ ಸ್ವಾಮೀಜಿ ಹೇಳಿದರು.
Vijaya Karnataka Web MDK-MDK 11 ss 1 shambunata svami mathu


ಹೊಸೂರು ಬೆಟ್ಟದ ಬಸವೇಶ್ವರ ದೇವಾಲಯದಲ್ಲಿ ನಡೆದ ಕೌಟೆಕಾಯಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.

ಉತ್ತಮ ಸಮಾಜ ನಿರ್ಮಾಣ ಮತ್ತು ದೇಶಕ್ಕೆ ಶಕ್ತಿ ಬರಬೇಕಾದರೆ ಎಲ್ಲರಿಗೂ ಶಿಕ್ಷ ಣ ಅವಶ್ಯಕ. ಈ ನಿಟ್ಟಿನಲ್ಲಿ ಎಲ್ಲರೂ ಶಿಕ್ಷ ಣವಂತರಾಗಿ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸುವುದೇ ಇಂದಿನ ಮಕ್ಕಳು ಎಂದರು.

ಪವಿತ್ರವಾದ ದೇವಾಲಯ ಹಾಗೂ ಜಾತ್ರೋತ್ಸವಗಳು ಮಾನವನ ಅವಿಭಾಜ್ಯ ಅಂಗಗಳಾಗಿವೆ. ದೇವಾಲಯಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಶ್ರದ್ಧಾಭಕ್ತಿಯಿಂದ ಬೇಡಿಕೊಂಡರೆ ಮಾತ್ರ ದೇವರು ಎಲ್ಲರಿಗೂ ಒಲಿಯಲು ಸಾಧ್ಯ. ಬದುಕೆಂಬ ಜಾತ್ರೆಯಲ್ಲಿ ನಾವೆಲ್ಲರೂ ಸಮಯವನ್ನು ಹಾಳು ಮಾಡದೆ ಧರ್ಮ ಪರಿಪಾಲನೆ ಮಾಡಬೇಕಿದೆ.

ಮನಸ್ಸಿನ ಕೊಳೆಯನ್ನು ತೊಳೆಯಲು ದೇವಾಲಯಗಳು, ಜಾತ್ರೆಗಳು ಅವಶ್ಯಕವಾಗಿದೆ ಎಂದು ಹೇಳಿದರು.

ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಬುನಾಥ ಸ್ವಾಮೀಜಿ, ಕಾಫಿ ಬೆಳೆಗಾರರಾದ ಆರ್‌.ಪಿ. ಲಕ್ಷ ್ಮಣ್‌, ಜೆಸಿಐ ಸ್ಥಾಪಕ ಅಧ್ಯಕ್ಷ ಎಚ್‌.ಕೆ. ರಮೇಶ್‌, ಜೆಸಿಐ ಅಧ್ಯಕ್ಷ ಎಚ್‌.ಕೆ ಅಶ್ವತ್ಥ್‌ ಹಾಜರಿದ್ದರು.

ಇದೇ ಸಂದರ್ಭ ಬೆಂಗಳೂರಿನ ಉದ್ಯಮಿ ಜಾಗಟೆ ಶಿವಕುಮಾರ್‌, ಹಾಸನ ನಾಡ ಸಹ್ಯಾದ್ರಿ ಪತಿಕೆಯ ಸಂಪಾದಕ ಗೋಪಾಲ್‌ ಬಾಳ್ಳು ಹಾಗೂ ಹಾಸನ ಮಲೆನಾಡು ತಾಂತ್ರಿಕ ಮಹಾ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಯೋಗೇಂದ್ರ ಅವರನ್ನು ಬೆಟ್ಟದ ಬಸವೇಶ್ವರ ದೇವಾಲಯ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ಜಾತ್ರೆ ಪ್ರಯುಕ್ತ ಶಾಲಾ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ