ಆ್ಯಪ್ನಗರ

ಗೌಡ ಫುಟ್ಬಾಲ್‌: ಕಟ್ಟೆಮನೆ ಚಾಂಪಿಯನ್‌

ಗೌಡ ಕುಟುಂಬಗಳ ನಡುವೆ ಮರಗೋಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಗೌಡ ಫುಟ್ಬಾಲ್‌ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ 3ನೇ ವರ್ಷದ ಗೌಡ ಫುಟ್ಬಾಲ್‌ ಕ್ರೀಡಾಕೂಟದ ಚಾಂಪಿಯನ್‌ ತಂಡವಾಗಿ ಕಟ್ಟೆಮನೆ ತಂಡ ಹೊರಹೊಮ್ಮಿದೆ.

Vijaya Karnataka 28 May 2018, 5:00 am
ಮಡಿಕೇರಿ: ಗೌಡ ಕುಟುಂಬಗಳ ನಡುವೆ ಮರಗೋಡಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡಗು ಗೌಡ ಫುಟ್ಬಾಲ್‌ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ 3ನೇ ವರ್ಷದ ಗೌಡ ಫುಟ್ಬಾಲ್‌ ಕ್ರೀಡಾಕೂಟದ ಚಾಂಪಿಯನ್‌ ತಂಡವಾಗಿ ಕಟ್ಟೆಮನೆ ತಂಡ ಹೊರಹೊಮ್ಮಿದೆ.
Vijaya Karnataka Web gowda football sportsmeet
ಗೌಡ ಫುಟ್ಬಾಲ್‌: ಕಟ್ಟೆಮನೆ ಚಾಂಪಿಯನ್‌


ಭಾನುವಾರ ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಕಾಂಗೀರ ತಂಡ ಕಟ್ಟೆಮನೆ ತಂಡವನ್ನು ಎದುರಿಸಿತು. ಉತ್ತಮ ಪ್ರದರ್ಶನ ತೋರಿದ ಕಟ್ಟೆಮನೆ ತಂಡ ಎದುರಾಳಿ ತಂಡಕ್ಕೆ ಗೋಲುಗಳಿಸಲು ಯಾವುದೇ ಅವಕಾಶ ನೀಡಲಿಲ್ಲ. ಕಟ್ಟೆಮನೆ ತಂಡದ ಪರ ಪ್ರೀತಮ್‌ 3 ಗೋಲುಗಳಿಸುದರ ಮೂಲಕ ಕಟ್ಟೆಮನೆ ತಂಡ ವಿಜಯ ಪತಾಕೆ ಹಾರಿಸಿತು.

ಎರಡನೇ ಸೆಮಿ ಫೈನಲ್‌ನಲ್ಲಿ ಬಡುವಂಡ್ರ ತಂಡ ಪೊನ್ನಚ್ಚನ ತಂಡವನ್ನು ಎದುರಿಸಿತು. ಪೊನ್ನಚ್ಚನ ತಂಡ 1-0 ಅಂತರದಲ್ಲಿ ಜಯ ಸಾಧಿಸಿತು. ತಂಡದ ಪರ ಶ್ರೀನಿವಾಸ್‌ 1 ಗೋಲು ದಾಖಲಿಸಿದರು.

ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಕಾಂಗೀರ ತಂಡ ಬಡುವಂಡ್ರ ತಂಡವನ್ನು ಎದುರಿಸಿತು. ಬಡುವಂಡ್ರ ತಂಡ 2-0ಗೋಲುಗಳಿಂದ ಜಯ ಸಾಧಿಸಿ, ಮೂರನೇ ಸ್ಥಾನ ಪಡೆದರೆ, ಕಾಂಗೀರ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಬಡುವಂಡ್ರ ಸುಜಯ್‌ 2 ಗೋಲು ದಾಖಲಿಸಿದರು.

ಅಂತಿಮವಾಗಿ ನಡೆದ ಕಟ್ಟೆಮನೆ ಹಾಗೂ ಪೊನ್ನಚ್ಚನ ನಡುವಿನ ಫೈನಲ್‌ ಹಣಾಹಣಿಯಲ್ಲಿ ಕಟ್ಟೆಮನೆ ತಂಡ 4-2 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಕಟ್ಟೆಮನೆ ತಂಡದ ಪರ ಅಭಿ 1, ಪ್ರೀತಮ್‌ 3 ಗೋಲು ದಾಖಲಿಸಿದರು. ಬಡುವಂಡ್ರ ತಂಡದ ಪರ ಪ್ರಶಾಂತ್‌ ಹಾಗೂ ಮಹೇಶ್‌ ತಲಾ ಒಂದೊಂದು ಗೋಲು ದಾಖಲಿಸಿದರು.

ಅತ್ಯುತ್ತಮ ತಂಡ -ಕಡ್ಯದ

ಅತ್ಯುತ್ತಮ ಆಟಗಾರ - ಕಟ್ಟೆಮನೆ ಅಭ್ಯುದ್‌

ಅತ್ಯುತ್ತಮ ಗೋಲ್‌ ಕೀಪರ್‌ - ಬಡುವಂಡ್ರ ಯಶ್ವಿನ್‌

ಅತ್ಯುತ್ತಮ ಡಿಫೆಂಡರ್‌ - ಪೊನ್ನಚ್ಚನ ನಿಶಾಂತ್‌

ಅತ್ಯಧಿಕ ಗೋಲ್‌ ಸ್ಕೋರರ್‌ - ಕಟ್ಟೆಮನೆ ಪ್ರೀತಮ್‌

ಉತ್ತಮ ಮಹಿಳಾ ಆಟಗಾರ್ತಿ - ಚೆರಿಯಮನೆ ಕುಮುದ

ಸಮಾರೋಪ: ಕೊಡಗು ಗೌಡ ಫುಟ್ಬಾಲ್‌ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ 3ನೇ ವರ್ಷದ ಗೌಡ ಫುಟ್ಬಾಲ್‌ ಕ್ರೀಡಾಕೂಟದ ಸಮಾರೋಪ ಸಮಾರಂಭ ಗೌಡ ಫುಟ್ಬಾಲ್‌ ಅಕಾಡೆಮಿ ಸಂಸ್ಥಾಪಕ ಕಟ್ಟೆಮನೆ ರಾಕೇಶ್‌ ಅಧ್ಯಕ್ಷ ತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜಸೇವಕ ಅನಂತರಾಜ ಗೌಡ ಮಾತನಾಡಿ, ಅರೆಭಾಷೆ ಜನಾಂಗದ ನಡುವೆ ನಡೆದ ಫುಟ್ಭಾಲ್‌ ಟ್ರೋಫಿ ಹೆಮ್ಮೆಪಡುವಂತದ್ದು. ಇಂತಹ ಕ್ರೀಡಾಕೂಟದಿಂದ ಜನಾಂಗದಲ್ಲಿ ಪರಸ್ಪರ ಒಗ್ಗಟ್ಟು ಸಾಧ್ಯವೆಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಕೀಲ ಯಾಲದಾಳು ಮನೋಜ್‌ ಬೋಪಯ್ಯ ಮಾತನಾಡಿ, ಗೌಡ ಸಮುದಾಯ ಇನಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಜನಾಂಗ ಬಾಂಧವರು ಎಲ್ಲ ಕ್ಷೇತ್ರದಲ್ಲೂ ಮುಂದುವರೆಯಬೇಕು. ಉತ್ತಮ ಸಾಧನೆಯೊಂದಿಗೆ ದೇಶ ವಿದೇಶಗಳಲ್ಲಿ ಗೌಡ ಜನಾಂಗದವರು ಹೆಸರು ಗಳಿಸಬೇಕು ಎಂದು ಕಿವಿ ಮಾತು ಹೇಳಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಮರಗೋಡಿನಲ್ಲಿ ನಡೆದ ಪುಟ್ಬಾಲ್‌ ಪಂದ್ಯಾಟ ಉತ್ತಮವಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಅಕಾಡೆಮಿ ಉತ್ತಮ ಹೆಸರುಗಳಿಸುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೈಗಾರಿಕ ಮತ್ತು ವಾಣಿಜ್ಯೋದ್ಯಮಿ ಸಂಘದ ಅಧ್ಯಕ್ಷ ಅಂಬೇಕಲ್‌ ನವೀನ್‌, ಪ್ರಮುಖರಾದ ಚೆರಿಮನೆ ರತ್ನಕುಮಾರ್‌, ಪಾಣತ್ತಲೆ ಜಗದೀಶ್‌ ಮಂದಪ್ಪ, ಕಡ್ಲೇರ ತುಳಸಿ ಮೋಹನ್‌, ಮಂದ್ರೀರ ಮೋಹನ್‌ದಾಸ್‌ ಸೇರಿದಂತೆ ಇತರ ಗಣ್ಯರು ಇದ್ದರು.

3ನೇ ವರ್ಷದ ಗೌಡ ಫುಟ್ಬಾಲ್‌ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಕಟ್ಟೆಮನೆ ತಂಡಕ್ಕೆ 30,000 ರೂ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಪೊನ್ನಚ್ಚನ ತಂಡಕ್ಕೆ 20000 ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ಬಡುವಂಡ್ರ ತಂಡಕ್ಕೆ 10000 ರೂ ನಗದು ಹಾಗೂ ಆಕರ್ಷಕ ಟ್ರೋಫಿ, ಚತುರ್ಥ ಸ್ಥಾನ ಪಡೆದ ಕಾಂಗೀರ ತಂಡಕ್ಕೆ 5000 ರೂ ನೀಡಿ ಗೌರವಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ